nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ

    November 2, 2025

    ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ

    November 2, 2025

    ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ

    November 2, 2025
    Facebook Twitter Instagram
    ಟ್ರೆಂಡಿಂಗ್
    • ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ
    • ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ
    • ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ
    • ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !
    • ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಲ್ಲಿ ಶ್ರೀಮಂತ: ತಹಶೀಲ್ದಾರ್ ಮಂಜುನಾಥ್ ಕೆ.
    • ‘ಯುವ ಶಕ್ತಿ’ ರಾಷ್ಟ್ರದ ಬೆನ್ನೆಲುಬು, ಯುವ ಜನತೆ ತಮ್ಮ ಒಳಗಿನ ಶಕ್ತಿಯನ್ನು ಗುರುತಿಸಿಕೊಳ್ಳಿ: ಕುಂಚಶ್ರೀ
    • ಕೊರಟಗೆರೆ: ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ: ಅಧ್ಯಕ್ಷರಾಗಿ ಈಶ್ವರಯ್ಯ,  ಉಪಾಧ್ಯಕ್ಷರಾಗಿ ಭಾಗ್ಯಮ್ಮ ಆಯ್ಕೆ
    • “ಭ್ರಷ್ಟಾಚಾರದ ವಿರುದ್ಧ ಅರಿವು ಸಪ್ತಾಹ–2025” ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೋಟೆನಾಯಕನ ಹಳ್ಳಿ: ಮಕ್ಕಳ ತಲೆ ಮೇಲೆ ಬೀಳುತ್ತಿವೆ ಸಿಮೆಂಟ್ ನ ತುಂಡುಗಳು | ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದರೂ ಹೇಳುವವರಿಲ್ಲ, ಕೇಳುವವರಿಲ್ಲ!
    Uncategorized December 9, 2021

    ಕೋಟೆನಾಯಕನ ಹಳ್ಳಿ: ಮಕ್ಕಳ ತಲೆ ಮೇಲೆ ಬೀಳುತ್ತಿವೆ ಸಿಮೆಂಟ್ ನ ತುಂಡುಗಳು | ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದರೂ ಹೇಳುವವರಿಲ್ಲ, ಕೇಳುವವರಿಲ್ಲ!

    By adminDecember 9, 2021No Comments2 Mins Read
    indian schools

    ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ

    ತಿಪಟೂರು: ಪ್ರಪಂಚದಲ್ಲಿಯೇ‌ ಮೊದಲ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದು ನಮ್ಮ ದೇಶದಲ್ಲೇ ( ನಳಂದ ವಿಶ್ವವಿದ್ಯಾಲಯ ಕ್ರಿ.ಶ. 427) ಎಂಬ ಹೆಗ್ಗಳಿಕೆ ಎಲ್ಲಾ ಭಾರತೀಯರಿಗು ಹೆಮ್ಮೆಯ ವಿಷಯ. ಆದರೆ ಇಂದಿನ ನಮ್ಮ ದೇಶದ ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳ ಅವಸ್ಥೆಯನ್ನು ನೋಡಿ ಸ್ವತಃ ಭಾರತೀಯರಿಗೆ ನಾಚಿಕೆ ಆಗುತ್ತಿದೆ. ಇದಕ್ಕೆ ಕಾರಣ ಶಾಸಕಾಂಗವೋ, ಕಾರ್ಯಾಂಗವೋ ಇಲ್ಲ ಪ್ರಜೆಗಳೋ ಎಂಬ ಒಂದಕ್ಕೊಂದು ಸರಪಳಿ ಕಾರಣಗಳು ನಮ್ಮ ಕಣ್ಣೆದುರಿಗೆ ಕಾಣುತ್ತವೆ.


    Provided by
    Provided by

    ತಿಪಟೂರು ತಾಲ್ಲೂಕಿನ ಕೋಟೆನಾಯಕನಹಳ್ಳಿಯ ಸರ್ಕಾರಿ “ಮಾದರಿ” ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ನೋಡಿದರೆ ಇಲ್ಲಿನ ಜನಪ್ರತಿನಿದಿಗಳು ಮತ್ತು ಸರ್ಕಾರಿ‌ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಹೆಸರಲ್ಲಿ ಮಾತ್ರ ” ಮಾದರಿ ” ಎಂಬುದು ಕಾಣುತ್ತಿದೆ. ಆದರೆ, ಇಂತಹ ಅಪಾಯಕಾರಿ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಕೊಟ್ಟ ಸರ್ಕಾರದ ನಡೆ ಮಾದರಿಯೇ? ಇಲ್ಲಿನ ಜನಪ್ರತಿನಿಧಿಗಳು ಮಾದರಿಯೇ ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ.

    ಕೇವಲ 15 ವರ್ಷಗಳ ಹಿಂದೆ ಉದ್ಘಾಟನೆಯಾದ ಶಾಲಾ ಕಟ್ಟಡ ಇಂದು ಶಿಥಿಲಾವಸ್ಥೆ ತಲುಪಿದೆ. ಶಾಲೆಯ ಮೇಲ್ಛಾವಣಿಗಳು, ಕಿತ್ತು ಬಂದು ಒಂದೊಂದು ತುಂಡುಗಳು ವಿದ್ಯಾರ್ಥಿಗಳ ತಲೆಗೆ ಬೀಳುತ್ತಿವೆ. ಯಾವೊಬ್ಬ ಜನಪ್ರತಿನಿದಿಯಾಗಲೀ , ಅಧಿಕಾರಿಯಾಗಲೀ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಅರಿತು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಪಕ್ಷ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎನ್ನುವ ಇಚ್ಛಾ ಶಕ್ತಿಯೂ ಅವರಿಗೆ ಇದ್ದಂತಿಲ್ಲ.

    ಮೊದಲೇ ಹಾಜರಾತಿಯ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದೆ. ಈ ಸಂದರ್ಭದಲ್ಲಿ ಇಂತಹ ಶಾಲಾ ಅವ್ಯವಸ್ಥೆಗಳಿಂದಾಗಿ ಸರ್ಕಾರಿ ಶಾಲೆಗಳು ಎಂದರೆ ಪೋಷಕರಿಗೆ ತಾತ್ಸರ ಮನೋಭಾವ ಉಂಟಾಗಿ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿವೆ ಎನ್ನುವುದು ವಾಸ್ತವವಾಗಿದೆ.

    15 ವರ್ಷಗಳ ಹಿಂದೆ ಹೊಸ ಕಟ್ಟಡದಲ್ಲಿ ವ್ಯಾಸಂಗ ಮಾಡಿ ಹೋದ ಹಳೇ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಇಲ್ಲಿನ ಅವ್ಯವಸ್ಥೆ ಕಂಡು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. “ಜ್ಞಾನ ದೇಗುಲ” ಎಂಬುದು ಶಾಲೆಗಳಿಗಿರುವ ಪರ್ಯಾಯ ಹೆಸರು. ಇಂತಹ ಜ್ಞಾನ ದೇಗುಲವನ್ನು  ಸರ್ಕಾರ ಮತ್ತು ಜನಪ್ರತಿನಿಧಿಗಳು ಕೈ ಬಿಟ್ಟರೂ, ನಾವು ಬಿಡುವುದಿಲ್ಲ. ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳೆಲ್ಲರೂ ಸೇರಿಕೊಂಡು ಕಟ್ಟಡವನ್ನು ದುರಸ್ತಿಗೊಳಿಸುತ್ತೇವೆ. ಆದ್ದರಿಂದ ಹಳೇ ವಿದ್ಯಾರ್ಥಿಗಳು ಕೈ ಜೋಡಿಸಬೇಕು” ಎಂದು ಇಲ್ಲಿನ ಹಳೆಯ ವಿದ್ಯಾರ್ಥಿಗಳಾದ ಮೋಹನ್ ಮತ್ತು ಸ್ನೇಹಿತರು ತಮ್ಮ ನೋವನ್ನು ತೋಡಿಕೊಂಡರು.

    ಜನರೇ ಶಾಲೆಗಳನ್ನು ಸರಿಪಡಿಸಿಕೊಳ್ಳುವುದಾದರೆ, ಜನಪ್ರತಿನಿಧಿಗಳ್ಯಾಕೆ? ಶಾಲೆಗಳ ಅವ್ಯವಸ್ಥೆಗಳನ್ನು ಕೇಳುವ ಯಾವುದೇ ವ್ಯವಸ್ಥೆಗಳಿಗೂ ಈ ಶಾಲೆ ಇಲ್ಲೂ ಕಂಡಿಲ್ಲವೇ? ಎನ್ನುವ ಪ್ರಶ್ನೆಗಳನ್ನು ಇಲ್ಲಿನ ಗ್ರಾಮಸ್ಥರು ಕೇಳುತ್ತಿದ್ದಾರೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವುದರತ್ತ ತಮ್ಮ ಸಹಕಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ವನ್ಯಜೀವಿ–ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

    October 28, 2025

    ತುಮಕೂರು  | ‘ಸಾಬೂನು ಮೇಳ’ಕ್ಕೆ  ಚಾಲನೆ ನೀಡಿದ  ಸಿದ್ಧಲಿಂಗಮಹಾಸ್ವಾಮೀಜಿ

    October 27, 2025

    ಹೋರಿ ತಿವಿದು ಓರ್ವ ವಯೋವೃದ್ಧ ಸಾವು

    October 23, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ: ಡಾ.ಪೂರ್ಣಿಮ ಅಭಿಮತ

    November 2, 2025

    ಸರಗೂರು: ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟಿದ್ದೇವೆ ಎಂದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪೂರ್ಣಿಮ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ…

    ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುವ ಸಾಹಿತಿಗಳಿಂದ ‘ಕನ್ನಡ ಸಾಹಿತ್ಯ’ಕ್ಕೆ ಅಪಾಯ: ಹೆಚ್.ಎಂ.ವೆಂಕಟೇಶ್  ಕಳವಳ

    November 2, 2025

    ಹುಲಿ ದಾಳಿಗೆ ರೈತರು ಬಲಿ ಪ್ರಕರಣ: ಘಟನೆ  ಮರುಕಳಿಸದಂತೆ ಮುಂಜಾಗೃತಾ ಕ್ರಮ: ಸಚಿವ ಡಾ.ಎಸ್.ಸಿ.ಮಹದೇವಪ್ಪ

    November 2, 2025

    ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !

    November 2, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.