ಕೊರಟಗೆರೆ: ಗ್ರಾಮೀಣ ಭಾಗದಿಂದ ಸಮಸ್ಯೆಗಳನ್ನ ತರುವ ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿವರ್ಗ ಬಗೆಹರಿಸಿದ್ರೇ ಲೋಕಾಯುಕ್ತ ಇಲಾಖೆಗೆ ಅರ್ಜಿಗಳೇ ಬರೋದಿಲ್ಲ. ಜನಸಾಮಾನ್ಯರ ಅರ್ಜಿಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಜವಾಬ್ದಾರಿ ಎಂದು ತುಮಕೂರು ಲೋಕಾಯುಕ್ತ ಎಸ್ಪಿ ವಿವೇಕಾನಂದ ಗಿ.ತುಳಸಿಗೇರಿ ಕಿವಿಮಾತು ಹೇಳಿದರು.
ಕೊರಟಗೆರೆ ಪಟ್ಟಣದ ತಾಪಂ ಸಭಾಂಗಣದಲ್ಲಿ ತುಮಕೂರು ಲೋಕಾಯುಕ್ತ ಇಲಾಖೆಯಿಂದ ಬುಧವಾರ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸರಕಾರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಲ್ಲುಕ್ವಾರೆ ಮತ್ತು ಕಲ್ಲುಬಂಡೆ ಬ್ಸಾಸ್ಟ್ನಿಂದ ಬುಕ್ಕಾಪಟ್ಟಣ ರೈತರಿಗೆ ಸಮಸ್ಯೆ, ರೈತರ ಜಮೀನು ದಾಖಲೆ ಇಲ್ಲದೇ ಅಕ್ರಮವಾಗಿ ಪರಬಾರೇ, ಸುವರ್ಣಮುಖಿ ನದಿಯ ಒತ್ತುವರಿ, ರೇಷನ್ ಕಾರ್ಡಿಗಾಗಿ ಅಲೆದಾಟ, ಮನೆಗಳ ಇಸ್ವತ್ತು ಸಮಸ್ಯೆ, ಸಾಗುವಳಿ ಚೀಟಿಯಿಂದ ಪಹಣಿ, ರೈತರ ಜಮೀನು ಸರ್ವೆಗೆ ಮೀನಾಮೇಷ ಸೇರಿದಂತೆ ಹತ್ತಾರು ಸಮಸ್ಯೆಗಳು ಲೋಕಾಯುಕ್ತ ಅಧಿಕಾರಿಗಳ ಗಮನ ಸೆಳೆದವು.
ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧ್ಯಕ್ಷ ಡಾ.ಸಂತೋಷ್, ಪೊಲೀಸ್ ಉಪಾಧ್ಯಕ್ಷ ಮಂಜುನಾಥ, ನಿರೀಕ್ಷಕ ರಾಜು.ಟಿ, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಸಿಪಿಐ ಪುರುಷೋತ್ತಮ್, ಪುರಸಭೆ ಸಿಇಓ ಉಮೇಶ್, ಸಮಾಜ ಕಲ್ಯಾಣ ಯಮುನಾ, ಸಿಡಿಪಿಓ ಗಂಗಾಧರ್, ಕೆಆರ್ಐಡಿಎಲ್ ಎಇಇ ಸಿಂಧು, ಬಿಸಿಎಂ ಅನಂತರಾಜು ಸೇರಿದಂತೆ ಇತರರು ಇದ್ದರು.
56 ಜನರಿಂದ ಅರ್ಜಿಗಳು ಸ್ವೀಕಾರ:
ಜಮೀನು ಸರ್ವೆ, ನದಿ–ರಸ್ತೆ ಒತ್ತುವರಿ, ಅಕ್ರಮ ಕಟ್ಟಡಗಳ ನಿರ್ಮಾಣ, ಪಡಿತರ ಚೀಟಿ ಸಮಸ್ಯೆ, ಗ್ರಾಪಂ ಇಸ್ವತ್ತು, ಕಲ್ಲುಕ್ವಾರೆ ಶಬ್ದ, ಮಾಹಿತಿನೇ ನೀಡೋದಿಲ್ಲ, ಪಹಣಿ ಸಮಸ್ಯೆ, ಸಾಗುವಳಿ ಚೀಟಿ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ, ಆಹಾರ, ಸರ್ವೆ, ಕಂದಾಯ, ಗ್ರಾಪಂಗೆ ಸೇರಿದ ೫೬ಜನರಿಂದ ಸಮಸ್ಯೆಗಳ ಅರ್ಜಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿ ಕೆಲವನ್ನು ಸ್ಥಳದಲ್ಲೇ ಬಗೆಹರಿಸಿ ಇನ್ನೂಳಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನದಿ ಒತ್ತುವರಿ ತೆರವಿಗೆ ಮೀನಾಮೇಷ:
ಕೊರಟಗೆರೆ ಪಟ್ಟಣದಲ್ಲಿ ಹಾದುಹೋಗುವ ಸುವರ್ಣಮುಖಿ ನದಿಯು ಮುಕ್ಕಾಲು ಭಾಗದಷ್ಟು ಜಮೀನು ಖಾಸಗಿ ವ್ಯಕ್ತಿಗಳ ಒತ್ತುವರಿಗೆ ಬಲಿಯಾಗಿದೆ. ಇದರಲ್ಲಿ ಖಾಸಗಿ ಕಟ್ಟಡಗಳನ್ನ ನಿರ್ಮಿಸಿಕೊಂಡಿರುತ್ತಾರೆ ಹನುಮಂತಪುರ ಸರ್ವೆ ನಂ.17, 18ಮತ್ತು ೧೯ ಅಕ್ರಮವಾಗಿ 160 ಕ್ಕೂ ಅಧಿಕ 2012 ಕೂಡ ಅನುಮತಿ ಪಡೆದು ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಅನಧಿಕೃತವಾಗಿ ಇಸ್ವತ್ತು ಮಾಡಲಾಗಿದೆ ಮತ್ತು ಬೋಡಬಂಡೇನಹಳ್ಳಿ ಸರ್ವೆ ನಂ.೪೪ರಲ್ಲಿ ಅಕ್ರಮವಾಗಿ ಹತ್ತಾರು ಎಕರೇ ಅಕ್ರಮ ವಾಗಿ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಹಾಗೂ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು, ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಭೂಕಬಳಿಕೆ ನ್ಯಾಯಮಂಡಳಿಗೆ ದೂರು ನೀಡಿ ಕ್ರಮ ಕೈಗೊಳ್ಳದೆ ಹೋದರೆ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
ಮಠದ ಆಸ್ತಿ ಅಕ್ರಮ ಪರಬಾರೆ:
ಮುಜರಾಯಿ ಇಲಾಖೆಯ ಮಠದ ಧಾರ್ಮಿಕ ಕಾರ್ಯಗಳಿಗೆ ನೀಡಿದ ಕೋಡ್ಲಹಳ್ಳಿಯ ಬಳ್ಳಾರಿ ಉಜ್ಜಯಿನಿ ಪೀಠದ ಖಾಸಾ ಶಾಖಾ ಸತ್ಯಧರ್ಮದ ಮಠದ ಸುಮಾರು 18 ಎಕರೇ ಇನಾಂ ಭೂಮಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮತ್ತು ಕೋಡ್ಲಹಳ್ಳಿಯಲ್ಲಿ ಇಲ್ಲದೇ ಇರುವ ದೇವರ ಹೆಸರಿನಲ್ಲಿ 15 ಕೋಟಿಗೂ ಅಧಿಕ ತಸ್ತಿಕ್ ಹಣವನ್ನು ಬೆಂಗಳೂರಿನ ಉತ್ತಾರಾಧಿ ಮಠಕ್ಕೆ ಅನಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಹೈಕೋರ್ಟ್ ವಕೀಲ ಪರಮೇಶಾರಾಧ್ಯ ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


