ಬೆಳಗಾವಿ: ಬದುಕು ಕಟ್ಟಿಕೊಳ್ಳಲು ಬಂದ ಬಡ ಜೀವಗಳು HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಈಗ ಬಲಿಯಾದ ಘಟನೆ ಅಥಣಿಯಲ್ಲಿ ನಡೆದಿದೆ.
ಸಬ್ ಕಾಂಟ್ರಾಕ್ಟ್ ಸಮರ್ಥ್ ಎಲೆಕ್ಟ್ರಿಕಲ್ ಗುತ್ತಿಗೆದಾರ ಜೊತೆ ಮೇನ್ ಲೈನ್ ಕೆಲಸ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಮೇನ್ ಲೈನ್ ತಂತಿ ಜೋಡಿಸುವ ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಯುವಕರ ಜೀವ ಬಲಿ ಪಡೆದಿದೆ.
ಬಾಲಕೋಟ ಜಿಲ್ಲೆಯ ಹಿಡಕಲ್ ಮೂಲದ ಹಣಮಂತ ಮುಗುದುಮ್ (34) ಹಾಗೂ ಅಶೋಕ್ ಮಾಳಿ (35)
ಮೃತ ದುರ್ದೈವಿಗಳು.
ಮೇನ್ ಲೈನ್ ವಿದ್ಯುತ್ ಅಂಟಿಕೊಂಡು ನಂತರ ಇಬ್ಬರು ಯುವಕರು ಸ್ಥಳದಲ್ಲಿ ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ನಂತರ ಅಥಣಿ ಆಸ್ಪತ್ರೆ ಸೇರುವಷ್ಟರಲ್ಲಿ ಕೊನೆ ಉಸಿರು ಎಳೆದಿದ್ದಾರೆ.
ಅಥಣಿ ತಾಲೂಕಿನ ಬಳ್ಳಿಗೇರಿ 110/11 ವಿದ್ಯುತ್ ವಿತರಣಾ ಕೇಂದ್ರ ಹತ್ತಿರದಲ್ಲೇ ಕೆಲಸ ವೇಳೆ ಈ ಘಟನೆ ಸಂಭವಿಸಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಕೆಲಸ ಪ್ರಾರಂಭಿಸುವ ಮುಂಚೆ ಏರಿಯಾ ಲೈನ್ ಮೆನ್ ಕಡೆಯಿಂದ ಎಲ್ ಸಿ ಪಡೆಯಲಾಗಿತ್ತು. ಎಲ್ ಸಿ ಪಡೆದ ಸುಮಾರು ಎರಡು ಘಂಟೆಯವರೆಗೆ ಟ್ರ್ಯಾಕ್ಟರ್ ಸಹಾಯದಿಂದ ಕಂಬ ಹತ್ತಿ ತಂತಿ ಜೋಡಣೆ ಕೆಲಸ ನಡೆದಿತ್ತು. ಆದರೆ ಎಲ್ ಸಿ ವಾಪಸ್ ಪಡೆಯದೆ ಆದರೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಬಂತು ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ.
ಇನ್ನು ಅಥಣಿ ವಲಯದ HESCOM ಇಲಾಖೆಯ ಸೆಕ್ಷನ್ ಅಧಿಕಾರಿ ದಾಸರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವಿದ್ಯುತ್ ಹರಿದಾಡಿದ ಬಗ್ಗೆ ನಿಖರ ಕಾರಣ ಗೊತ್ತಾಗಿಲ್ಲ ಪರಿಶೀಲಿಸಲಾಗುತ್ತಿದೆ ಅಂತಾ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


