ಶ್ರೀದೇವಿ ಬೈರಪ್ಪ ಅವರು ಯಾವುದೇ ರೀತಿಯಲ್ಲಿ ಹಣ ಮತ್ತು ಆಸ್ತಿಗೆ ಆಸೆ ಪಡುತ್ತಿಲ್ಲ. ಆಕೆ ವಿದ್ಯಾವಂತೆ, ಎಲ್ಲವನ್ನೂ ಆಕೆ ಮ್ಯಾನೇಜ್ ಮಾಡುತ್ತಿದ್ದಾರೆ ಎಂದು ಲಾಯರ್ ಹೇಳಿದ್ದಾರೆ. ಪ್ರೀತಿಸಿ ಮದುವೆಯಾಗಿ ಜೀವ ನಡೆಸಿರುವ ಯುವ ರಾಜ್ ಕುಮಾರ್ ಇದ್ದಕ್ಕಿದ್ದಂತೆ ವಿಚ್ಛೇದನ ಬೇಕೆಂದು ನೋಟಿಸ್ ಕಳುಹಿಸಲು ಕಾರಣವೇನು? ಅಲ್ಲದೇ ಶ್ರೀದೇವಿ ಅವರ ತಂದೆ ಭೈರಪ್ಪನವರು ಕೂಡಾ ಸ್ಪಷ್ಟವಾಗಿ ಹೇಳಿದ್ದಾರೆ ನಮಗೆ ಅವರಿಂದ ಯಾವ ಹಣ ಕೂಡಾ ಬೇಕಿಲ್ಲ ಎಂದು” ಎಂದು ಶ್ರೀದೇವಿ ಭೈರಪ್ಪ ಲಾಯರ್ ದೀಪ್ತಿ ಆಯಾಥಾನ್ ಮಾತನಾಡಿದ್ದಾರೆ.
ಆಕೆಗೆ ಪರೀಕ್ಷೆ ಇರುವ ಸಮಯದಲ್ಲಿ ನೋಟಿಸ್ ಕಳುಹಿಸಿದ್ದಾರೆ. ಹಾರ್ವರ್ಡ್ ಅಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಓದುತ್ತಿರುವಾಗ ಪರೀಕ್ಷೆ ಇರುವ ಸಮಯದಲ್ಲಿ ನೋಟಿಸ್ ಕೊಟ್ಟಿದ್ದಾರೆ. ಡಿಸೆಂಬರ್ ವರೆಗೆ ಊಟ ಆಯಿತಾ ಮಗಳೇ ಎಂದು ಮೆಸೇಜ್ ಬಂದಿದೆ ಆಮೇಲೆ ಎಲ್ಲಾ ಸ್ಟಾಪ್ ಆಗಿದೆ ಎಂದು ಲಾಯರ್ ಹೇಳಿದ್ದಾರೆ.
ಪ್ರೀತಿಯಿಂದ ಯುವ ಮಾತನಾಡಿಸಿರುವ ಪ್ರತಿಯೊಂದು ಮೆಸೇಜ್ ಡಿಸೆಂಬರ್ ವರೆಗೂ ಇದೆ. ಅವರು ಮೊದಲು ನೋಟಿಸ್ ಕೊಟ್ಟಿರುವ ಕಾರಣ ಶ್ರೀದೇವಿ ಅವರು ಅದಕ್ಕೆ ಉತ್ತರ ಕೊಟ್ಟಿದ್ದಾರೆ ಅಷ್ಟೇ. ಡಿವೋರ್ಸ್ ಕೊಡ್ತೀನಿ ಎಂದು ಶ್ರೀದೇವಿ ಹೇಳಿಲ್ಲ. ಎಲ್ಲಾ ಅವರೇ ಕೇಳಿರುವುದು ಎಂದು ಶ್ರೀದೇವಿ ಪರ ಲಾಯರ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296