ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರಾದ ಎಂ.ಜಿ. ಶಿವಶಂಕರ್ ರವರ ಮಾಯಸಂದ್ರ ಗ್ರಾಮದಲ್ಲಿನ ತಮ್ಮ ಸ್ವಗೃಹದ ಅಂಗಳದಲ್ಲಿ 7 ಅಡಿ ಎತ್ತರದ, ಎರಡೂವರೆ ವರ್ಷದ, ಅಪರೂಪದ “ತುಳಸಿ ಗಿಡ” ಬೆಳೆದಿದ್ದು, ಗ್ರಾಮದ ಸಾರ್ವಜನಿಕರಲ್ಲಿ ಆಕರ್ಷಣೀಯವಾಗಿದೆ.
ಸುಮಾರು ಎರಡೂವರೆ ವರ್ಷ ಪೂರೈಸಿರುವ ತುಳಸಿ ಗಿಡವು ದಿನೇ-ದಿನೇ ಅತಿ ಉದ್ದವಾಗಿ ಬೆಳೆಯುತ್ತಿರುವುದು, ಆಶ್ಚರ್ಯಕರ ಸಂಗತಿಯಾಗಿದೆ. ತುಳಸಿ ಗಿಡದ ಪಾಲನೆ -ಪೋಷಣೆಗಾಗಿ ಯಾವುದೇ ಗೊಬ್ಬರಗಳು ಅಥಾವ ಕೆಮಿಕಲ್ ಗಳನ್ನು ಬಳಸದೆ, ನೈಸರ್ಗಿಕವಾಗಿ ತುಳಸಿ ಗಿಡವು ಬೆಳೆಯುತ್ತಿದೆ ಎಂದು ಶಿಕ್ಷಕರಾದ ಎಂ.ಜಿ.ಶಿವಶಂಕರ್ ಅವರ ಪತ್ನಿ ಶ್ರೀಮತಿ ನೇತ್ರಾವತಿ ತಿಳಿಸಿದ್ದಾರೆ.
ಶ್ರೀ ಕಾಲಭೈರವೇಶ್ವರ ಸ್ವಾಮಿಯನ್ನು ಸದಾ ನೆನೆಯುತ್ತ, ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ, ಸ್ಮರಣೆಯೊಂದಿಗೆ, ಸರ್ವೇ ಜನ: ಸುಖಿನೋ ಭವಂತು, ಎಂದು ಮನೆಯ ಅಂಗಳದಲ್ಲಿರುವ ತುಳಸಿ ಗಿಡಕ್ಕೆ ಹಾಗೂ ಭಗವಂತನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಿ ಪ್ರಾರ್ಥಿಸುವುದಾಗಿ, ಮೂಲತಃ ಮಾವಿನಕೆರೆಯ ಲಕ್ಷ್ಮಮ್ಮ ಗಂಗಾಧರಯ್ಯ ನವರ ಪುತ್ರ ಶಿಕ್ಷಕರಾದ ಎಂ.ಜಿ. ಶಿವಶಂಕರ್ ನಮ್ಮ ತುಮಕೂರು ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವರದಿ: ಸಚಿನ್ ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5