ತಿಪಟೂರು: ನಗರದ ಶ್ರೀಬಿಎಂಸಿ ರೆಸಿಡೆನ್ಸಿಯಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಾವೇಶ ನಡೆಯಿತು.
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹರಿಸಮುದ್ರ ಗಂಗಾಧರ್, ಬಿಸ್ಲೆಹಳ್ಳಿ ಜಗದೀಶ್, ಗಂಗರಾಜು, ಪ್ರಸನ್ನ ಕುಮಾರ್, ರಾಮಮೋಹನ್, ಗುಲಾಬಿ, ಸುರೇಶ್, ಬಳ್ಳೇಕಟ್ಟೆ ಸುರೇಶ್, ಹಾಯ್ರಳ್ಳಿ ಶಂಕ್ರಪ್ಪ, ನಾಗರಾಜ್ ಹಾಲ್ಕುರ್ಕೆ, ಕ್ಯಾಪ್ಟನ್ ಲೋಕೇಶ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ನಾವು ಈ ಬಾರಿ ತುಮಕೂರು ಲೋಕಸಭಾ ಸಂಸತ್ ಸದಸ್ಯ ವಿ.ಸೋಮಣ್ಣನವರಿಗೆ ಅತ್ಯಧಿಕ ಮತಗಳಿಂದ ಜಯಗಳಿಸಿ ಕೊಟ್ಟಿದ್ದೇವೆ. ಸೋಮಣ್ಣನವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ತಿಪಟೂರಿನ ಬಗ್ಗೆ ಅವರಿಗೆ ಅಪಾರ ಗೌರವ ಮತ್ತು ಹೆಮ್ಮೆ ಇದೆ. ಕಾರಣ ಇಷ್ಟೇ ತಿಪಟೂರಿನ ಕಾರ್ಯಕರ್ತರು ಯಾವುದೇ ಪ್ರತಿ ಫಲ ಮತ್ತು ಯಾವುದೇ ಆಸೆಗಳಿಲ್ಲದೆ ನನ್ನನ್ನು ಅಧಿಕ ಮತಗಳಿಂದ ಗೆಲ್ಲಿಸಿದ್ದಾರೆ ಎಂದು ಸೋಮಣ್ಣ ಇಂದಿಗೂ ತಿಪಟೂರಿನ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ ಎಂದರು.
ತಿಪಟೂರಿನ ಪ್ರಧಾನ ಭಾಜಪ ಕಾರ್ಯಕರ್ತರು ಇಂದಿನಿಂದಲೇ ನಾವು ಪ್ರತಿ ಮನೆಯಲ್ಲಿ ಏಕೆ ಬಿಜೆಪಿಗೆ ವೋಟ್ ಹಾಕಬೇಕು, ಏಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದನ್ನು ಎಲ್ಲರಿಗೂ ತಿಳಿಸಿ ಎಂದು ಕಿವಿ ಮಾತು ಹೇಳಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA