nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಸ ವಿಲೇವಾರಿ ವಾಹನವನ್ನೇ ಕದ್ದ ಕಳ್ಳರು!

    July 14, 2025

    ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ

    July 14, 2025

    ಕೌಠಾ ಬಿ ಗ್ರಾಮ ಪಂಚಾಯತ್: ಹೆದ್ದಾರಿಗೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ

    July 14, 2025
    Facebook Twitter Instagram
    ಟ್ರೆಂಡಿಂಗ್
    • ಕಸ ವಿಲೇವಾರಿ ವಾಹನವನ್ನೇ ಕದ್ದ ಕಳ್ಳರು!
    • ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ
    • ಕೌಠಾ ಬಿ ಗ್ರಾಮ ಪಂಚಾಯತ್: ಹೆದ್ದಾರಿಗೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ
    • ‘ಶಕ್ತಿ ಯೋಜನೆ’ ಹೊಸ ಮೈಲಿಗಲ್ಲು: 500ನೇ ಕೋಟಿ ಟಿಕೆಟ್ ವಿತರಣೆ
    • ಮಾವಿನ ಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ: 9 ಕಾರ್ಮಿಕರು ಸಾವು, 10 ಮಂದಿಯ ಸ್ಥಿತಿ ಗಂಭೀರ
    • ಬಮೂಲ್​​ ರೈತರ ಸಂಸ್ಥೆ ಇದನ್ನು ಬೆಳೆಸುವುದು ನಮ್ಮ ಕರ್ತವ್ಯ: ಡಿ.ಕೆ. ಸುರೇಶ್​
    • ಸರೋಜಾದೇವಿ ಎಂದ ತಕ್ಷಣ ಚೆನ್ನಮ್ಮ, ಬಬ್ರುವಾಹನ ನೆನಪಾಗುತ್ತದೆ: ಸಿಎಂ ಸಂತಾಪ
    • ಅಭಿನಯ ಸರಸ್ವತಿ ಬಿ.ಸರೋಜಾದೇವಿ ನಿಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು ಹೆಸರಿಗೆ ಮಾತ್ರ ಪ್ರತ್ಯೇಕ ತಾಲೂಕು, ಈವರೆಗೂ ಮೂಲಭೂತ ಸೌಕರ್ಯ ಸಿಕ್ಕಿಲ್ಲ: ಬಡಗಲಪುರ ನಾಗೇಂದ್ರ ಆಕ್ರೋಶ
    ಜಿಲ್ಲಾ ಸುದ್ದಿ November 15, 2024

    ಸರಗೂರು ಹೆಸರಿಗೆ ಮಾತ್ರ ಪ್ರತ್ಯೇಕ ತಾಲೂಕು, ಈವರೆಗೂ ಮೂಲಭೂತ ಸೌಕರ್ಯ ಸಿಕ್ಕಿಲ್ಲ: ಬಡಗಲಪುರ ನಾಗೇಂದ್ರ ಆಕ್ರೋಶ

    By adminNovember 15, 2024No Comments2 Mins Read

    ಸರಗೂರು: ಪ್ರತ್ಯೇಕ ತಾಲ್ಲೂಕೆಂದು ಘೋಷಣೆಯಾಗಿ 7 ರಿಂದ 8 ವರ್ಷಗಳ ಕಳೆದು ಹೋಗಿದೆ. ಹೆಸರುವಾಸಿಯಾದ ಊರಾಗಿದ್ದರೂ ತಾಲೂಕು ಕೇಂದ್ರವಾಗಿ ಬಿಂಬಿಸುವಂತಹ ಮೂಲಭೂತ ಸೌಕರ್ಯಗಳನ್ನು ಇದುವರೆಗೂ ಯಾವುದೇ ಸರ್ಕಾರ ಬಂದರೂ ಕಲ್ಪಿಸದೇ,  ಹೆಸರಿಗೆ ಮಾತ್ರ ತಾಲೂಕು ಎಂದು ಕರೆಯಲಾಗುತ್ತಿದೆ  ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ಒತ್ತಾಯಿಸಿದರು.

    ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ರೈತ ಸಂಘ ಕಾರ್ಯಕರ್ತರ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರಗೂರು ತಾಲೂಕಿನ ಸರ್ವತೋಮುಖ ಬೆಳವಣಿಗಾಗಿ ಹೋರಾಟ ರೂಪಿಸಲು ಪೂರ್ವಭಾವಿ ಸಭೆಯನ್ನು  ಬಡಗಲಪುರ ನಾಗೇಂದ್ರ ಅವರು ಅಧ್ಯಕ್ಷತೆಯಲ್ಲಿ ಸಭೆ ಕರೆದು ಮಾತನಾಡಿದರು.


    Provided by
    Provided by

    ತಾಲೂಕು ಎಂದು ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವದಲ್ಲಿ ಮಾಡಿದ್ದಾರೆ. ಆದರೆ ಇನ್ನೂ ಅಭಿವೃದ್ಧಿ ಕಂಡಿಲ್ಲ, ಈ ತಾಲೂಕಿನಲ್ಲಿ 2 ಎರಡು ಹೋಬಳಿಗಳಲ್ಲೂ ಅರಣ್ಯ ಪ್ರದೇಶವಿದೆ. ಇದ್ದರೂ ಅಭಿವೃದ್ಧಿ ಕಂಡಿಲ್ಲ‌.

    ತಾಲೂಕಿನ ಎರಡು ಹೋಬಳಿಯಲ್ಲಿ ಬಂಡಿಪುರ ಅಭಯಾರಣ್ಯ ವ್ಯಾಪ್ತಿಯ ಬರುವ ಗ್ರಾಮಗಳು ಹೆಚ್ಚು ಕಾಡಂಚಿನ ಭಾಗದ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರ ಜೀವನ ಅತ್ಯಂತ ಶೋಚನೀಯವಾಗಿದೆ.ಹಲವಾರು ಹಳ್ಳಿಗಳಿಗೆ ಇನ್ನೂ ರಸ್ತೆಗಳೇ  ಇಲ್ಲ. ಕುಡಿಯುವ ನೀರಿನ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳೆ ದೊರೆತಿಲ್ಲ ಎಂದರು.

    ಶಿಕ್ಷಣ ಕ್ಷೇತ್ರ ಮುಂದಕ್ಕೆ ಸಾಗುತ್ತಿಲ್ಲ. ತಾಲ್ಲೂಕಿನಲ್ಲಿರುವ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶುವೈದ್ಯ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ತಾಲ್ಲೂಕಿನ ಆಡಳಿತ ಸುಸಜ್ಜಿತವಾದ ಕಟ್ಟಡಗಳಿಲ್ಲ ಸಾರ್ವಜನಿಕ ಆಡಳಿತವನ್ನು ಸಮರ್ಪಕವಾಗಿ ನಡೆಸಲು ಖಾಲಿ ಇರುವ ಹುದ್ದೆಗಳನ್ನು ತುಂಬಿಯೇ ಇಲ್ಲ. ಕ್ಷೇತ್ರದ ಶಾಸಕರು ತಾಲೂಕಿನ ಬಗ್ಗೆ ಗಮನಹರಿಸಿ ಅಭಿವೃದ್ಧಿಗೊಳಿಸಲು ಮುಂದಾಗಬೇಕು. ರಾಜ್ಯದಲ್ಲಿ ವನಸಿರಿ ನಾಡು ಎಂದು ಬಿರುದು ಪಡೆದಿರುವ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ನಾಲ್ಕು ಜಲಾಶಯಗಳು ಇದ್ದರೂ, ತಾಲ್ಲೂಕಿನ ಜನತೆಗೆ ಯಾವುದೇ ಅನುಕೂಲ ಇಲ್ಲ ಆಕ್ರೋಶ ವ್ಯಕ್ತಪಡಿಸಿದರು.

    ಮುಂದಿನ ತಿಂಗಳು ಡಿ.8ರಂದು ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಆಹ್ವಾನಿಸಲಾಗುವುದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪೂರ್ವಭಾವಿ ಸಭೆಗೆ ಬಂದು ತಮ್ಮ ಸಲಹೆ ಸಹಕಾರವನ್ನು ನೀಡಿ ತಾಲೂಕಿನ ಕ್ಷೇಮಾಭಿವೃದ್ಧಿಗಾಗಿ ಹೋರಾಟ ಹೆಜ್ಜೆ ಹಾಕಬೇಕೆಂದು ಮನವಿ ಮಾಡಿಕೊಂಡರು.

    ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಮಾತನಾಡಿ, ತಾಲೂಕಿಗೆ ಹೆಚ್ಚು ಇಲಾಖೆಗಳು ಬರಬೇಕು. ಡಬಲ್ ರಸ್ತೆ ಮಾಡಬೇಕು. ಇತ್ತೀಚೆಗೆ ಸರಗೂರು ತಾಲೂಕು ದೊಡ್ಡದಾಗಿ ಬೆಳೆಯುತ್ತದೆ. ಆದ್ದರಿಂದ ಶಾಸಕರು ಹಾಗೂ ಲೋಕಸಭಾ ಸಂಸದರು ಸರಗೂರು ತಾಲೂಕಿನ ಹೆಚ್ಚಿನ ರೀತಿಯಲ್ಲಿ ಗಮನಹರಿಸಬೇಕು. ಏಕೆಂದರೆ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಎಲ್ಲಾ ಇಲಾಖೆಗಳು ಬಂದರೆ ತಾನಾಗಿ ಅಭಿವೃದ್ಧಿ ಕಡೆಗೆ ಹೋಗುತ್ತದೆ. ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಕಾಡಂಚಿನ ಭಾಗದಿಂದ ಬರುವ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕೂಗು ಕೇಳಿ ಬರುತ್ತಿದೆ. ಅದರ ಜೊತೆಯಲ್ಲಿ ರೈತರಿಗೆ ಸಾಗುವಾಳಿ ವಿತರಣೆ ಮಾಡುತ್ತಿಲ್ಲ. ಅಕ್ರಮ ಸಕ್ರಮ ಸಮಿತಿ ವತಿಯಿಂದ ಪಾಸ್ ಆಗಿ ಬಂದರು, ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಾರೆ. ಅದರ ಜೊತೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರು ಚನ್ನನಾಯಕ, ಮಹದೇವನಾಯಕ, ಕಾರ್ಯಧ್ಯಕ್ಷ ಬಿರ್ವಾಳ್ ಮಹಲಿಂಗ, ಕಾರ್ಯದರ್ಶಿಗಳು ನವೀನ್ ಕುಮಾರ್, ನಂದಿಶ್ವರಸ್ವಾಮಿ, ಕುಮಾರ್ ಗೌಡ, ಉಪಾಧ್ಯಕ್ಷ ಗೊವಿಂದರಾಜು, ಯುವ ಘಟಕದ ಅಧ್ಯಕ್ಷ ಶಿವಪ್ಪ, ಎಲ್ಲಾ ಸಂಘ ಸಂಘಟನೆ ಮುಖಂಡರು ವೈಕುಂಠನಾಯಕ, ಸಣ್ಣ ಸ್ವಾಮಿ, ಸರಗೂರು ಕೃಷ್ಣ, ವೆಂಕಟೇಶ್, ಬ್ರಹ್ಮದೇವ, ರಂಗಸ್ವಾಮಿ, ರಮೇಶ್, ನಾರಾಯಣ್, ಸುರೇಶ್, ರೈತ ಮಹಿಳಾ ಸಂಘ ಉಪಾಧ್ಯಕ್ಷರು ರತ್ನಮ್ಮ, ಮಹದೇವಮ್ಮ, ಮಹದೇವನಾಯಕ, ಜವರನಾಯಕ, ಚೆಲುವರಾಜು, ಅಣ್ಣಯ್ಯಸ್ವಾಮಿ, ಮಹೇಶ್ ಕುಮಾರ್, ಗೋವಿಂದರಾಜು, ಇನ್ನೂ ಎಲ್ಲಾ ಪ್ರಗತಿಪರ ಹಾಗೂ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಕೌಠಾ ಬಿ ಗ್ರಾಮ ಪಂಚಾಯತ್: ಹೆದ್ದಾರಿಗೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ

    July 14, 2025

    ವಸತಿ ನಿಲಯದ ಯುವತಿ ನೇಣಿಗೆ ಶರಣು

    July 14, 2025

    ಬೀದರ್ | ಇ–ಪಾವತಿ ಅಭಿಯಾನದ ಲಾಭ ಪಡೆಯಿರಿ : ತಹಶೀಲ್ದಾರ್ ಮಹೇಶ್ ಪಾಟೀಲ್

    July 14, 2025
    Our Picks

    ಮಾವಿನ ಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ: 9 ಕಾರ್ಮಿಕರು ಸಾವು, 10 ಮಂದಿಯ ಸ್ಥಿತಿ ಗಂಭೀರ

    July 14, 2025

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಕಸ ವಿಲೇವಾರಿ ವಾಹನವನ್ನೇ ಕದ್ದ ಕಳ್ಳರು!

    July 14, 2025

    ರಾಯಚೂರು: ಕಸ ವಿಲೇವಾರಿ ವಾಹನಗಳನ್ನು ಕದ್ದಿರುವ ಘಟನೆ ಕವಿತಾಳ ಪಟ್ಟಣ ಪಂಚಾಯತಿ ಕಚೇರಿ ಆವರಣದಲ್ಲಿ ನಡೆದಿದೆ. ಪಟ್ಟಣ ಪಂಚಾಯತಿ ಕಚೇರಿ…

    ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ

    July 14, 2025

    ಕೌಠಾ ಬಿ ಗ್ರಾಮ ಪಂಚಾಯತ್: ಹೆದ್ದಾರಿಗೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ

    July 14, 2025

    ‘ಶಕ್ತಿ ಯೋಜನೆ’ ಹೊಸ ಮೈಲಿಗಲ್ಲು: 500ನೇ ಕೋಟಿ ಟಿಕೆಟ್ ವಿತರಣೆ

    July 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.