nammatumakuru

    Subscribe to Updates

    Get the latest creative news from FooBar about art, design and business.

    What's Hot

    ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ನ್ಯಾಯದಗುಂಟೆ ಗ್ರಾಮದಲ್ಲಿ ಕೆರೆಗೆ ಗುದ್ದಲಿ ಪೂಜೆ

    October 17, 2025

    ಹುಲಿಯನ್ನು ಇನ್ನೂ ಎರಡು ದಿನಗಳಲ್ಲಿ ಹಿಡಿಯಬೇಕು: ಅರಣ್ಯಾಧಿಕಾರಿಗಳಿಗೆ ರೈತರಿಂದ ಗಡುವು

    October 17, 2025

    ಶಿರಾ: ಮನೆಯ ಬೀಗ ಒಡೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

    October 17, 2025
    Facebook Twitter Instagram
    ಟ್ರೆಂಡಿಂಗ್
    • ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ನ್ಯಾಯದಗುಂಟೆ ಗ್ರಾಮದಲ್ಲಿ ಕೆರೆಗೆ ಗುದ್ದಲಿ ಪೂಜೆ
    • ಹುಲಿಯನ್ನು ಇನ್ನೂ ಎರಡು ದಿನಗಳಲ್ಲಿ ಹಿಡಿಯಬೇಕು: ಅರಣ್ಯಾಧಿಕಾರಿಗಳಿಗೆ ರೈತರಿಂದ ಗಡುವು
    • ಶಿರಾ: ಮನೆಯ ಬೀಗ ಒಡೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
    • ಶಿಕ್ಷಕ ರಾಜಗೋಪಾಲ ಅವರಿಗೆ ‘ಕರ್ನಾಟಕ ವಾಲ್ಮೀಕಿರತ್ನ ಪ್ರಶಸ್ತಿ – 2025’
    • ಆರೋಗ್ಯದ ಬಗ್ಗೆ ಅರಿವು ಅಗತ್ಯ: ಶಾಸಕ ಕೆ.ಷಡಕ್ಷರಿ
    • ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದು ದುರಾದೃಷ್ಟಕರ: ಶಾಸಕ ಎಸ್.ಆರ್. ಶ್ರೀನಿವಾಸ್‌
    • ಪಿಎಂ ಮುದ್ರಾ ಯೋಜನೆ ಹೆಸರಿನಲ್ಲಿ ರೈತನಿಗೆ 3 ಲಕ್ಷ ರೂ. ವಂಚನೆ!
    • ರೈತನ ಮೇಲೆ ಭೀಕರ ದಾಳಿ ನಡೆಸಿದ ಹುಲಿ: ಕಣ್ಣು, ಮುಖ ವಿರೂಪಗೊಂಡು ಗಂಭೀರ ಸ್ಥಿತಿಯಲ್ಲಿ ರೈತ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಲ್ಲರೂ ಖಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ: ಶ್ರೀ ಸಿದ್ದಲಿಂಗ ಸ್ವಾಮೀಜಿ
    ತುಮಕೂರು January 11, 2025

    ಎಲ್ಲರೂ ಖಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ: ಶ್ರೀ ಸಿದ್ದಲಿಂಗ ಸ್ವಾಮೀಜಿ

    By adminJanuary 11, 2025No Comments2 Mins Read
    sanchari surakshatha

    ತುಮಕೂರು: ತುಮಕೂರಿನ ಟೌನ್‌ ಹಾಲ್ ವೃತ್ತದಲ್ಲಿ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಸೂಚನಾ ಫಲಕಗಳ ಅರಿವಿನ ಕಾರ್ಯಕ್ರಮ ನಡೆಯಿತು.

    ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಸಿದ್ದಲಿಂಗಸ್ವಾಮೀಜಿಗಳು,  ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಬೇಕು, ಅಪಘಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಪೋಷಕರು ಚಿಕ್ಕ ಮಕ್ಕಳಿಗೆ ದ್ವಿಚಕ್ರವಾಹನಗಳನ್ನು ನೀಡಬಾರದು, 18ವರ್ಷಆದ ನಂತರ ಅವರಿಗೆ ಲೈಸೆನ್ಸ್ ಕೊಡಿಸಿಯೇ ವಾಹನಗಳನ್ನು ನೀಡಬೇಕು, ಮಕ್ಕಳ ಜೀವ ಮುಖ್ಯ ವಾಹನ ಚಲಾಯಿಸುವಾಗ ನಿಧಾನವಾಗಿ, ಅಂತರ ಕಾಯ್ದುಕೊಂಡು, ರಸ್ತೆ ನಿಯಮಗಳನ್ನು ಪಾಲಿಸುತ್ತಾ ವಾಹನಗಳನ್ನು ಚಲಾಯಿಸಬೇಕು, ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಪೋಷಕರ ಆಕ್ರಂದನ ನೋಡಲು ಆಗುವುದಿಲ್ಲ, ಆಟೋ, ಬಸ್, ಇತ್ಯಾದಿ ವಾಹನಗಳಲ್ಲಿ ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಹಾಕಬೇಕು, ಚಾಲಕರು ದುಡ್ಡಿನ ಆಸೆಗಾಗಿ ಹೆಚ್ಚು ಜನರನ್ನು ಕುಳ್ಳಿರಿಸಿ ಅಪಘಾತವಾದರೆ ಆ ಸಂಸಾರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರಲ್ಲದೇ, ವಿದ್ಯಾರ್ಥಿಗಳು ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.


    Provided by
    Provided by
    Provided by

    ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡುತ್ತಾ,  ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ, ಇದನ್ನು ತಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ, ವಾಹನ ಸವಾರರು ವಾಹನ ಚಲಾಯಿಸುವಾಗ ಹೆಚ್ಚಿನ ನಿಗಾ ವಹಿಸಿ ವಾಹನಗಳನ್ನು ಓಡಿಸಬೇಕು, ವಾರದ ರಜೆಗಳಲ್ಲಿ ಹೆಚ್ಚು ಅಪಘಾತಗಳನ್ನು ತಡೆಯಲು, ರಸ್ತೆ ದಟ್ಟಣೆಗಳನ್ನು ತಡೆಯಲು ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕು, ನಮ್ಮ ದೇಶಗಳಲ್ಲಿ ನಿಯಮಗಳನ್ನು ಪಾಲಿಸುವುದಿಲ್ಲ ಆದರೆ ವಿದೇಶಕ್ಕೆ ಹೋದರೆ ಅಲ್ಲಿ ಕಟ್ಟುನಿಟ್ಟಾಗಿ ಪಾಲಿಸುತ್ತೀರಿ ಏಕೆಂದರೆ ಅಲ್ಲಿ ಕಠಿಣ ಕಾನೂನುಗಳಿಗೆ, ವಿದ್ಯಾರ್ಥಿಗಳು, ಯುವಕ–ಯುವತಿಯರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಯುವಕರು 18 ವರ್ಷ ಆದ ಮೇಲೆ ವಾಹನ ಚಾಲನೆ ಮಾಡಬೇಕು, ಎಲ್ಲರೂ ಡಿ.ಎಲ್.ಪಡೆದು ನಂತರ ವಾಹನ ಚಲಾಯಿಸಬೇಕು, ನಾವು ಸರಿಯಾಗಿ ವಾಹನ ಚಾಲನೆ ಮಾಡುತ್ತಿದ್ದೇವೆ ಎಂದು ನೋಡುವುದಲ್ಲ ಎದುರುಗಡೆಯಿಂದ ಬರುವ ವ್ಯಕ್ತಿ ಸರಿಯಾಗಿ ಬರುತ್ತಿದ್ದಾನಾ ಎಂದು ನೋಡಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು.

    ಎಸ್.ಪಿ.ಅಶೋಕ್.ಕೆ.ವಿ.ಮಾತನಾಡುತ್ತಾ, ವಾಹನ ಚಾಲನೆ ಮಾಡುವಾಗ ಎಡ ಮತ್ತು ಬಲಭಾಗವನ್ನು ನೋಡಬೇಕು, ಪೋಷಕರು ವಾಹನ ಚಲಾಯಿಸುವಾಗ ತಮ್ಮ ಮಕ್ಕಳಿಗೆ ಯಾವ ರೀತಿ ವಾಹನ ಚಾಲನೆ ಮಾಡಬೇಕೆಂಬುದನ್ನು ಹೇಳಿ ತೋರಿಸಬೇಕು, ಕೇವಲ ಕಾನೂನುಗಳಿಗೆ ಹೆದರಿ ವಾಹನ ಚಲಾಯಿಸುವುದಲ್ಲ ನಿಧಾನವಾಗಿ ಎಡಭಾಗದಲ್ಲಿಯೇ ವಾಹನ ಚಲಾಯಿಸಬೇಕು, ವಾಹನಗಳಿಗೆ ರಾತ್ರಿ ಸಮಯದಲ್ಲಿ ಎದುರು ಬರುವವರಿಗೆ ಕಾಣಬೇಕು ಎಂದು ರೇಡಿಯಂ ಸ್ಟಿಕ್ಕರ್ ಗಳನ್ನು ಹಾಕಬೇಕು, ಟ್ರಾಕ್ಟರ್, ಟಿಪ್ಪರ್ ಗಳಿಗೆ ದೊಡ್ಡ ದೊಡ್ಡ ರೇಡಿಯಂ ಸ್ಟಿಕ್ಕರ್ ಗಳನ್ನು ಹಾಕಲು ಆರ್.ಟಿ.ಓ.ದವರು ಸಹ ಕ್ರಮಕೈಗೊಳ್ಳಬೇಕು, ಅಪಘಾತವಾದಾಗ ಪ್ರಾಣವೇ ಹೋಗುತ್ತದೆ, ಆದ್ದರಿಂದ ವಾಹನ ಚಲಾಯಿಸುವಾಗ ಎಲ್ಲರೂ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು, ಎಲ್ಲರೂ ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ಕಿವಿಮಾತು ಹೇಳಿದರು.

    ಬಿ.ವಿ.ಅಶ್ಚಿಜ ಮಾತನಾಡುತ್ತಾ, ಹೆಲ್ಮೆಟ್ ಬಳಸಿ ಜೀವ ಉಳಿಸಿಕೊಳ್ಳಬೇಕು, ಕಡ್ಡಾಯವಾಗಿ ಎಲ್ಲರೂ ಹೆಲ್ಮೆಟ್ ಬಳಸಬೇಕು, ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಬಳಸಬೇಕು, ಎಷ್ಟು ಸೀಟು ಇದೆಯೋ ಅಷ್ಟೇ ಜನರನ್ನು ಕುಳಿಸಿಕೊಂಡು ವಾಹನ ಚಲಾಯಿಸಬೇಕು, ಎಸ್.ಪಿ.ಕಚೇರಿ ಮುಂಭಾಗದಲ್ಲಿ ರಸ್ತೆ ಸುರಕ್ಷತಾ ಮಾದರಿ ಉದ್ಯಾನವನ ಮಾಡಿದ್ದೇವೆ. ಎಲ್ಲರೂ ಅಲ್ಲಿಗೆ ಒಮ್ಮೆ ಭೇಟಿ ನೀಡಿ ಅದನ್ನು ನೋಡಿ ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು.

    ವೇದಿಕೆಯಲ್ಲಿ ಎಎಸ್ಪಿ ಮರಿಯಪ್ಪ, ಆರ್‌ ಟಿಓ ಎ.ವಿ.ಪ್ರಸಾದ್, ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಪ್ರೊ.ಟಿ.ಗಂಗಾಧರಯ್ಯ, ಪ್ರೊ.ಸಿ.ಎಸ್.ಸೋಮಶೇಖರಯ್ಯ, ನಾಗೇಶ್.ಹೆಚ್.ಆರ್, ದಿನೇಶ್.ಜಿ.ಎಂ,  ಆಶಾರಾಣಿ, ಬಸವರಾಜಪ್ಪ.ಆರ್, ಕೆ.ಎಸ್. ಲಿಂಗದೇವರಪ್ಪ,ಚೇತನ್ ಕುಮಾರ್.ಎನ್.ಜಿ, ಬಿ.ಎಸ್.ಸೂರ್ಯನಾರಾಯಣಗುಪ್ತ, ದಕ್ಷಿಣಾಮೂರ್ತಿ, ಪ್ರೊ.ಮೋಹನ್ ಕುಮಾರ್, ಪ್ರಸನ್ನಕುಮಾರ್.ಹೆಚ್, ಜಲಜಾಕ್ಷಿ, ಕೆ.ಎಸ್.ಇಚಿದ್ರಾಣಿ, ಮಧು.ಎಸ್.ಕುಮಾರ್, ಡಾ.ಕಿಶೋರ್, ಮೋಟಾರು ವಾಹನ ತರಬೇತಿ ಸಂಸ್ಥೆಯ ಅಧ್ಯಕ್ಷ ಡಿ. ಶಿವಕುಮಾರ್, ಕೆ.ಕೃಷ್ಣಮೂರ್ತಿ, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಎಲೆಕ್ಟ್ರೋಕೆಮಿಸ್ಟ್ರಿ ಕುರಿತು ವಿಶೇಷ ಉಪನ್ಯಾಸ

    October 16, 2025

    ತುಮಕೂರು | 41 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಯಂತ್ರ ಅಳವಡಿಕೆ: ಸಚಿವ ಶರಣಪ್ರಕಾಶ ಪಾಟೀಲ

    October 15, 2025

    ಮಧುಗಿರಿ | ತುಮುಲ್ ಚುನಾವಣೆ: ಬಿ.ನಾಗೇಶಬಾಬು ಅನರ್ಹ: ಕೊಂಡವಾಡಿ ಚಂದ್ರಶೇಖರ್ ಗೆ ಒಲಿದ ಅದೃಷ್ಟ

    October 14, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ನ್ಯಾಯದಗುಂಟೆ ಗ್ರಾಮದಲ್ಲಿ ಕೆರೆಗೆ ಗುದ್ದಲಿ ಪೂಜೆ

    October 17, 2025

    ಪಾವಗಡ: ತಾಲೂಕಿನ ಲಿಂಗದಹಳ್ಳಿ ವಲಯದ  ನ್ಯಾಯದಗುಂಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ( ರಿ.) ನಮ್ಮ…

    ಹುಲಿಯನ್ನು ಇನ್ನೂ ಎರಡು ದಿನಗಳಲ್ಲಿ ಹಿಡಿಯಬೇಕು: ಅರಣ್ಯಾಧಿಕಾರಿಗಳಿಗೆ ರೈತರಿಂದ ಗಡುವು

    October 17, 2025

    ಶಿರಾ: ಮನೆಯ ಬೀಗ ಒಡೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

    October 17, 2025

    ಶಿಕ್ಷಕ ರಾಜಗೋಪಾಲ ಅವರಿಗೆ ‘ಕರ್ನಾಟಕ ವಾಲ್ಮೀಕಿರತ್ನ ಪ್ರಶಸ್ತಿ – 2025’

    October 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.