ತುರುವೇಕೆರೆ: ತಾಲ್ಲೂಕು ಮಾಯಸಂದ್ರ ಹೋಬಳಿಗೆ ಸೇರಿದ ಶೆಟ್ಟಿಗೊಂಡನಹಳ್ಳಿ ರೈತರಾದ ಗಂಗನರಸಮ್ಮ ಎಂಬವರಿಗೆ ಸೇರಿದ 14 ಕುರಿ ಮತ್ತು16 ಮೇಕೆಗಳನ್ನು ಕದ್ದೊಯ್ದಿದ್ದಾರೆ.
ನಿನ್ನೆ ತಡರಾತ್ರಿ ಸುಮಾರು 2ರಿಂದ 2:30 ರ ಸಮಯದಲ್ಲಿ ಗಂಗನರಸಮ್ಮನವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳ್ಳರು ಚಾಣಾಕ್ಷತನದಿಂದ ಕಳವು ಮಾಡಿದ್ದಾರೆ.
ಕಳವಿಗೂ ಮೊದಲು ಅಕ್ಕ ಪಕ್ಕದ,ಮನೆಗಳಿಗೆ ಕಳ್ಳರು ಹೊರಗಿನಿಂದ ಚೀಲಕವನ್ನು ಹಾಕಿ. ನಂತರ ಈ ಕೃತ್ಯ ನಡೆಸಿದ್ದಾರೆ .
ಈ ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಮುಂದಾಗಿದ್ದಾರೆ.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy