nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸುತ್ತೂರು ಶ್ರೀಗಳ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ: ಡಿ.ಜಿ.ಶಿವರಾಜು

    October 24, 2025

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025
    Facebook Twitter Instagram
    ಟ್ರೆಂಡಿಂಗ್
    • ಸುತ್ತೂರು ಶ್ರೀಗಳ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ: ಡಿ.ಜಿ.ಶಿವರಾಜು
    • ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌
    • ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ
    • ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು
    • ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಈ ಬಾರಿ ದಾಖಲೆ
    • ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿದೆ?: ಪರಮೇಶ್ವರ್ ಪ್ರಶ್ನೆ
    • ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ
    • ಅಕ್ಟೋಬರ್ 31:  ಕುಂಚಿಗರ ಸಂಘದ ನೂತನ ಭವನದ ಉದ್ಘಾಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾತಾಳಕ್ಕೆ ಇಳಿದ ಹುಣಸೆ ಹಣ್ಣಿನ ಬೆಲೆ: ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಒತ್ತಾಯ
    ತುಮಕೂರು March 29, 2022

    ಪಾತಾಳಕ್ಕೆ ಇಳಿದ ಹುಣಸೆ ಹಣ್ಣಿನ ಬೆಲೆ: ಬೆಂಬಲ ಬೆಲೆ ಘೋಷಿಸಲು ಸರ್ಕಾರಕ್ಕೆ ಒತ್ತಾಯ

    By adminMarch 29, 2022No Comments2 Mins Read
    hunase

    ತುಮಕೂರು: ನಾಡಿನಾದ್ಯಂತ ಹುಣಸೆ ಹಣ್ಣಿನ ಬೆಲೆಯು ಕುಸಿದಿರುವುದರಿಂದ ರೈತರಿಗೆ ನೆರವಾಗಲು ಹುಣಸೆಹಣ್ಣಿಗೂ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಹುಣಸೆಹಣ್ಣಿನ ಖರೀಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಸರ್ಕಾರವನ್ನು ಒತ್ತಾಯಿಸಿದರು.

    ನಗರದ ಎಪಿಎಂಸಿಯ ಹುಣಸೆಹಣ್ಣಿನ ಮಂಡಿಯಲ್ಲಿ ಸೋಮವಾರ ರೈತರು ಮತ್ತು ಮಂಡಿ ವರ್ತಕರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಹುಣಸೆ ಬೆಳೆಯುವ ಪ್ರದೇಶವಾದ ಜಿಲ್ಲೆಯ ರೈತರ ಪಾಲಿಗೆ ಯುಗಾದಿ ಶುಭ ಸೂಚನೆ ಕೊಟ್ಟಿಲ್ಲ. ಎಪಿಎಂಸಿಯಲ್ಲಿ ಹುಣಸೆಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಬೆಲೆ ಕುಸಿದ ರೀತಿ ಕಂಡ ರೈತರು ಅಕ್ಷರಶಃ ತತ್ತರಿಸಿದ್ದಾರೆ ಎಂದರು.


    Provided by
    Provided by
    Provided by

    ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗ್ರಾಮಾಂತರ ಸೇರಿದಂತೆ ಪಕ್ಕದ ಚಿತ್ರದುರ್ಗ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹೀಗೆ ಬಯಲು ಸೀಮೆಯ ಕಲ್ಪವೃಕ್ಷ ಕಾಮದೇನು ಹುಣಸೆ. ಇದೊಂದು ಬಂಗಾರದ ಬೆಳೆ. ಬೀಜ, ಹಿಪ್ಪೆ, ನಾರು, ತೊಗಟೆ ಸಂಪೂರ್ಣ ಬಳಕೆಗೆ ಉಪಯೋಗಿಸಲ್ಪಡುವ ಹುಣಸೆ ಜನೋಪಯೋಗಿರುವ ಫಸಲು, ಒಂದು ಮರಕ್ಕೆ 1,500 ರಿಂದ 3,000 ರೂ. ಇದ್ದ ಬೆಲೆ ಈಗ 500 ರಿಂದ 800 ರೂಪಾಯಿಗೆ ಖೇಣಿದಾರರು ಕೇಳುತ್ತಿದ್ದಾರೆ. ಹಿಂದೆ ಕ್ವಿಂಟಾಲ್‌ ಗೆ 28,000ದಿಂದ 30,000 ರೂ. ಇದ್ದ ಬೆಲೆ, ಈಗ ಕೇವಲ 9,000 ಸಾವಿರದಿಂದ 20,000 ರೂ.ಗೆ ಕುಸಿದು ಆತಂಕ ಸೃಷ್ಠಿಸಿದೆ ಎಂದರು.

    ಆದ್ದರಿಂದ ಸರ್ಕಾರ ತಕ್ಷಣ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು ಹಾಗೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇದರ ಜೊತೆಗೆ ಕೋಲ್ಡ್ ಸ್ಟೋರೇಜ್ ಅತ್ಯವಶ್ಯಕವಾಗಿ ಬೇಕಾಗಿದೆ. ಅಡಕೆ, ತೆಂಗು  ಸೇರಿದಂತೆ ನೂರಾರು ಬೆಳೆಗಳಿಗೆ “ಪರಿಹಾರ, ಅನುದಾನ, ಸಾಲಸೌಲಭ್ಯ” ಗಳನ್ನು ಸರ್ಕಾರ ನೀಡಿದಂತೆ ಹುಣಸೆ ಬೆಳೆಗೂ ಸಹ ಅನುದಾನ, ಪರಿಹಾರ, ಸಾಲ-ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

    ಹುಣಸೆ ಬೆಳೆ ರೈತರ ಜೀವನಾಡಿಯಾಗಿದೆ. ಇದು ಮಳೆಯಾಶ್ರಿತ ರೈತರ ಬೆಳೆಯಾಗಿದ್ದು, ವೈಜ್ಞಾನಿಕ ಸಮೀಕ್ಷೆ ನಡೆಸಿ ಮೌಲ್ಯವನ್ನು ಹೆಚ್ಚಿಸಬೇಕು ಹಾಗೂ ಉಪ ಉತ್ಪನ್ನಗಳ ಕುರಿತು ಅರಿವು ಮೂಡಿಸಬೇಕು. ಪ್ರತಿದಿನ ಹುಣಸೆ ಮರಗಳಲ್ಲಿ ಹಣ್ಣನ್ನು ಉದುರಿಸಿ, ಕುಟ್ಟಿ, ನಾರು ತೆಗೆಯಲು ಕೂಲಿ, ಹುಣಸೆಹಣ್ಣು ಆರಿಸುವ, ಅದನ್ನು ತಂದು ಬೀಜ ಬೇರ್ಪಡಿಸುವ, ನಾರು ತೆಗೆಯುವ ಖರ್ಚು, ಮಾರುಕಟ್ಟೆಗೆ ಸಾಗಿಸಲು ವೆಚ್ಚ, ಯಾರ್ಡ್ಗಳಲ್ಲಿ ಜಾಗದ ಬಾಡಿಗೆ, ಇತ್ಯಾದಿ ಖರ್ಚುಗಳು ಹೇಳತೀರದಾಗಿದೆ. ಹೀಗಾಗಿ ಕೊಳ್ಳುವ ವರ್ತಕರಿಗೆ ಮತ್ತು ಬೆಳೆದ ರೈತರಿಗೆ ಕನಿಷ್ಟ ಬೆಲೆ ಸಿಗುವಂತಾಗಬೇಕು, ಮರಗಳಲ್ಲಿ ಕೊಳೆತರು, ವ್ಯಾಪಾರಿ ನೋಡುತ್ತಿಲ್ಲ, ಬೆಲೆ ಕುಸಿತದಿಂದಾಗಿ ರೈತರಿಗೂ ಮತ್ತು ವರ್ತಕರಿಗೂ ನಷ್ಟ. ಸರ್ಕಾರದ ವತಿಯಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆAದು ಮುರಳೀಧರ ಹಾಲಪ್ಪ ಆಗ್ರಹಿಸಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, 2018 ರಲ್ಲಿ ಹುಣಸೆಗೆ ಕ್ವಿಂಟಲ್ ಬೆಲೆ ಗರಿಷ್ಠ 25 ಸಾವಿರಕ್ಕೆ ಮಾರಾಟವಾಗಿತ್ತು 2019ರಲ್ಲಿ 16 ಸಾವಿರಕ್ಕೆ ಇಳಿದಿತ್ತು, ಆದರೆ 2020ರಲ್ಲಿ 35 ಸಾವಿರಕ್ಕೆ ಏರಿಕೆ ಕಂಡು ದಾಖಲೆಯ ಬರೆದಿತ್ತು. ಆದರೆ ಈಗ 9 ಸಾವಿರದಿಂದ  20 ಸಾವಿರಕ್ಕೆ ಇಳಿದಿರುವುದು ಆತಂಕ ಸೃಷ್ಠಿಸಿದೆ ಎಂದರು.

    ನವ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ನಾವು  ಅಂದುಕೊಂಡಿದ್ದ ಬೆಲೆಗೂ ಮಾರುಕಟ್ಟೆ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಮೊತ್ತಕ್ಕೆ ಮಾರಿದರೆ ನಮಗೆ ಏನೂ ಗಿಟ್ಟುವುದಿಲ್ಲ, ಸರ್ಕಾರ ಹುಣಸೆಗೆ ಬೆಂಬಲ ಬೆಲೆ ಘೋಷಿಸುವುದರ ಜೊತೆಗೆ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಎಪಿಎಂಸಿ ಸಹಾಯಕ ಕಾರ್ಯದರ್ಶಿಗಳಾದ ಹೊನ್ನೂರು ಸ್ವಾಮಿ ಮತ್ತು  ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಎಪಿಎಂಸಿ ಮಾಜಿ ಸದಸ್ಯ ಯದು, ಮುಖಂಡರಾದ ಟಿ.ಎಸ್.ನಿರಂಜನ್, ಮರಿಚೆನ್ನಮ್ಮ, ವಸಂತಮ್ಮ, ಗೀತಾ, ನಟರಾಜು, ಮಂಜುನಾಥ್, ಪ್ರಕಾಶ್, ಕೃಷ್ಣಮೂರ್ತಿ, ರಿಜ್ವಾನ್ ಪಾಷ, ಸಿ.ಡಿ.ರಾಜಪ್ಪ, ಸಂಜೀವ್, ಎಸ್. ಮಲ್ಲಿಕಾರ್ಜುನ್, ಡಿ.ಸಿ ಕೃಷ್ಣಮೂರ್ತಿ, ಗಿರಿಯಪ್ಪ ಆರ್.ಎಸ್, ಬಸವರಾಜು, ಸಿ.ಕೆ ಮಧು, ಕೆ.ದರ್ಶನ್, ಎಸ್. ದೊಡ್ಡಯ್ಯ, ರಾಮಣ್ಣ, ಬಿ.ತಿಮ್ಮಯ್ಯ, ರಂಗಣ್ಣ, ರಾಮಣ್ಣ, ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

    ವರದಿ: ಮಾರುತಿ ಪ್ರಸಾದ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ

    October 23, 2025

    ಜೂನಿಯರ್ ಕಾಲೇಜು ಮೈದಾನದ ತುಂಬಾ ಕಾಲಿಟ್ಟ ಕಡೆಯಲ್ಲಿ ಮೊಳೆಗಳು: ಜಿಲ್ಲಾಡಳಿತದ ನಿರ್ಲಕ್ಷ್ಯ!

    October 22, 2025

    ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ಕಂಪೆನಿ ನಿರ್ವಾಹಕನಿಗೆ ಪಂಗನಾಮ!

    October 21, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸುತ್ತೂರು ಶ್ರೀಗಳ ಕೊಡುಗೆ ಇಡೀ ವಿಶ್ವಕ್ಕೆ ಮಾದರಿ: ಡಿ.ಜಿ.ಶಿವರಾಜು

    October 24, 2025

    ಸರಗೂರು:  ಪಂಚದಾಸೋಹಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಸುತ್ತೂರು ಮಹಾಸಂಸ್ಥಾನ ಮಠದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಕೊಡುಗೆ…

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025

    ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು

    October 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.