ಬಿಳಿಗಿರಿರಂಗನಬೆಟ್ಟದಲ್ಲಿ ಒಂಟಿ ಸಲಗನ ಆರ್ಭಟದಿಂದ ಗಿರಿಜನರು ನಲುಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಂಗಲೆಪೋಡು ಬಳಿ ಆನೆ ಆರ್ಭಟಿಸಿದೆ.
ಬಿಳಿಗಿರಿರಂಗನಬೆಟ್ಟದ ಮುಖ್ಯರಸ್ತೆಯಲ್ಲಿ ಸಂಚರಿಸಿ ಕಳೆದ ಒಂದು ವಾರದಿಂದ ಸಲಗ ಉಪಟಳ ನೀಡುತ್ತಿದೆ. ಸಾರ್ವಜನಿಕರು ಸಂಚರಿಸುವ ಕೆ.ಎಸ.ಆರ್.ಟಿ.ಸಿ. ಬಸ್ಸನ್ನು ಒಂಟಿಸಲಗ ಅಟ್ಟಾಡಿಸಿದೆ.
ಆನೆ ಆರ್ಭಟಕ್ಕೆ ಬಸ್ಸಿನೊಳಗೆ ಪ್ರಯಾಣಿಕರು ಚೀರಾಟ ಮಾಡಿದ್ದಾರೆ. ಬಂಗಲೆ ಪೋಡಿನ ಸುತ್ತಾಮುತ್ತಾ ಪ್ರತಿನಿತ್ಯ ಆನೆ ಉಪಟಳ ನಡೆಸಿದ್ದಾರೆ. ಭಾರೀ ಗಾತ್ರದ ಕೊಂಬಿನಿಂದ ಜನರನ್ನು ಆನೆ ಹೆದರಿಸುತ್ತಿದೆ. ಘೀಳಿಟ್ಟು ರಸ್ತೆಯ ಸುತ್ತಾ ಮುತ್ತಾ ಸಂಚರಿಸಿ ಒಂಟಿಸಲಗ ದಾದಾಗಿರಿ ಮಾಡುತ್ತಿದೆ.
ಪೋಡಿನ ಸುತ್ತಾಮುತ್ತಾಲಿನ ಮನೆಗಳಿಗೆ ತೆರಳಲು ಸೋಲಿಗರು ಆತಂಕ ಪಡುತ್ತಿದ್ದಾರೆ. ಆನೆಯ ದಾದಾಗಿರಿ ಕಂಡು ಅರಣ್ಯ ಇಲಾಖೆ ಸಿಬ್ಬಂಧಿಗಳು ದಂಗಾಗಿದೆ. ಕೂಡಲೆ ಆನೆ ಉಪಟಳ ತಪ್ಪಿಸುವಂತೆ ಸೋಲಿಗರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA