ಶಿರಾ: ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 18ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ನಡೆಸಲಾಗುವುದು ಎಂದುಪತ್ರಿಕಾಗೋಷ್ಠಿಯಲ್ಲಿ ಮುಖಂಡರು ತಿಳಿಸಿದರು.
ಮೌಢ್ಯಾಚರಣೆಗಳಿಂದ ಜನರನ್ನು ರಕ್ಷಿಸಲು, ಶೋಷಣೆ ತಪ್ಪಿಸಲು, ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಸ್ಥಾಪಿಸಲಾಗಿದೆ. ಇದು ಒಂದು, ಜಾತಿ, ಧರ್ಮಕ್ಕೆ ಸೀಮಿತವಲ್ಲ. ವೈಚಾರಿಕ ಮನೋಭಾವದ ಎಲ್ಲರಿಗೂ ಅವಕಾಶವಿದೆ. ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಜನ ಸಾಮಾನ್ಯರಿಗೆ ತಲುಪಿಸಬೇಕಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ಧರಣಿ ಕುಮಾರ್, ತಾಲೂಕು ಸಂಚಾಲಕರಾದ ರಂಗರಾಜ್ , ಮಹಿಳಾ ಕಾರ್ಯಕರ್ತರು ಗಳಾದ ಶಿವಮ್ಮ , ರೇಖಾ ರಾಘವೇಂದ್ರ, ರೇಣುಕಮ್ಮ ಶಿವಕುಮಾರ್ , ವಿಜಯಲಕ್ಷ್ಮಿ ಪೂಜಾ ಪೆದ್ದರಾಜು, ಮಂಜುಳಾ ಶೇಷ ನಾಯಕ್ ವಿವರಿಸಿದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB