ಹಿಜಾಬ್ ವಿವಾದದಿಂದ ಹೊತ್ತಿಕೊಂಡ ಕಿಚ್ಚು ಮಲೆನಾಡು, ಕರಾವಳಿ, ದಕ್ಷಿಣ ಕನ್ನಡ ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಸುವ ಹಂತ ತಲುಪಿದ್ದು, ಈಗ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿ ಮಾಡಲು ನಿಷೇಧ ಹೇರಬೇಕು. ಹಲಾಲ್ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂಪರ ಸಂಘಟನೆಗಳು ಚಿಂತನೆ ನಡೆಸಿವೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ಹಲವು ಅಂಗಡಿಗಳಲ್ಲಿ ಖರೀದಿಗೆ ನಿಷೇಧ ಹೇರಲಾಗಿದ್ದು, ರಾಜಧಾನಿಯಲ್ಲೂ ಕೂಡ ನಿಷೇಧ ಹೇರಬೇಕೆಂಬ ಮಾತುಗಳು ಕೇಳಿಬಂದಿವೆ. ಜಾತ್ರೆ, ಮಹೋತ್ಸವ ರಥೋತ್ಸವ ಸಮಾರಂಭಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ನಿಷೇಧ ಹೇರಲಾಗಿದೆ. ಅದೇ ರೀತಿ ಯಾವುದೇ ಕಾರಣಕ್ಕೂ ವಸ್ತುಗಳನ್ನು ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡಲು ಮುಂದಾಗಿವೆ.ಬೆಂಗಳೂರಿನ ಬಹುತೇಕ ಮಾಲ್, ಅಂಗಡಿ, ಮಳಿಗೆಗಳಲ್ಲಿ ಈ ವರ್ಗದ ಸಿಂಬಲ್ ಇರುವ ವಸ್ತುಗಳ ಖರೀದಿ ಮಾಡಬಾರದು ಎಂದು ನಿರ್ಧರಿಸಲಾಗಿದೆ.
ಈಗ ಮುಸ್ಲಿಮರು ಹಲಾಲ್ ಅಂತ ಹೊಟೇಲ್ ಮುಂದೆ ಬೋರ್ಡ್ ಇದ್ದರೆ ಮಾತ್ರ ಹೊಟೇಲ್ಗಳಿಗೆ ಹೋಗುತ್ತಾರೆ, ಇಲ್ಲದಿದ್ದರೆ ಹೋಗುವುದಿಲ್ಲ. ಅಂತಹ ಹೊಟೇಲ್ಗಳಿಗೆ ಹಿಂದೂಗಳು ಕೂಡ ಹೋಗಬಾರದು ಎಂದು ಕೆಲ ಸಂಘಟನೆಗಳು ಆಗ್ರಹಿಸಿವೆ.ಮುಖ್ಯವಾಗಿ ಮಾಂಸ, ಕೋಳಿ ಅಂಗಡಿಗಳಲ್ಲಿ ಖರೀದಿಸುವುದನ್ನು ನಿಷೇದಿಸಬೇಕು. ಮುಂದಿನ ತಿಂಗಳು ಯುಗಾದಿ ಹಬ್ಬವಿದೆ. ಬಹುತೇಕ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಈ ಬಾರಿ ಇಂತಹ ಅಂಗಡಿಗಳಿಂದ ಮಾಂಸ, ಕೋಳಿ ಖರೀದಿ ಮಾಡಬಾರದು ಎಂದು ಹಿಂದೂ ಸಂಘಟನೆಗಳವರು ಹೇಳಿಕೆ ನೀಡಿದ್ದಾರೆ.ಇನ್ನು ಬಹುತೇಕ ಪ್ಯಾಕ್ಡ್ ಪದಾರ್ಥಗಳ ಮೇಲೆ ಹಲಾಲ್ ಚಿತ್ರವಿರುತ್ತದೆ. ಚಾಕೊಲೇಟ್, ಗೋ, ಅಕ್ಕಿ ಮೂಟೆ, ಅಡುಗೆ ಎಣ್ಣೆ, ಮ್ಯಾಗಿ ಸೇರಿದಂತೆ ಹಲವು ಪ್ಯಾಕ್ಡ್ ವಸ್ತುಗಳ ಮೇಲೆ ಹಲಾಲ್ ಮುದ್ರೆ ಇರುತ್ತದೆ. ಇಂತಹ ವಸ್ತುಗಳ ಖರೀದಿಗೂ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB