ತಿಪಟೂರು: ತಾಲ್ಲೂಕಿನ ಸೂಗೂರು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತಿಪಟೂರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ, ಸೂಗೂರುವತಿಯಿಂದ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಮತ್ತು ಉಚಿತ ಚಿಕಿತ್ಸಾ ಶಿಬಿರ ನಡೆಸಲಾಯಿತು.
ಶಿಬಿರದಲ್ಲಿ ಸುಮಾರು 300 ಜಾನುವಾರುಗಳಿಗೆ ಆರೋಗ್ಯ ತಪಾಸಣೆ, ಜಂತು ನಾಶಕ ವಿತರಣೆ, ಖನಿಜ ಮಿಶ್ರಣ ವಿತರಣೆ ನಡೆಸಲಾಯಿತು. ಶಿಬಿರದಲ್ಲಿ ಪ್ರದರ್ಶಿಸಲಾದ ಅತ್ಯುತ್ತಮ ಮಿಶ್ರತಳಿ ಹಸುಗಳಿಗೆ ಮತ್ತು ಕರುಗಳಿಗೆ ಬಹುಮಾನ ವಿತರಿಸಲಾಯಿತು. ಹುಣಸೇಘಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದಕ್ಷಿಣ ಮೂರ್ತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಶುಆಸ್ಪತ್ರೆ, ತಿಪಟೂರಿನ ಸಹಾಯಕ ನಿರ್ದೇಶಕರಾದ ಡಾ. ನಂದೀಶ್ ಕೆ.ಜೆ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಪಶುಪಾಲಕರಿಗೆ ಜಾನುವಾರುಗಳಲ್ಲಿ ಲಸಿಕೆಯ ಮಹತ್ವ ಮತ್ತು ಕರುಗಳ ಪಾಲನೆ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಸೂಗೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸೋಮಶೇಖರ್, ಕಾರ್ಯದರ್ಶಿ ಸುರೇಶ್, ಗ್ರಾಮಪಂಚಾಯತಿ ಉಪಾದ್ಯಕ್ಷರಾದ ಜಯಂತಿ, ಸದಸ್ಯರಾದ ಮಾದೇವಯ್ಯ, ಶಿವಗಂಗಮ್ಮ, ಕವಿತ, ಮುಖಂಡರಾದ ದೇವರಾಜು ಉಪಸ್ಥಿತರಿದ್ದರು.
ಪಶುವೈದ್ಯರಾದ ಡಾ.ಮೃತ್ಯುಂಜಯ, ಡಾ.ಪರ್ವೇಜ್ ಪಾಶ, ಡಾ.ರಂಗನಾಥ್, ಡಾ.ಭಾನುಪ್ರಕಾಶ್, ಡಾ.ಮಿಥುನ್ ಕೆ.ವಿ, ಡಾ.ಮಂಜುನಾಥ್ ಎಸ್.ಪಿ, ಡಾ.ಅಭಿಷೇಕ್ ಡಿ.ಎನ್, ಡಾ.ರಂಜಿತ, ಡಾ.ನವೀನ್, ಡಾ.ಪ್ರಭು, ಸಿಬ್ಬಂದಿಗಳಾದ ಕುಮಾರ್, ರುದ್ರಸ್ವಾಮಿ ಕೆ.ಎಸ್., ನರಸಿಂಹಮೂರ್ತಿ ಎನ್., ಮಂಜುನಾಥ್, ನಾಗರಾಜು, ಅಭಿಷೇಕ್ ಗೌಡ, ಲಕ್ಷ್ಮೀಶ್ ಶಿಬಿರದಲ್ಲಿ ಪಾಲ್ಗೊಂಡರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700