ಬೆಂಗಳೂರು: ಬಿಜೆಪಿಯವರು ಮುಸ್ಲಿಂರಿಗೆ ಚಿತ್ರ ಹಿಂಸೆ ಕೊಡುತ್ತಿದ್ದಾರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಮಾತಿಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಏಕವಚನದಲ್ಲೇ ಚಾಟಿ ಬೀಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ‘ ಅವನ ತಲೆ ತಿರುಕ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಬಿಜೆಪಿ ಎಂದಿಗೂ ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಚಿಯನ್ ಸಮುದಾಯದವರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂದು ಹೇಳುವ ಪಕ್ಷ.
ಇಂತಹ ಕ್ಷುಲ್ಲಕ ಹೇಳಿಕೆ ಕೊಟ್ಟು ಮುಸ್ಲಿಂಮರ ಮನವೊಲಿಸುವ ಭ್ರಮೆಯಲ್ಲಿದ್ದಾರೆ. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಬಂಧುಗಳ ಕೂಡ ಎನ್ಡಿಎಗೆ ಮತ ಹಾಕಲಿದ್ದಾರೆ’ ಎಂದು ಬಿಎಸ್ವೈ ಹೇಳಿದರು.
ಇನ್ನು ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಬಿಎಸ್ವೈ ಹೆಚ್ ಡಿ ದೇವೆಗೌಡರ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ. ದೇವೆಗೌಡರು ಬಿಜೆಪಿಯವರ ಜೊತೆ ಒಟ್ಟಾಗಿ ಓಡಾಡುತ್ತಿರುವುದರಿಂದ ನಮ್ಮ ಬಲ ಹೆಚ್ಚಿದೆ, ಎಲ್ಲರ ಪರಿಶ್ರಮದಿಂದ ನಮ್ಮ ಅಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲ್ಲುತ್ತಾರೆ , ಎಂದು ಬಿಎಸ್ ವೈ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296