ತುಮಕೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆ ಬಿ ಕ್ರಾಸ್ ನಿಂದ ಒಂದುವರೆ ಕಿ.ಮೀ. ದೂರದ ರಸ್ತೆ ಪಕ್ಕದಲ್ಲಿರುವ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಮನೆಗಳನ್ನು ಬಿಡಿಸಿಕೊಂಡು ರಸ್ತೆ ನಿರ್ಮಾಣ ಮಾಡಿರುತ್ತಾರೆ 2013ರ ನಿಯಮದಂತೆ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಜಾಗ ಬಿಟ್ಟು ಕೊಟ್ಟವರಿಗೆ ಹಣ ಕೊಡಿ ಎಂದು ಆಗ್ರಹಿಸಿದರು.
ಕೆ ಬಿ ಕ್ರಾಸ ಭಾಗದ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಜಾಗ ಬಿಟ್ಟುಕೊಟ್ಟಿದ್ದು ತಮ್ಮ ಮನೆಗಳನ್ನು ಕಳೆದುಕೊಂಡಿರುತ್ತಾರೆ ಹಾಗೂ ಭೂಮಿಯನ್ನು ನೀಡಿರುತ್ತಾರೆ. ಇವರು ಮುಂದೆ ಮನೆ ಕಟ್ಟಲು ಆಗದೇ, ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಆಗದ ಸ್ಥಿತಿಯಲ್ಲಿದ್ದಾರೆ. ತಮ್ಮ ಮನೆ ಜಾಗವನ್ನು ಬಿಟ್ಟು ಕೊಟ್ಟ ಮಾಲೀಕರಿಗೆ ಸರ್ಕಾರದಿಂದ ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ. ಇವರು ಪರಿಹಾರದ ಹಣಕ್ಕೋಸ್ಕರ ಆರು ವರ್ಷಗಳಿಂದಲೂ ಪರಿತಪಿಸುತ್ತಿದ್ದಾರೆ. ಅವರ ಕಷ್ಟಗಳಿಗೆ ಶಾಸಕರಾಗಲಿ, ಜನ ಪ್ರತಿನಿಧಿಯಾಗಲಿ, ಜಿಲ್ಲಾಡಳಿತವಾಗಲಿ, ಈ ಕಡೆ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ತಿಂಗಳ ಹಿಂದೆ ಕೆಬಿ ಕ್ರಾಸ್ ಬಳಿ ನೂರಾರು ಸಂತ್ರಸ್ತರು ಉಪವಾಸ ಸತ್ಯಾಗ್ರಹ ಮಾಡಿದರು. ಇಷ್ಟಾದರೂ ಉಸ್ತುವಾರಿ ಸಚಿವರು ಕೂಡ ಇತ್ತ ಗಮನಹರಿಸಿಲ್ಲ. ಹೀಗೆ ಮುಂದುವರೆದರೆ ಟೋಲ್ ಕಟ್ಟಡವನ್ನು ಕಟ್ಟುವುದಕ್ಕೆ ಬಿಡುವುದಿಲ್ಲ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಕೆ ಟಿ ಶಾಂತಕುಮಾರ್ ತಮ್ಮ ಬೆಂಬಲಿಗರು ಸರ್ಕಾರವನ್ನು ಒತ್ತಾಯಿಸಿದರು.
ಭೂಮಿ ಕಳೆದುಕೊಂಡ ಹೊನ್ನಪ್ಪ, ಅಭಿಜಿತ್, ಮಹಾದೇವಯ್ಯ, ಸಂಪತ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5