nammatumakuru

    Subscribe to Updates

    Get the latest creative news from FooBar about art, design and business.

    What's Hot

    ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ: ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

    May 13, 2025

    ಬೀದರ್:  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನಿಂದಲೇ ತಂದೆಯ ಹತ್ಯೆ!

    May 13, 2025

    ವಿಶೇಷ ಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

    May 13, 2025
    Facebook Twitter Instagram
    ಟ್ರೆಂಡಿಂಗ್
    • ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ: ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ
    • ಬೀದರ್:  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನಿಂದಲೇ ತಂದೆಯ ಹತ್ಯೆ!
    • ವಿಶೇಷ ಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ
    • ಮಹಾನಗರಪಾಲಿಕೆ: ಆಸ್ತಿ ತೆರಿಗೆ ರಿಯಾಯಿತಿ ಅವಧಿ ಜೂನ್ 30ರವರೆಗೆ ವಿಸ್ತರಣೆ
    • ಕದನ ವಿರಾಮಕ್ಕೆ ಮಧ್ಯಸ್ಥಿಕೆ ಟ್ರಂಪ್ ಏನು ಹೆಡ್ ಮಾಸ್ಟ್ರಾ?: ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ
    • ರಾಕೇಶ್ ಪೂಜಾರಿ ನಿಧನಕ್ಕೆ ಸಂತಾಪ ಸೂಚಿಸಿದ ರಿಷಬ್ ಶೆಟ್ಟಿ
    • ರೋಗವಾಹನ ಆಶ್ರಿತ ರೋಗಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ: ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೂಚನೆ
    • ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇಲ್ಲಿ ಪ್ರತಿವರ್ಷ ಸಾವಿರಾರು ಹೊಸ ವಾಚ್‌ ಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ!
    ಸ್ಪೆಷಲ್ ನ್ಯೂಸ್ March 9, 2022

    ಇಲ್ಲಿ ಪ್ರತಿವರ್ಷ ಸಾವಿರಾರು ಹೊಸ ವಾಚ್‌ ಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ!

    By adminMarch 9, 2022No Comments2 Mins Read
    time

    ಭಾರತವು ಅನೇಕ ವಿಚಿತ್ರ ಮತ್ತು ನಿಗೂಢ ದೇವಾಲಯಗಳ ತವರೂರು. ಕೆಲ ದೇವಾಲಯಗಳಲ್ಲಿ ವಿಚಿತ್ರ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಜನರು ಈ ದೇವಾಲಯಗಳಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆಂದು ಅವರು ನಂಬಿದ್ದಾರೆ. ಹೀಗಾಗಿ ಚಿತ್ರ-ವಿಚಿತ್ರ ಸಂಪ್ರದಾಯಗಳನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

    ಇಂದು ನಾವು ನಿಮಗೆ ಮಧ್ಯಪ್ರದೇಶ(Madhya Pradesh)ದ ಮಂದಸೌರ್‌ನಲ್ಲಿರುವ ಅಂತಹ ವಿಚಿತ್ರ ದೇವಾಲಯದ ಬಗ್ಗೆ ತಿಳಿಸುತ್ತೇವೆ. ಇದು ತುಂಬಾ ವಿಚಿತ್ರ ಸಂಪ್ರದಾಯ ಹೊಂದಿರುವ ದೇವಸ್ಥಾನವಾಗಿದೆ. ಏಕೆಂದರೆ ಈ ದೇವಾಲಯದಲ್ಲಿ ಯಾವುದೇ ದೇವತೆ ಅಥವಾ ಯಾವುದೇ ಪಂಡಿತ-ಪುರೋಹಿತರು ಕುಳಿತುಕೊಳ್ಳುವುದಿಲ್ಲ. ಆದರೂ ಜನರು ಇಲ್ಲಿಗೆ ಬಂದು ತಲೆಬಾಗಿ ನಮಿಸುತ್ತಾ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ದೇವಾಲಯದ ಹೆಸರು ಸಾಗಸ್ ಬಾವ್ಜಿ ದೇವಾಲಯ(Sagas bavji Hindu Temple).ದಾರಿ ತಪ್ಪಿದ ಜನರಿಗೆ ದಾರಿ ತೋರುವ ದೇವರು


    Provided by

    ಸಾಗಸ್ ಬಾವ್ಜಿ(Sagas bavji) ಎಂದರೆ ಯಕ್ಷ. ಸಾಗಸ್ ಬಾವ್ಜಿಯನ್ನು ಧರ್ಮಗ್ರಂಥಗಳಲ್ಲಿ ಯಕ್ಷ ಎಂದು ಕರೆಯಲಾಗಿದೆ ಎಂದು ಸ್ಥಳೀಯ ಜನರು ನಂಬುತ್ತಾರೆ. ಯಕ್ಷನು ಹಣವನ್ನು ಕಾಪಾಡುತ್ತಾರೆಂಬ ನಂಬಿಕೆ ಇಲ್ಲಿದೆ. ಇಲ್ಲಿ ಯಕ್ಷರು ಶಾರೀರಿಕ ರೂಪದಲ್ಲಿ ಕಾಣಿಸಿಕೊಂಡು ದಾರಿ ತಪ್ಪಿದ ಜನರಿಗೆ ದಾರಿ ತೋರಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಜನ. ಆದ್ದರಿಂದಲೇ ದೂರದೂರುಗಳಿಂದ ಇಲ್ಲಿಗೆ ಬರುವ ಜನರಿಗೆ ಸರಿಯಾದ ದಿಕ್ಕು ಸಿಗುತ್ತದೆ ಮತ್ತು ಜೀವನದ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

    ಉಡುಗೊರೆಯಾಗಿ ಕೈಗಡಿಯಾರ ನೀಡುವ ಜನರು

    ಈ ದೇವಾಲಯ(Sagas Bavji Temple)ಕ್ಕೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಇಲ್ಲಿಗೇ ಮುಗಿಯುವುದಿಲ್ಲ. ಈ ದೇವಾಲಯಕ್ಕೆ ಬರುವ ಭಕ್ತರು ನೀಡುವ ಕಾಣಿಕೆಗಳು ತುಂಬಾ ವಿಚಿತ್ರವಾಗಿವೆ. ಜನರು ಇಲ್ಲಿಗೆ ಬಂದು ಸಾಗಸ್ ಬಾವ್ಜಿಗೆ ಗಡಿಯಾರ ಮತ್ತು ವಾಚ್ ಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಅವರ ಕೆಟ್ಟ ದಿನಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಬರುತ್ತದೆ ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿಯೇ ಇರುತ್ತದೆ. ಅಷ್ಟೇ ಅಲ್ಲ ಇಲ್ಲಿಂದ ವಾಚ್ ಕದ್ದೊಯ್ದರೆ ಆ ಸಮಯದಿಂದ ಆತನ ಕೆಟ್ಟ ಕಾಲ ಶುರುವಾಗುತ್ತದೆ ಎಂದೂ ಹೇಳಲಾಗುತ್ತದೆ. ಆದುದರಿಂದಲೇ ಯಾರೂ ಇಲ್ಲಿನ ವಾಚ್ ಗಳನ್ನು ಅಪ್ಪಿತಪ್ಪಿಯೂ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ.ಗಡಿಯಾರಗಳನ್ನು ನದಿಯಲ್ಲಿ ಎಸೆಯಲಾಗುತ್ತದೆ

    ಗಡಿಯಾರಗಳ ರಾಶಿಯಿಂದ ದೇವಾಲಯ(Hindu Temple) ತುಂಬಿದ್ದಾಗ ಅವುಗಳನ್ನು ಹತ್ತಿರದ ನದಿಗೆ ಎಸೆಯಲಾಗುತ್ತದೆ. ಈ ದೇವಾಲಯದಲ್ಲಿ ಗಡಿಯಾರಗಳ ರಾಶಿ ಸಂಗ್ರಹವಾದರೂ ಇಲ್ಲಿ ಎಂದಿಗೂ ಬೀಗ ಹಾಕಲಾಗಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಇಲ್ಲಿಂದ 5 ವಾಚ್‌ಗಳನ್ನು ಕದ್ದಿದ್ದನಂತೆ. ನಂತರ ಆತ ತನ್ನ ಕಣ್ಣುಗಳನ್ನೇ ಕಳೆದುಕೊಂಡಿದ್ದನಂತೆ. ಬಳಿಕ ಆತ ದೇವಾಲಯಕ್ಕೆ 10 ವಾಚ್‌ಗಳನ್ನು ಸಮರ್ಪಿಸಿದಾಗ ವಾಪಸ್ ಆತನಿಗೆ ಕಣ್ಣುಗಳು ಬಂದವಂತೆ. ಸಂತಾನ ಭಾಗ್ಯದಿಂದ ಹಿಡಿದು ಕಳೆದುಹೋದ ವಸ್ತುಗಳನ್ನು ವಾಪಸ್ ಪಡೆಯುವವರೆಗೆ ಇಲ್ಲಿನ ದೇವರು ಬೇಡಿಕೊಂಡ ವರವನ್ನು ದಯಪಾಲಿಸುತ್ತಾನೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಸ್ನೇಹಿತನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಬಾಯಲ್ಲಿಟ್ಟ ಸ್ನೇಹಿತ!

    April 5, 2025

    ಸುನೀತಾ ವಿಲಿಯಮ್ಸ್‌ ಭೂಮಿಗೆ ಮರಳುವುದು ಯಾವಾಗ?

    January 1, 2025

    ಕಿಸ್ ಮಾಡಲು ಬಂದವನ ಕೆನ್ನೆ ಕಚ್ಚಿದ ಹೆಬ್ಬಾವು

    December 16, 2024
    Our Picks

    ವಾಯುನೆಲೆ ಮೇಲೆ ಭಾರತ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ: ಪಾಕಿಸ್ತಾನದ ಮಿಲಿಟರಿ ವಕ್ತಾರ

    May 10, 2025

    ಶ್ರೀನಗರ, ಪಠಾಣ್ ಕೋಟ್ ನಲ್ಲಿ ಹಲವು ಕಡೆ ಸ್ಫೋಟ: ಅಮೃತಸರದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

    May 10, 2025

    ಪಾಕಿಸ್ತಾನದ ಡ್ರೋನ್ ದಾಳಿ: ಒಂದೇ ಕುಟುಂಬದ ಮೂವರಿಗೆ ಗಾಯ: ಒಬ್ಬರ ಸ್ಥಿತಿ ಗಂಭೀರ

    May 10, 2025

    ಪಾಕಿಸ್ತಾನದ ಡ್ರೋನ್ ದಾಳಿ ವಿಫಲ, ಭಾರೀ ಶೆಲ್ ದಾಳಿ: ಮಹಿಳೆ ಸಾವು

    May 9, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ: ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

    May 13, 2025

    ಕೊರಟಗೆರೆ: ದೊಡ್ಡಸಾಗ್ಗೆರೆಯ ಮರಿಸ್ವಾಮಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರ ಮೇಲೆ ನಿರಂತರ ದರ್ಪ ತೋರಿಸುತ್ತಿದ್ದು, ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು…

    ಬೀದರ್:  ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನಿಂದಲೇ ತಂದೆಯ ಹತ್ಯೆ!

    May 13, 2025

    ವಿಶೇಷ ಚೇತನ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

    May 13, 2025

    ಮಹಾನಗರಪಾಲಿಕೆ: ಆಸ್ತಿ ತೆರಿಗೆ ರಿಯಾಯಿತಿ ಅವಧಿ ಜೂನ್ 30ರವರೆಗೆ ವಿಸ್ತರಣೆ

    May 13, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.