nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ

    May 19, 2025

    ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್

    May 19, 2025

    ಬೀದರ್‌: ಗುಡುಗು ಸಹಿತ ಭಾರೀ ಮಳೆ

    May 19, 2025
    Facebook Twitter Instagram
    ಟ್ರೆಂಡಿಂಗ್
    • ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ
    • ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್
    • ಬೀದರ್‌: ಗುಡುಗು ಸಹಿತ ಭಾರೀ ಮಳೆ
    • ಎಫ್‌ ಎಸ್‌ ಟಿಪಿ ಘಟಕ ಸ್ಥಾಪನೆಗೆ ಸಾರ್ವಜನಿಕರ ವಿರೋಧ: ಕಂದಾಯ ಇಲಾಖೆಯಿಂದ ಹದ್ದುಬಸ್ತು ಕಾರ್ಯ ಯಶಸ್ವಿ
    • ಸಂತಪೂರ ಪೊಲೀಸ್ ಠಾಣೆ: ಅಪಘಾತ ತಡೆಗಟ್ಟಲು ಬ್ಯಾರಿಕೇಡ್ ಅಳವಡಿಕೆ
    • ಆಂಧ್ರಪ್ರದೇಶ ಕರ್ನೂಲ್ ಬಳಿ ಭೀಕರ ಅಪಘಾತ: ತುಮಕೂರು ಮೂಲದ ಮೂವರು ಸಾವು
    • ಅಲ್ಪಾವಧಿಯಲ್ಲಿ ವೃತ್ತಿ ಜೀವನ ನಡೆಸಲು ಡಿಪ್ಲೋಮಾ ಕೋರ್ಸುಗಳು ಉಪಯುಕ್ತ: ಜಯಪ್ರಕಾಶ್ ಜೆ.ಕೆ.
    • ನರೇಗಾ ಯೋಜನೆ: ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಲೆಮಾರಿ ಕಾರ್ಮಿಕರಿಂದ ಚುನಾವಣೆ ಬಹಿಷ್ಕಾರ | ಸೌಲಭ್ಯ ನೀಡದೇ ನಮ್ಮ ಓಟು ನೀಡೆವು ಘೋಷಣೆ
    Uncategorized April 23, 2024

    ಅಲೆಮಾರಿ ಕಾರ್ಮಿಕರಿಂದ ಚುನಾವಣೆ ಬಹಿಷ್ಕಾರ | ಸೌಲಭ್ಯ ನೀಡದೇ ನಮ್ಮ ಓಟು ನೀಡೆವು ಘೋಷಣೆ

    By adminApril 23, 2024No Comments2 Mins Read
    alemari

    ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.

    ಕೊರಟಗೆರೆ : ಜನನಾಯಕರೇ–ಅಧಿಕಾರಿಗಳೇ ನಮ್ಮ ಓಟು ಮಾತ್ರ ನಿಮಗೇ ಸಾಕಾ ನಮಗೇ ಸೌಲಭ್ಯ ಬೇಡವೇ.. ನಮ್ಮ ಕುಟುಂಬಕ್ಕೆ ಮೂಲಭೂತ ಸೌಲಭ್ಯ ನೀಡದೇ ನಮ್ಮ ಓಟು ನಿಮಗೇ ನೀಡೆವು..  ಎಂದು  ಐ.ಕೆ.ಕಾಲೋನಿಯ 20ಕ್ಕೂ ಅಧಿಕ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳು ಅಳವತ್ತುಕೊಂಡಿವೆ.


    Provided by

    ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ 25ವರ್ಷದಿಂದ ವಾಸವಿರುವ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳಿಗೆ ಮೂಲಭೂತ ಸೌಲಭ್ಯವೇ ಮರೀಚಿಕೆಯಾಗಿದೆ. ಹಗಲಿನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಸಮಸ್ಯೆಯಾದ್ರೇ,  ರಾತ್ರಿವೇಳೆ ಬೆಳಕಿಲ್ಲದೇ ಕಾಡುಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.

    ಐ.ಕೆ.ಕಾಲೋನಿಯ ಪಿಡ್ಲ್ಯೂಡಿ ಕಚೇರಿ ಆವರಣದಲ್ಲೇ 25 ವರ್ಷದಿಂದ ಅಲೆಮಾರಿ ಕಾರ್ಮಿಕರು ವಾಸವಿದ್ರು. ಆದರೆ ಕಳೆದ 4 ತಿಂಗಳ ಹಿಂದೇ ಪಿಡ್ಲ್ಯೂಡಿ ಅಧಿಕಾರಿವರ್ಗ ಮತ್ತು ಸ್ಥಳೀಯ ಗ್ರಾ.ಪಂ. ಸದಸ್ಯರ ತಂಡ 20ಕುಟುಂಬವನ್ನು ಮನವೊಲಿಸಿ ಬೇಟ್ಟದಲ್ಲಿ ನಿವೇಶನ ಮಂಜೂರಾಗಿದೆ ಎಂದು ನಂಬಿಸಿದ್ರು. ಅಲ್ಲೇ ಸೌಲಭ್ಯ ಬರುತ್ತೇ ಅಂತ ಹೇಳಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಸಿದ್ರು. ಈಗ ಇಲ್ಲಿಂದ ಮತ್ತೆ ಜಾಗ ಖಾಲಿ ಮಾಡಿ ಅಂತಾರೇ ಎಂಬುದು ಅಲೆಮಾರಿ ಕಾರ್ಮಿಕರ ನೋವಿನ ಮಾತಾಗಿದೆ.

    ಕರ್ನಾಟಕ ಅಲೆಮಾರಿ ಕಾರ್ಮಿಕ ಆಯೋಗ ಮತ್ತು ತುಮಕೂರು ಜಿಲ್ಲಾ ನ್ಯಾಯಾಧೀಶರು ಬಂದು 3ವರ್ಷ ಕಳೆದ್ರು ಕಾರ್ಮಿಕರ ಕತ್ತಲೆಯ ಬದುಕಿಗೆ ಇನ್ನೂ ಬೆಳಕು ಬಂದಿಲ್ಲ. ಅಕ್ಷರ ಜ್ಞಾನವಿಲ್ಲದ ಗುಡಿಸಲು ಕುಟುಂಬದಲ್ಲಿ 15ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಮುನ್ನಾ ಕೊರಟಗೆರೆ ತಹಶೀಲ್ದಾರ್, ತಾ.ಪಂ. ಇಓ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ತಕ್ಷಣ ಬೇಟಿನೀಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ.

    ಗ್ರಾ.ಪಂ. ಮತ್ತು ತಾ.ಪಂ.ಗಳ ನಿರ್ಲಕ್ಷ:

    ಅಲೆಮಾರಿ ಕಾರ್ಮಿಕರ ಬಳಿ ಆಧಾರ್ ಕಾರ್ಡು, ರೇಷನ್‍ ಕಾರ್ಡು, ಗುರುತಿನ ಚೀಟಿ, ಪಾನ್‍ ಕಾರ್ಡ್ ಮತ್ತು ಬ್ಯಾಂಕ್‍ ಖಾತೆ ಎಲ್ಲವೂ ಇದೆ. ಆದರೇ ಇವರಿಗೆ ನಿವೇಶನ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾದ್ರೇ ಮೂಲಸೌಲಭ್ಯ ಕಲ್ಪಿಸುವಲ್ಲಿ ಸ್ಥಳೀಯ ಗ್ರಾ.ಪಂ. ನಿರ್ಲಕ್ಷ ವಹಿಸಿದೆ. ಗ್ರಾ.ಪಂ. ಪಿಡಿಓ ಮತ್ತು ತಾ.ಪಂ. ಇಓಗೆ ಇವರ ಸಮಸ್ಯೆಯ ಅರಿವಿದ್ರು ಮುಗ್ದ ಜನರಿಗೆ ಉಡಾಫೆ ಉತ್ತರ ನೀಡೋದು ಸರ್ವೇ ಸಾಮಾನ್ಯವಾಗಿದೆ.

     25 ವರ್ಷದಿಂದ ಸೌಲಭ್ಯವೇ ಮರೀಚಿಕೆ:

    ಐ.ಕೆ.ಕಾಲೋನಿಯ 20ಕುಟುಂಬದ 75ಕ್ಕೂ ಅಧಿಕ ಅಲೆಮಾರಿ ಕಾರ್ಮಿಕರು ತಮ್ಮ ವಿಳಾಸದ ಗುರುತಿನ ಚೀಟಿ ಪಡೆದು 20ವರ್ಷಗಳೇ ಕಳೆದಿವೆ. ಗ್ರಾ.ಪಂ., ತಾ.ಪಂ., ಜಿ.ಪಂ., ಎಂಎಲ್‍ ಎ, ಎಂಪಿ ಚುನಾವಣೆ ವೇಳೆ ಮಾತ್ರ ರಾಜಕೀಯ ನಾಯಕರು ಬರ್ತಾರೆ. ಸರಕಾರಿ ಅಧಿಕಾರಿ ವರ್ಗವು ಕಾಟಚಾರಕ್ಕೆ ಭೇಟಿ ಕೋಡ್ತಾರೇ. ರಾಜಕೀಯ ನಾಯಕರಂತೆ ಭರವಸೆಯನ್ನ ನೀಡ್ತಾರೇ. ಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದಿರೋದೇ ವಿಷಾದನೀಯ.

    ವಿದ್ಯುತ್ ಇಲ್ಲದೇ ನಮ್ಮ ವ್ಯಾಸಂಗಕ್ಕೆ ಸಮಸ್ಯೆ ಆಗಿದೆ. ಶೌಚಾಲಯ ಮತ್ತು ಸ್ನಾನ ಇರ್ಲಿ ಕುಡಿಯಲೂ ನೀರಿಲ್ಲ. ಕಾಲುವೆಯ ನೀರಿನಲ್ಲಿ 15 ದಿನಕ್ಕೊಮ್ಮೆ ಸ್ನಾನ ಮಾಡಬೇಕಿದೆ. ಚುನಾವಣೆ ಬಂದಾಗ ಅಧಿಕಾರಿಗಳು ಬರ್ತಾರೇ ಸ್ವಾಂತಾನ ಹೇಳಿ ಹೋಗ್ತಾರೇ. ರಾತ್ರಿವೇಳೆ ಕಾಡುಪ್ರಾಣಿಗಳ ಭಯದ ನಡುವೆಯೇ ನಮ್ಮ ಜೀವನ ಸಾಗಿಸಬೇಕಿದೆ. ನಾವೇನು ತಪ್ಪು ಮಾಡಿದ್ದೇವೆ ?

    –ಹರ್ಷಿತಾ. ವಿದ್ಯಾರ್ಥಿನಿ, ಐ.ಕೆ.ಕಾಲೋನಿ


    ನಾವು ಮತದಾನ ಮಾಡೋದಿಕ್ಕೆ ಮಾತ್ರ ಸಿಮೀತ. ನಮ್ಮ ಕುಟುಂಬಗಳಿಗೆ 25ವರ್ಷದಿಂದ ಸೌಲಭ್ಯವೇ ಮರೀಚಿಕೆ. ನಮಗೇ ಸೌಲಭ್ಯ ನೀಡದೇ ಮತದಾನ ಮಾಡೋದಿಲ್ಲ. 20 ಗುಡಿಸಲು ಮುಂದೆಯೇ ಚುನಾವಣೆ ಬಹಿಷ್ಕಾರದ ನಾಮಫಲಕ ಹಾಕಲಾಗಿದೆ. ನಮ್ಮ ಗುಡಿಸಲುಗಳಿಗೆ ಬೆಳಕು, ನೀರು, ನಿವೇಶನ ಮತ್ತು ಶೌಚಾಲಯ ನೀಡದ ಹೊರತು ನಮ್ಮ ಬಳಿಗೆ ದಯವಿಟ್ಟು ಯಾರು ಬರಬೇಡಿ.

    –ಮಾರಪ್ಪ. ಸ್ಥಳೀಯ, ಐ.ಕೆ.ಕಾಲೋನಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಬಸ್ ಫ್ರೀ ಅಂತ ಟಿಕೆಟ್ ಇಲ್ಲದೇ ಪ್ರಯಾಣಿಸುವಂತಿಲ್ಲ: ಕೆಎಸ್ ಆರ್ ಟಿಸಿ ವಿಧಿಸಿದ ದಂಡದ ಮೊತ್ತ ಎಷ್ಟು ಗೊತ್ತಾ?

    May 10, 2025

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕುಂದಾಪುರ: ಅಣ್ಣ ಸ್ಥಾನದಲ್ಲಿ ನಿಂತ ರಜತ್‌ ಬುಜ್ಜಿ

    May 9, 2025

    ಆರ್ಯ ವೈಶ್ಯ ಸಂಘದಿಂದ ಶಾಸಕ ಹೆಚ್.ವಿ.ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪನವರಿಗೆ ಸನ್ಮಾನ

    April 1, 2025
    Our Picks

    ಆಂಧ್ರಪ್ರದೇಶ ಕರ್ನೂಲ್ ಬಳಿ ಭೀಕರ ಅಪಘಾತ: ತುಮಕೂರು ಮೂಲದ ಮೂವರು ಸಾವು

    May 19, 2025

    ನ್ಯೂಸ್ ಪೇಪರ್ ನ್ನೇ ಡ್ರೆಸ್ ಮಾಡಿಕೊಂಡು, “ನನ್ನನ್ನು ಓದುವಿರಾ?” ಎಂದು ಕೇಳಿದ ನಟಿ ಪೂನಂ ಪಾಂಡೆ

    May 17, 2025

    ಆಪರೇಷನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ: ಯುವಕ ಅರೆಸ್ಟ್

    May 17, 2025

    ಮೌಂಟ್ ಎವರೆಸ್ಟ್ ನಿಂದ ಇಳಿಯುತ್ತಿದ್ದ ವೇಳೆ ಭಾರತೀಯ ಪರ್ವತಾರೋಹಿ ಸಾವು

    May 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮಳೆ ಹಾನಿಯ ಪರಿಹಾರಕ್ಕೆ ಕ್ರಮವಹಿಸಿ : ಸಚಿವ ಈಶ್ವರ್ ಖಂಡ್ರೆ ಸೂಚನೆ

    May 19, 2025

    ಬೀದರ್ : ಮಳೆ ಹಾನಿಯ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿ ನಿಯಮದಡಿ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಅರಣ್ಯ, ಜೀವಶಾಸ್ತ್ರ…

    ಬೆಂಗಳೂರಿನಲ್ಲಿ ಮಳೆ ಆರ್ಭಟ: ಬರೊಬ್ಬರಿ 10 ಕಿ.ಮೀ ಟ್ರಾಫಿಕ್ ಜಾಮ್

    May 19, 2025

    ಬೀದರ್‌: ಗುಡುಗು ಸಹಿತ ಭಾರೀ ಮಳೆ

    May 19, 2025

    ಎಫ್‌ ಎಸ್‌ ಟಿಪಿ ಘಟಕ ಸ್ಥಾಪನೆಗೆ ಸಾರ್ವಜನಿಕರ ವಿರೋಧ: ಕಂದಾಯ ಇಲಾಖೆಯಿಂದ ಹದ್ದುಬಸ್ತು ಕಾರ್ಯ ಯಶಸ್ವಿ

    May 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.