ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಎರಡನೇ ಹಂತ ಇಂದು ಮುಗಿದಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಕೇಂದ್ರ-ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿತು.
ಇದೇ ವೇಳೆ ಪಾದಯಾತ್ರೆ ವೇಳೆ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಜನರ ಕ್ಷಮೆಯನ್ನು ಕೇಳಿದೆ.ಕೋವಿಡ್ ಮೂರನೇ ಅಲೆ ಹಿನ್ನಲೆಯಿಂದಾಗಿ ಹಾಗೂ ಕೋರ್ಟ್ ಅದೇಶದ ಮೆರೆ ಕಾಂಗ್ರೆಸ್ ಕೈಗೊಂಡಿದ್ದ ಮೇಕೆದಾಟು ಪಾದಯಾತ್ರೆ ಜನವರಿ 9 ರಿಂದ 14ರ ವರೆಗೆ ಕನಕಪುರ ತಾಲ್ಲೂಕಿನ ಸಂಗಮದಿಂದ ಪ್ರಾರಂಭವಾಗಿ ರಾಮನಗರದಲ್ಲಿ ಸ್ಥಗಿತಗೊಂಡಿತ್ತು. ಮತ್ತೆ ಫೆ 27 ರಿಂದ ರಾಮನಗರದಿಂದ ಮಾರ್ಚ್ 4ಕ್ಕೆ ನ್ಯಾಷನಲ್ ಕಾಲೇಜ್ ಮೈದಾನವರೆಗೆ ಸಾಗಲಿದೆ.
ಮೊದಲಿಗೆ ಭಾಷಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡುತ್ತಾ, ರಾಮನಗರದಲ್ಲಿ ಮೇಕೆದಾಟು 1.0 ಸಂದರ್ಭದಲ್ಲಿ ಹತ್ತು ಎಫ್ ಐ ಆರ್ ಹಾಕಿ, ನಮ್ಮನ್ನು ಜೈಲಿಗೆ ಕಳಿಸಲು ಕುತಂತ್ರ ನಡೆಸಿದ್ದರು.ಈಗ ಪಾದಯಾತ್ರೆ ಯಶಸ್ಸು ನನ್ನ ಯಶಸ್ಸಲ್ಲ ಇದು ಪಕ್ಷ ಭೇದ ಮರೆತು ರಾಜ್ಯ ಜನ ಬೆಂಬಲ ನೀಡಿದರು.ರಾಜ್ಯದ ಹಿತಕ್ಕೆ ಜೈಲಿಗೂ ಹೋಗಲು ಎಲ್ಲಾ ನಾಯಕರು ಸಿದ್ದ ಎಂದು ಹೇಳಿದರು.ಅನೇಕ ಬಿಜೆಪಿ,ಜೆಡಿಎಸ್ ಪಕ್ಷದ ಪ್ರಮುಖರು, ಪಾದಯಾತ್ರೆಯಲ್ಲಿ ಭಾಗವಹಿಸಿದರು.ನಾವು ಜೈಲಿಗೆ ಹೋಗಲು ಸಿದ್ದ ಎಂದು ವೇದಿಕೆಯಲ್ಲಿರುವ ನಾಯಕರು ಸಂಕಲ್ಪ ಮಾಡಿದ್ದೇವೆ.20 ಟಿಎಂಸಿ ನೀರಿನಿಂದ 30 ವರ್ಷಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಹೋರಾಟ ನಡೆಸಿದ್ದೇವೆ.ಆದ್ದರಿಂದ ಬೆಂಗಳೂರಿನ ಜನರು ದಯಮಾಡಿ ಕ್ಷಮಿಸಬೇಕು’ ಅವರು ಎಂದು ಮನವಿ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy