ಹಿರಿಯೂರು: ಒಮಿಕ್ರೋನ್ ಹಾಗೂ ಕೊರೊನಾ ಮಹಾಮಾರಿ ಕಾಯಿಲೆಯಿಂದ ಕಳೆದರೆಡು ವರ್ಷಗಳಿಂದ ವ್ಯಾಪಾರಿಗಳು ನಿರಂತರ ನಷ್ಟ ಅನುಭವಿಸಿದ್ದಾರೆ. ಈ ನಡುವೆ ಹಿರಿಯೂರು ನಗರದಲ್ಲಿ ನಡೆಯುತ್ತಿದ್ದ ಸಂತೆ ಪುನಃ ಆರಂಭವಾದರೂ ವ್ಯಾಪಾರವಿಲ್ಲದೇ ಜನರು ಕಂಗಾಲಾಗಿದ್ದಾರೆ.
ಬುಧವಾರ ಟಿ.ಬಿ.ಸರ್ಕಲ್ ನಲ್ಲಿ ಹಾಗೂ ಶನಿವಾರದಂದು ಹಿರಿಯೂರು ನಗರದಲ್ಲಿ ನಡೆಯುತ್ತದ್ದ ಸಂತೆ ಪುನಃ ಆರಂಭಗೊಂಡಿದೆ. ಆದರೆ, ಹಿರಿಯೂರು ನಗರದ ಸಂತೆ ಮೈದಾನದಲ್ಲಿ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಕುಳಿತಿರುವುದು ಕಂಡು ಬಂದಿದೆ.
ಶನಿವಾರ ಹಾಗೂ ಬುಧವಾರದಂದು ನಡೆಯುತ್ತಿದ್ದಂತಹ ವಾರದ ಸಂತೆ ಕಳೆದ ಎರಡು ವರ್ಷಗಳಿಂದ ಕೊರೊನಾ ಹಾಗೂ ಓಮಿಕ್ರೋನ್ ಎಂಬ ಸಾಂಕ್ರಾಮಿಕ ಕಾಯಿಲೆಗಳಿಂದ ಸ್ಥಗಿತಗೊಂಡಿತ್ತು . ಇದೀಗ ವಾರದ ಸಾಂಕ್ರಾಮಿಕ ಕಾಯಿಲೆಯು ಇದೀಗ ನಿಯಂತ್ರಣಕ್ಕೆ ಬಂದಿರುವುದರಿಂದ ಕಳೆದ ಶನಿವಾರದಿಂದ ಹಿರಿಯೂರು ನಗರಸಭೆ ಆಡಳಿತದ ಆದೇಶದಂತೆ ವ್ಯಾಪಾರಸ್ಥರು ಶನಿವಾರ ಹಾಗೂ ಬುಧವಾರದ ಸಂತೆಯಲ್ಲಿ ವ್ಯಾಪಾರ ಆರಂಭ ಮಾಡಿದ್ದರು.
ಕಳೆದ ವಾರವೂ ಇದೇ ಸ್ಥಿತಿ ಇತ್ತು. ಈ ವಾರ ಕೂಡ ಇದೇ ಸ್ಥಿತಿ ಮುಂದುವರಿದಿದೆ. ಸಂತೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಜನರು ಬರುತ್ತಿಲ್ಲ. ಹಾಗಾಗಿ ನಗರ ಸಭಾ ಅಧಿಕಾರಿಗಳು ಸಂತೆಯ ಬಗ್ಗೆ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.
ಹಿರಿಯೂರು ನಗರದ ಸಂತೆ ನಡೆಯುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಮತ್ತೆ ಮತ್ತೆ ವಿಫಲರಾಗುತ್ತಿದ್ದಾರೆ ಎಂದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ: ಮುರುಳಿಧರನ್ ಆರ್. ಹಿರಿಯೂರು., ( ಚಿತ್ರದುರ್ಗ – ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB