ಗುಬ್ಬಿ: ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ಅವರ ಮೇಲೆ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಭ್ರಷ್ಟಾಚಾರ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಚೇಳೂರು ಶಿವನಂಜಪ್ಪ ಆರೋಪ ವ್ಯಕ್ತಪಡಿಸಿದ್ದರು.
ಇಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಆರೋಪ ಮಾಡಿರುವ ಬಗ್ಗೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಡಗೂರು ಗ್ರಾಮ ಪಂಚಾಯಿತಿಗೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಪ್ರಮೀಳಾ ಅವರನ್ನು ಆಯ್ಕೆಯಾದ ದಿವಸದಿಂದ ಸಮರ್ಪಕವಾಗಿ ಅಧಿಕಾರ ನಡೆಸಲು ಬಿಡುತ್ತಿಲ್ಲ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ತಮಗೆ ಬೇಕಾದ ರೀತಿಯಲ್ಲಿ ಸಭಾ ನಡವಳಿಕೆ ಬರೆಯುವಂತೆ ಒತ್ತಾಯ ಮಾಡುವುದು. ಅನುದಾನವನ್ನು ಅನಾವಶ್ಯಕವಾಗಿ ಬಳಕೆ ಮಾಡುವಂತೆ ಸಭೆಯಲ್ಲಿ ಗಲಾಟೆ ಮಾಡುವುದು ಸರಿಯಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಭ್ರಷ್ಟಾಚಾರ ಮಾಡಿದ್ದರೆ ಕಾನೂನು ಹೋರಾಟ ಮಾಡಲಿ ಅದನ್ನು ಬಿಟ್ಟು ಒಬ್ಬ ದಲಿತ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಾಗಿರುವುದನ್ನು ಸಹಿಸದೆ ಅವರ ತೇಜೋವಧೆ ಮಾಡುವುದು ಸರಿಯಲ್ಲ ಗ್ರಾಮ ಪಂಚಾಯಿತಿ ಆಡಳಿತವನ್ನು ಸಮರ್ಪಕವಾಗಿ ನೆಡೆಸುತ್ತಿರುವ ಅಧ್ಯಕ್ಷರ ಮೇಲೆ ಆರೋಪ ಮಾಡುತ್ತಿರುವ ಕೆಲ ಸದಸ್ಯರ ಮೇಲೆ ದಲಿತ ಸಂಘಟನೆ ಹೋರಾಟಕ್ಕೆ ಮುಂದಾಲಿದೆ ಈ ಕುರಿತು ಈ ಸದಸ್ಯರ ಮೇಲೆ ಸದಸ್ಯತ್ವ ರದ್ದು ಗೋಳಿಸಲು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಎಂದರು.
ದಲಿತ ಮುಖಂಡ ಕುಂದುರನಹಳ್ಳಿ ನಟರಾಜ್ ಮಾತನಾಡಿ, ಸಂವಿಧಾನ ದಲಿತ ಸಮುದಾಯಕ್ಕೆ ಸ್ಥಳೀಯ ಆಡಳಿತ ನೆಡೆಸಲು ಅವಕಾಶ ಕಲ್ಪಿಸಿದೆ ಆದರೆ ಈ ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷ ರ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ. ತಾಲ್ಲೂಕಿನ ದಲಿತ ಸಮುದಾಯದ ಅಧ್ಯಕ್ಷ ರು ಆಡಳಿತ ನೆಡೆಸುವುದು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಇಂತಹ ದುರಾಡಳಿತ ನೆಡೆಸು ಸದಸ್ಯರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಈ 8 ಜನ ಸದಸ್ಯರ ವಿರುದ್ಧ ಪ್ರತಿಭಟನೆ ದಲಿತ ಸಂಘರ್ಷ ಸಮಿತಿ ಸಿದ್ದವಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆಯಲ್ಲಿ ದಲಿತ ಮುಖಂಡರಾದ ಕಡಬ ಶಂಕರ್. ಮಾರಶೆಟ್ಟಿಹಳ್ಳಿ ಈಶ್ವರಪ್ಪ. ಸಿ.ಎಸ್. ಪುರ ಕುಮಾರ್. ರಂಗಸ್ವಾಮಿ ಇತರರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5