ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೋಕಿನ ಗಡಿ ಗ್ರಾಮ ಕಾರೇ ಕುರ್ಚಿ ಶಿವಶರಣ ಶ್ರೀ ಗುರುಸಿದ್ದರಾಮೇಶ್ವರರ ತಪೋಭೂಮಿ ದೊಣೆಗಂಗಾಕ್ಷೇತ್ರ ಮೂಲಸೌಕರ್ಯಗಳಿಲ್ಲದೇ ಭಕ್ತರು ಪರದಾಡುವಂತಾಗಿದೆ.
ಕರ್ನಾಟಕ ಸೇರಿದಂತೆ ದೇಶಾದಾಧ್ಯಂತ ಅಸಂಖ್ಯಾತ ಭಕ್ತರನ್ನ ಹೊಂದಿರುವ ಕಾಯಕ ಯೋಗಿ ಶಿವಶರಣ ಶ್ರೀ ಗುರುಸಿದ್ದರಾಮೇಶ್ವರರು ಲೋಕ ಕಲ್ಯಾಣಕ್ಕಾಗಿ 12ವರ್ಷಗಳ ಹಠಯೋಗದ ಮೂಲಕ ತಪಸ್ಸು ಗೈದ ಪೂಣ್ಯಭೂಮಿ ನಾಡಿನ ಕಲ್ಯಾಣಕ್ಕಾಗಿ ಗಂಗೋದ್ಬವವಾಗಿರು ಈ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತಾಧಿಗಳು ಭೇಟಿ ನೀಡುತ್ತಾರೆ. ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕಾರೇಕುರ್ಚಿ ದೊಣೆಗಂಗಾಕ್ಷೇತ್ರ ತಾಲ್ಲೂಕಿನ ಗಡಿ ಗ್ರಾಮವಾಗಿದ್ದು, ತಿಪಟೂರು ಹಾಗೂ ಗುಬ್ಬಿ ತಾಲ್ಲೂಕಿನ ಗಡಿಗೆ ಹೊಂದಿಕೊಂಡಂತಿರುವ ಕಾರಣ ರಾಜಕೀಯ ನಾಯಕರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ನಾಡಿನಾದ್ಯಂತ ಅಸಂಖ್ಯಾತ ಭಕ್ತರನ್ನ ಹೊಂದಿರುವ ಶ್ರೀ ಸಿದ್ದರಾಮೇಶ್ವರರ ತಪೋ ಭೂಮಿಗೆ ಸಂಪರ್ಕಿಸಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ರಾಷ್ಟ್ರೀಯ ಹೆದ್ದಾರಿ 206 ಕೇವಲ 3 ಕಿಲೋಮೀಟ್ ಅಂತರದಲ್ಲಿ ಶ್ರೀಕ್ಷೇತ್ರವಿದ್ದು, ದೊಣೆಗಂಗಾಕ್ಷೇತ್ರಕ್ಕೆ ಸರಿಯಾದ ಸಂಪರ್ಕವಿಲ್ಲದಂತಾಗಿದೆ.
ಶ್ರೀಕ್ಷೇತ್ರಕ್ಕೆ ಮಣ್ಣಿನ ರಸ್ತೆಯಲ್ಲಿ ಸಾಗಬೇಕಿದ್ದು ಮಳೆಗಾಲದಲ್ಲಿ ಕೆಸರುಮಯವಾದರೇ ಬೇಸಿಗೆಯಲ್ಲಿ ಧೂಳುಮಯವಾಗುತ್ತದೆ. ಗುಂಡುಗೊಟರುಗಳಿಂದ ಕೂಡಿರುವ ಈ ದಾರಿಯನ್ನ ಸಾಗುವುದೇ ದೊಡ್ಡ ಸಾಹಸವಾಗಿದೆ. ಕ್ಷೇತ್ರಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲ. ದಾರಿಯಲ್ಲಿ ಸಾಗಲು ಕರಡಿ,ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಭಯದ ನಡುವೆಯೇ ಶ್ರೀಕ್ಷೇತ್ರಕ್ಕೆ ಸಾಗಬೇಕಿದೆ.
ಪ್ರತಿದಿನ ಸಾವಿರಾರು ಜನ ಭೇಟಿನೀಡುವ ಕ್ಷೇತ್ರದಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಹಾಗೂ ಕ್ಷೇತ್ರಕ್ಕೆ ಬರುವ ಭಕ್ತರಿಗೆ ತಂಗಲು ಯಾವುದೇ ವ್ಯವಸ್ಥೆಗಳು ಇಲ್ಲವಾಗಿದೆ . ಸುಂದರ ಕಾನನದ ಮಧ್ಯ ರಮಣೀಯ ಪ್ರಕೃತಿ ಸೌಂದರ್ಯದ ಸೊಬಗನ್ನ ಹೊತ್ತು ನಿಂತಿರುವ ಕ್ಷೇತ್ರಕ್ಕೆ ಮೂಲ ಸೌಕರ್ಯ ಬದಗಿಸ ಬೇಕು ಎಂದು ತಿಪಟೂರು ಹಾಗೂ ಗುಬ್ಬಿ ಶಾಸಕರಿಗೆ ಅನೇಕ ಭಾರೀ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ಭಕ್ತರಾಗಿದ್ದರೂ, ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲ.
ಕ್ಷೇತ್ರದ ನಿರ್ವಹಣೆಗಾಗಿ ಶಿವಯೋಗಿ ಆಶ್ರಮದ ಮೂಲಕ ನಿತ್ಯ ಪೂಜಾಕೈಂಕರ್ಯಗಳು ನಡೆಯುತ್ತಿದ್ದು, ಭಕ್ತರು ಹಾಗೂ ದಾನಿಗಳ ಸಹಾಯದಿಂದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ನಿತ್ಯದಾಸೋಹ ನಡೆಸಲಾಗುತ್ತಿದೆ. ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರ ಕೂಡಲೇ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕು ಶ್ರೀಕ್ಷೇತ್ರಕ್ಕೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB