ಕೋಲ್ಕತ್ತಾ: ಪತಿ-ಪತ್ನಿ ಸೇರಿ ನಾಲ್ವರು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಬಳಿ ಈ ದುಷ್ಕೃತ್ಯ ನಡೆದಿದೆ.
ದೇಬ್ರಾಜ್ ಘೋಷ್ ಮತ್ತು ಅವರ ಸಹೋದರ ದೇಬಾಸಿಸ್ ಘೋಷ್ ತಮ್ಮ ಕುಟುಂಬಗಳೊಂದಿಗೆ ಹೌರಾದಲ್ಲಿ ಪೂರ್ವಿಕರ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಎರಡು ಕುಟುಂಬಗಳು ಆಸ್ತಿ ವಿಚಾರದಲ್ಲಿ ಆಗಾಗ ಜಗಳ ಮಾಡುತ್ತಿದ್ದರು
ಈ ನಡುವೆ ಬುಧವಾರವೂ ಈ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದೆ. ಕುಡಿಯುವ ನೀರಿನ ವಿಚಾರವಾಗಿ ಪಲ್ಲವಿ ಮತ್ತು ರೇಖಾ ನಡುವೆ ಜಗಳ ಆರಂಭವಾಗಿದೆ. ಇದು ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ದೇಬ್ರಾಜ್ ಘೋಷ್ ಮತ್ತು ಆತನ ಪತ್ನಿ ಪಲ್ಲವಿ ದೇಬಾಸಿಸ್ ಘೋಷ್, ಆತನ ಪತ್ನಿ ರೇಖಾ, ಅವರ 13 ವರ್ಷದ ಮಗಳು ಮತ್ತು ಅವರ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಗಂಭೀರವಾಗಿ ಗಾಯಗೊಂಡವರೆಲ್ಲ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಆಗಮಿಸಿದರು. ಆ ಮನೆಯಲ್ಲಿ ಪಲ್ಲವಿಯನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿರುವ ದೇಬ್ರಾಜ್ ಘೇಶ್ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz