ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಅಲೆಮಾರಿ ಸಮುದಾಯದ ಕಾಲೋನಿಯಲ್ಲಿ 50 ಲಕ್ಷ ರೂಪಾಯಿಗಳ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್.ವಿ. ವೆಂಕಟೇಶ್ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅಲೆಮಾರಿ ಸಮುದಾಯದವರು ಮೊದಲು ಅಭಿವೃದ್ಧಿಯಾಗಬೇಕು. ಜೊತೆಗೆ ಈ ಕಾಲೋನಿಯಲ್ಲಿ ನೀರಿನ ಸಮಸ್ಯೆ ಇದೆ ಎಂದು ನನ್ನ ಕಿವಿಗೆ ಮುಖಂಡರು ತಿಳಿಸಿದ್ದಾರೆ. ಕೇವಲ ಮೂರು ದಿನದಲ್ಲಿ ಬೋರ್ ವೆಲ್ ಹಾಕಿಸಿ ಕೊಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಎಲ್.ಕೆ. ರಾಘವೇಂದ್ರ, ಮುಖಂಡರುಗಳಾದ ST ನಾಗರಾಜು, ಸಂಶುದ್ದಿನ್, ಎನ್.ಆರ್.ಅಶ್ವಥ್ ಕುಮಾರ್, ವಿಶ್ವನಾಥ್ , ಉಮೇಶ್. ಟಿ, SVT ಪ್ರಸಾದ್, ಶಿವಾನಂದಪ್ಪ, ಜಯಕಿರ್ತಪ್ಪ, ಆನಂದ್, ಜಾಫರ್, ಗ್ಯಾಸ್ ಕೃಷ್ಣಪ್ಪ , MC ರಾಜಣ್ಣ, MC ಜಯರಾಮ್, ಮುನ್ನಾ, ಖಲಿಲ್, ಸೇರಿ ಇನ್ನೂ ಅನೇಕ ಪ್ರಮುಖ ಮುಖಂಡರು ಇದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW