ಕೊರಟಗೆರೆ: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಶ್ರೀ ರಾಮನವಮಿಯ ಅಂಗವಾಗಿ ಬೆಳಿಗ್ಗಿನಿಂದಲೇ ಅಭಿಷೇಕ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಯನ್ನು ಭಕ್ತಾದಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.
ಅದರಲ್ಲೂ ಶ್ರೀರಾಮ ಬಂಟ ಹನುಮನ ದೇವಾಲಯಗಳಲ್ಲಿ ಯಾವ ದೇವಾಲಯಗಳಲ್ಲೂ ಕಾಣದ ಸಡಗರ ಸಂಭ್ರಮ ಶ್ರೀರಾಮನ ಬಂಟ ಹನುಮನಿಗೆ ಪ್ರಿಯವಾದ ನೈವೇದ್ಯದ ತಿನಿಸುಗಳನ್ನು ಇಟ್ಟು ಶ್ರೀರಾಮನವಮಿಯ ವಿಶೇಷ ಮಜ್ಜಿಗೆ ಪಾನಕವನ್ನು ಭಕ್ತಾದಿಗಳಿಗೆ ನೀಡುವ ಮೂಲಕ ಶ್ರೀರಾಮನವಮಿ ಆಚರಣೆ ಯಿಂದ ಭಕ್ತಾದಿಗಳು ಆಚರಿಸಿದರು:
ಇಂದು ಇಡೀ ದೇಶದಲ್ಲೇ ಶ್ರೀ ರಾಮನವಮಿಯ ಆಚರಣೆ ಮಾಡಲಾಗುತ್ತಿದೆ. ಈ ದಿನದಂದು ದೇವಾಲಯಗಳಲ್ಲಿ ಮಜ್ಜಿಗೆ, ಪಾನಕ ಹಂಚುವ ಮೂಲಕ ಭಕ್ತರು ವಿಶೇಷವಾಗಿ ರಾಮನವಮಿ ಆಚರಿಸುತ್ತಾರೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5