nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉದ್ಧಟತನ ಕಲಿಸಿದ ಪಾಠ

    January 7, 2026

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026
    Facebook Twitter Instagram
    ಟ್ರೆಂಡಿಂಗ್
    • ಉದ್ಧಟತನ ಕಲಿಸಿದ ಪಾಠ
    • ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
    • ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 
    • ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ
    • ಕಲುಷಿತ ನೀರು, ಮಾಲಿನ್ಯ ದೂರಿಗೆ ಕಂಟ್ರೋಲ್ ರೂಮ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಬಂದಕುಂಟೆ ನಾಗರಾಜು: ಅಂಬೇಡ್ಕರ್ ಹೋರಾಟದ ರಥಕ್ಕೆ ತುಮಕೂರಿನಲ್ಲಿ ಸಾರಥ್ಯ ನೀಡಿದ ಮಹಾನ್ ಚೇತನ: ದಂಡಿನ ಶಿವರ ಕುಮಾರ್
    • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ: ಪ್ರೊ.ಕೆ.ಚಂದ್ರಣ್ಣ
    • ಹೆದ್ದಾರಿಯಲ್ಲಿನ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಂತಕವಿ ಕನಕದಾಸರ ಚಿತ್ರಪಟ ಕಲಾಕೃತಿಗಳ ರಾಜಕೀಯ ನೋಟ
    ಲೇಖನ November 22, 2021

    ಸಂತಕವಿ ಕನಕದಾಸರ ಚಿತ್ರಪಟ ಕಲಾಕೃತಿಗಳ ರಾಜಕೀಯ ನೋಟ

    By adminNovember 22, 2021No Comments1 Min Read
    kanakadasa

    ಸಂತಕವಿ‌ ಕನಕದಾಸರು ಬದುಕಿದ್ದದ್ದು 450 ವರ್ಷಗಳ ಹಿಂದೆ.‌ ನಮಗೆ ಲಭ್ಯವಿರುವ ಬುದ್ಧಗುರು, ಬಸವಣ್ಣ, ಅಶೋಕ, ವಾಲ್ಮೀಕಿ ಮುಂತಾದ ಶ್ರೇಷ್ಠ ವ್ಯಕ್ತಿಗಳ ಚಿತ್ರಪಟಗಳೆಲ್ಲವೂ ಕಲಾವಿದರ ಕಲ್ಪನಾ ಪ್ರತಿಭಾವಿಲಾಸದಿಂದ ಚಿತ್ರಿಸಲಾದ ಚಿತ್ರಪಟಗಳೇ ಆಗಿವೆ.‌

    ಇಲ್ಲಿರುವ ಎರಡೂ ಚಿತ್ರಗಳನ್ನು ನೋಡಿದ ಬಳಿಕ ಪ್ರಶ್ನೆ ಏನೆಂದರೆ ಕನಕದಾಸರು ನುಡಿಸುತ್ತಿದ್ದದ್ದು ನಾಗ ತಂಬೂರಿಯೋ ಅಥವಾ ಏಕತಾರಿ ತಂಬೂರಿಯೋ? ಕನಕ ದಾಸರು ಹಣೆಗೆ ಧರಿಸುತ್ತಿದ್ದ ನಾಮವು ವೈಷ್ಣವರ ಗೂಟನಾಮವೋ ಶೈವದ ವಿಭೂತಿ ಭಸಿತವೋ (ಕುರುಬರು ಶೈವಾರಾಧಕರು)? ಹೆಗಲ‌ ಮೇಲೆ ಧರಿಸುತ್ತಿದ್ದದ್ದು ಕೆಂಪು ಅಥವಾ ವಸ್ತ್ರವೋ (ಅಥವಾ ನಾನು ಧರಿಸುವಂತಹ ಗಿಣಿಗೊಂಡೆ ಚೌಕಳಿಯ ಕೆಂಪು ಗಿಣಿವಸ್ತ್ರವಂತೂ ಅಲ್ಲ ತಾನೆ?) ಅಥವಾ ಕುರಿ ಉಣ್ಣೆಯ ಕರಿಜಾಡಿಯೋ?!


    Provided by
    Provided by

    ಕಲಾವಿದರು ರೂಪಿಸಿರುವ ಈ ಚಿತ್ರಗಳಲ್ಲಿರುವ ಉಳಿದ ವ್ಯತ್ಯಾಸಗಳನ್ನು ಗುರುತಿಸಿರಿ. ಮೊದಲ ಚಿತ್ರದ ಕಲಾವಿದನ ಕಲ್ಪನಾ ವಿಲಾಸದಲ್ಲಿ ಅವನ ಕೇಸರಿ ರಾಜಕಾರಣದ ಇಂಗಿತ ಆಶಯಕ್ಕೆ ತಕ್ಕನಾಗಿ ಕನಕದಾಸರ ಹೆಗಲ ಮೇಲೆ ಕೇಸರಿ ವಸ್ತ್ರವನ್ನು ಹಾಕಿದ್ದಾನೆ. ಆದರೆ ಮೈಮೇಲೆ ತೂಗುವಂತೆ  ನೂಲುವಾರ ಹಾಕಿ ಚಿತ್ರವನ್ನು ರಚಿಸುವುದನ್ನೇಕೋ ಅವನು ಮರೆತುಬಿಟ್ಟಿದ್ದಾನೆ. ಈ ಕಲಾವಿದನು ಇನ್ನೂ  ಮರೆತಿರಬಹುದಾದ ತುಳಸಿಮಾಲೆ, ಪಂಚಪಾತ್ರೆ, ಉದ್ಧರಣೆ, ಕಮಂಡಲ ಮುಂತಾದ ವೈದಿಕಾರ್ಯರ ಲಾಂಛನಗಳನ್ನು ಕನಕದಾಸರ ಕಲಾಚಿತ್ರಕ್ಕೆ ಅಲಂಕರಿಸಿ ಅಲಂಕರಿಸಿ ಪ್ರಸಾರ ಮಾಡಲೂಬಹುದು. ಆಗ ಕೇಸರಿ ರಾಜಕಾರಣಕ್ಕೆ ತಕ್ಕನಾಗಿ ಕನಕದಾಸರು ಹುಟ್ಟಿದ್ದು ಬ್ರಾಹ್ಮಣರ ಮನೆಯಲ್ಲಿ, ಆದರೆ ಬೆಳೆದದ್ದು ಮಾತ್ರ ಕುರುಬರ ರೊಪ್ಪದಲ್ಲಿ ಎಂದು ಕಾಲ್ಪನಿಕ ಕಥೆ ಹೊಸೆದು ಮೆರವಣಿಗೆ ಉರವಣಿಗೆಗಳು ನಡೆಸಲು ಅನುಕೂಲವಾಗುತ್ತದೆ.

    ಇಲ್ಲಿಯವರೆಗೆ ನಮ್ಮ ತಳಾದಿ ಸಾಂಸ್ಕೃತಿಕ ನಾಯಕರು ಹೈಜಾಕ್ ಆಗಿರುವುದು ಹೀಗೆಯೇ ತಾನೆ? ಹಾಗಾಗದಿರಲೆಂಬ ಮುನ್ನೆಚ್ಚರಿಕೆಯಿಂದ ನಿಮ್ಮೆಲ್ಲರ ಅವಗಾಹನೆಗಾಗಿ ಈ ಎರಡು ಚಿತ್ರಗಳನ್ನು ನಿಮ್ಮೆದುರು ಇರಿಸಿದ್ದೇನೆ.

    ಡಾ.ವಡ್ಡಗೆರೆ ನಾಗರಾಜಯ್ಯ

    8722724174

    admin
    • Website

    Related Posts

    ಉದ್ಧಟತನ ಕಲಿಸಿದ ಪಾಠ

    January 7, 2026

    ವಾಸ್ತವ ಒಡೆದು ನೋಡಿದಾಗ?

    January 2, 2026

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    Leave A Reply Cancel Reply

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಉದ್ಧಟತನ ಕಲಿಸಿದ ಪಾಠ

    January 7, 2026

    ಒಮ್ಮೆ ಒಬ್ಬ ರಾಜ ಕುದುರೆ ಏರಿ ವನವಿಹಾರ ಮಾಡುತ್ತಾ, ಸೈನಿಕರಿರುವ ತನ್ನ ಬಿಡಾರದಿಂದ ಕಾಡಿನ ಸೌಂದರ್ಯ ಸವಿಯಲು ಬಹಳ ದೂರ…

    ಜಿಲ್ಲಾ ಬಂಜಾರ ಸಂಘ–ಸೇವಾಲಾಲ್ ಪತ್ತಿನ ಸಹಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

    January 7, 2026

    ಅನ್ಯಾಯ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ಸಾತ್ವಿಕ ಪ್ರತಿಭಟನಾಕಾರ ಬಂದಕುಂಟೆ ನಾಗರಾಜಯ್ಯ 

    January 7, 2026

    ತುರುವೇಕೆರೆ: ಕುರಿ ಮೇಕೆ ಸಾಕಾಣಿಕೆ ತರಬೇತಿ

    January 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.