ಗುಬ್ಬಿ: ಇತ್ತೀಚೆಗೆ ಜಿಲ್ಲಾದ್ಯಂತ ಅತ್ಯಧಿಕ ಮಳೆ ಬೀಳುತ್ತಿದ್ದು ಸಾಕಷ್ಟು ಕೆರೆಗಳು ತುಂಬಿ ತುಳುಕುತ್ತಿವೆ ಇದರ ನಡುವೆ ಹೇಮಾವತಿ ನಾಲೆಯ ಸಾಕಷ್ಟು ಭಾಗದಲ್ಲಿ ಕುಸಿತ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಎಂ.ಡಿ.ಶಂಕರಗೌಡ ಗುಬ್ಬಿ ತಾಲೂಕಿನ ಹಲವು ಭಾಗಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ತಾಲೂಕಿನ, ಎಂಎನ್ ಕೋಟೆ, ಸಾಗರನಹಳ್ಳಿ, ಇಡಕನಹಳ್ಳಿ ಗ್ರಾಮಗಳಲ್ಲಿ ಹೇಮಾವತಿ ನಾಲೆ ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಸಾಕಷ್ಟು ಮಳೆ ಬೀಳುತ್ತಿದ್ದು ಭೂಕುಸಿತ ವಾಗುತ್ತಿದೆ. ಇಂದು ಮೈಸೂರಿನಿಂದ ತಾಂತ್ರಿಕ ಡಿಸೈನರ್ಸ್ ಆಗಮಿಸಿದ್ದು, ನವೆಂಬರ್, ಡಿಸೆಂಬರ್ ವರೆಗೂ ನಾಲೆಯಲ್ಲಿ ನೀರು ಹರಿಯುತ್ತದೆ. ತದನಂತರವೇ ಕಾಮಗಾರಿಯನ್ನು ಮಾಡಲು ಸಾಧ್ಯವಾಗುತ್ತದೆ. ಸರ್ಕಾರದಲ್ಲಿ ಅನುದಾನಕ್ಕೆ ಸಮಸ್ಯೆ ಇಲ್ಲ ಮತ್ತೆ ಕುಸಿಯದ ರೀತಿಯಲ್ಲಿ ಶಾಶ್ವತವಾಗಿ ನಾಲೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಅಡಗೂರು ಕೆರೆ ಕೋಡಿ ಹೊಡೆದಿದ್ದು, ಅದರ ಮರುನಿರ್ಮಾಣಕ್ಕೆ 98 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಸಹ ತುರ್ತುಗಿ ಸರಿ ಪಡಿಸಲಾಗಿದೆ. ಕೆ.ಜಿ ಟೆಂಪಲ್ ಬಳಿಯ ನಾಲೆ ಮುಚ್ಚಿದ್ದು, ಅದಕ್ಕೂ ಸಹ ಈಗಾಗಲೇ ಯೋಜನೆ ಸಿದ್ದ ಪಡಿಸಿ ಸರಿ ಪಡಿಸಲು ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಚೀಫ್ ಇಂಜಿನಿಯರ್ ವರದಯ್ಯ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮೋಹನ್ ಕುಮಾರ್, ಮುರಳಿಧರ್, ಹೇಮಾವತಿ, ಇಂಜಿನಿಯರ್ ನಾಗರಾಜು, ಶಿವಣ್ಣ, ಗಿರೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz