nammatumakuru

    Subscribe to Updates

    Get the latest creative news from FooBar about art, design and business.

    What's Hot

    ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ

    June 29, 2025

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ

    June 29, 2025

    88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ

    June 29, 2025
    Facebook Twitter Instagram
    ಟ್ರೆಂಡಿಂಗ್
    • ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ
    • ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ
    • 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ
    • ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಅಭಿಪ್ರಾಯ
    • ಕಾನೂನು ಬಾಹಿರ ಚಟುವಟಿಕೆ ಗಮನಕ್ಕೆ ಬಂದ್ರೆ ಗಮನಕ್ಕೆ ತನ್ನಿ: ಪತ್ರಕರ್ತರಿಗೆ ವೃತ ನಿರೀಕ್ಷಕ ಪ್ರಸನ್ನ ಕುಮಾರ್ ಮನವಿ
    • ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇವತ್ತು ದೇಶವಿದೆ: ಸಚಿವ ಸಂತೋಷ್ ಲಾಡ್
    • ಕೊಳೆತು ನಾರುತ್ತಿದ್ದ ನಾಯಿಯ ಜೊತೆಗೆ ಮಹಿಳೆ ವಾಸ:  ಪ್ಲಾಟ್ ನೊಳಗೆ ಹೋದ ಪೊಲೀಸರಿಗೆ ಶಾಕ್
    • ಪತ್ರಕರ್ತನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಶಾಸಕ ಸಿ.ಬಿ.ಸುರೇಶ ಬಾಬು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಲ್ಪಸಂಖ್ಯಾತರ ವಿರೋಧಿಗಳಿಗೆ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಜಮೀರ್ ಅಹ್ಮದ್ ಖಾನ್
    ಮಧುಗಿರಿ April 28, 2023

    ಅಲ್ಪಸಂಖ್ಯಾತರ ವಿರೋಧಿಗಳಿಗೆ 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ: ಜಮೀರ್ ಅಹ್ಮದ್ ಖಾನ್

    By adminApril 28, 2023No Comments4 Mins Read
    madugiri

    ಮಧುಗಿರಿ: ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ಅವಧಿಯಲ್ಲಿ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ 3150 ಕೋಟಿ ರೂ ಅನುದಾನ ನಿಗಧಿ ಮಾಡಿ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದ್ದರು ಆದರೆ ಈ ಅನುದಾನವನ್ನು ಇಳಿಕೆಗೆ ಕುಮಾರಸ್ವಾಮಿಯೇ ಕಾರಣ ಎಂದು ಮಾಜಿ ಸಚಿವ ಬಿ.ಝೆಡ್ ಜಮೀರ್ ಅಹಮದ ಖಾನ್ ತಿಳಿಸಿದರು.

    ಪಟ್ಟಣದ ದಂಡೂರು ಬಾಗಿಲು ಸಮೀಪ ಇರುವ ಆಶುಕಾಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಅಲ್ಪಸಂಖ್ಯಾತ ರ ಅಭಿವೃದ್ಧಿ ಗಾಗಿ ಸಿದ್ದರಾಮಯ್ಯ ನವರು 400 ಕೋಟಿ ಇದ್ದ ಅನುದಾನವನ್ನು 3150 ಕೋಟಿಗೆ ಹೆಚ್ಚಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಮುದಾಯದ ವಿದ್ಯಾರ್ಥಿಗಳಿಗಾಗಿ , ಚಾಲಕರಿಗಾಗಿ, ಉನ್ನತ ವ್ಯಾಸಂಗಕ್ಕೆ ಹೊರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿದ್ದೇನೆ  ಎಂದರು.


    Provided by

    ನಿಮ್ಮ ಮನೆ ಮಗ ಜಮೀರ್ ಮೇಲೆ ನಂಬಿಕೆ ಇಟ್ಟು ನಾಲ್ಕು ಖಾತೆಗಳನ್ನು ನೀಡಿದ್ದು ಕಾಂಗ್ರೆಸ್ ಸರಕಾರ ಆದರೆ ಕುಮಾರ ಸ್ವಾಮಿ ಅಧಿಕಾರ ಹಿಡಿದಾಗ ಹಜ್ ಮತ್ತು ವಕ್ಪ್ ಸಚಿವರನ್ನಾಗಿ ನನ್ನನ್ನು  ನೇಮಕ  ಮಾಡಿದರು.  ಕಳೆದ ಚುನಾವಣೆಯ ಅವಧಿಯಲ್ಲಿ 38 ಸ್ಥಾನಗಳಿಸಿದ ಜೆಡಿಎಸ್ ಪಕ್ಷದಿಂದ ಮುಖ್ಯ ಮಂತ್ರಿ ಯಾಗಿದ್ದ ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ 3150 ಕೋಟಿ ರೂ ಇದ್ದ ಅನುಧಾನವನ್ನು ಕೇವಲ 1800 ಕೋಟಿಗೆ ಇಳಿಸಿದರು ಎಂದರು.

    ನಂತರ ಅಧಿಕಾರ ಹಿಡಿದ ಬಿಜೆಪಿಯವರು ಕೇವಲ 1000 ಕೋಟಿ ರೂಗಳಿಗೆ ಇಳಿಸಲು ಕಾರಣ ಇದೇ ಕುಮಾರಸ್ವಾಮಿ ಇಂತಹವರಿಗೆ ನಾವುಗಳು ಮತ ಚಲಾಯಿಸಬೇಕೆ , ನಾನೇ ಖುದ್ದು ಹೋಗಿ ಆಹ್ವಾನ ಪತ್ರಿಕೆ ನೀಡಿದರು ಬೆಂಗಳೂರಿನಲ್ಲಿದ್ದರು ಕೂಡ ಹಜ್ ಕಾರ್ಯಕ್ರಮದ ಆರಂಭಕ್ಕೆ ಬರಲೇ ಇಲ್ಲಾ , ಇಬ್ರಾಹಿಂ  ಅವರಿಗೆ   ಹಲವಾರು ಹುದ್ದೆಗಳನ್ನು ನೀಡಿ ಗೌರವಿಸಿದ್ದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಆದರೆ ಇಬ್ರಾಹಿಂ ಇವರುಗಳ ವಿರುದ್ಧ ಮಾತನಾಡುವುದು ಸರಿಯೇ ? ಎಂದು ಪ್ರಶ್ನಿಸಿದರು.

    ಜೆಡಿಎಸ್ ಗೆ ಹೋದ ಇಬ್ರಾಹಿಂ ರವರನ್ನು ಎಂ ಎಲ್ ಸಿ ಮಾಡಲಿಲ್ಲ ಬದಲಿಗೆ 50 ಲಕ್ಷ ರೂ ಹಣ ಪಡೆದು ಶರವಣನಿಗೆ ಎಂ ಎಲ್ ಸಿ ಮಾಡಿದ್ದು ಇದೇ ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರು , ಬಡವರ ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

    ನಾನು ಅಧಿಕಾರದಲ್ಲಿರುವರೆಗೂ ಯಾರೊಬ್ಬರನ್ನು ತಲೆ ಬಾಗಿಸದಂತೆ ಜವಾಬ್ದಾರಿ ಯಿಂದ ನಡೆದು ಕೊಳ್ಳುತ್ತೇನೆ. ಇಂದಿನ ಕ್ಷೇತ್ರದ ಶಾಸಕ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆಂದು ನಿಮಗೆ ತಿಳಿದಿದೆ. ಹಿಜಾಬ್ , ಲೌಡ್ ಸ್ಪೀಕರ್ , ಹಲಾಲ್ ಜಟಾಕ ಕಟ್ ಗಳನ್ನು ವಿರೋಧಿಸಿದವರಿಗೆ ನೀವುಗಳು ಈ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

    ಜೆಡಿಎಸ್ ಪರವಾಗಿ ಮತ ಚಲಾಯಿಸಿದರೆ ಅದೂ ಬಿಜೆಪಿಯನ್ನು ಬೆಂಬಲಿಸಿದಂತೆ ಯಾವುದೇ ಕಾರಣಕ್ಕೂ ಜೆಡಿಎಸ್ ಬಿಜೆಪಿಗೆ ಮತ ಚಲಾಯಿಸ ಬೇಡಿ , ನನ್ನ ಮೇಲೆ ಗೌರವವಿಟ್ಟು ಸಮುದಾಯದವರು ರಾಜಣ್ಣನವರ ಪರವಾಗಿ ಕಾಂಗ್ರೆಸ್ ಗೆ ಮತ ಚಲಾಯಿಸಿ ಎಂದು ಮನವಿ ಮಾಡಿದರು.

    1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಶೇ.6ರಷ್ಟು ಮೀಸಲಾತಿಯ ವರದಿ ಸಲ್ಲಿಸಿದ್ದರು ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರ ಸರಕಾರ ಹೋದ ನಂತರ ದೇವೆಗೌಡರು ಮುಖ್ಯಮಂತ್ರಿ ಯಾಗಿದ್ದು ಶೇ.6 ರಷ್ಟಿದ್ದ ಮೀಸಲಾತಿ ಯನ್ನು ಶೇ.4 ಇಳಿಸಿ ಕೊಟ್ಟರು ಎಂದರು.

    ಕೆ.ಎನ್.ರಾಜಣ್ಣ ಮಾತನಾಡಿ, ಜನರ ಭಾವನೆಗಳನ್ನು ಪ್ರಚೋದಿಸಿದ ಸರಕಾರ ನಿಮಗೆ ಬೇಕೆ , ದೇಶದ ಪಿತಾಮಹ ಗಾಂಧಿಯವರನ್ನು ಕೊಂದಿದ್ದು ಯಾರು.? ನಾವುಗಳು ಗಾಂಧಿ ಹಿಂದೂತ್ವ ವನ್ನು ಪ್ರತಿಪಾದಿಸುತ್ತವೆ ಬಿಜೆಪಿ ಯವರು ಗೊಡ್ಸೆ ಹಿಂದೂತ್ವ ಪರಿಪಾಲನೆ ಮಾಡುವವರು ಈ ದೇಶಕ್ಕೆ ಮಾರಕವಾಗಿದ್ದಾರೆ ಎಂದರು.

    ಗುಜರಾತ್ ರಾಜ್ಯಕ್ಕೆ ಪ್ರವೇಶ ಮಾಡದಂತೆ ನ್ಯಾಯಾಲಯದ ಸೂಚಿಸಿದ ವ್ಯಕ್ತಿಯೇ ಇಂದೂ ಕೇಂದ್ರದ ಗೃಹ ಸಚಿವರಾಗಿದ್ದಾರೆ. ಬಿಜೆಪಿ ಪಕ್ಷ ಸಂಘಟನೆ ಯಾಗಲು ಜೆಡಿಎಸ್ ಪಕ್ಷವೇ ಮೂಲವಾಗಿದ್ದು ಆ ಪಕ್ಷಕ್ಕೆ ಇಂದೂ ಬಿ ಟೀಮ್ ಆಗಿ ಗುರುತಿಸಿಕೊಳ್ಳುತ್ತಿದೆ ಎಂದರು.

    ದೇವೆಗೌಡರನ್ನು ಸೋಲಿಸಿದ್ದು ಯಾರೆಂದು ನಿಮಗೆ ತಿಳಿದಿದೆ ಆದರೂ ಇಂತಹ ಅಪಪ್ರಚಾರಗಳಿಗೆ ಕಿವಿ ಗೂಡಬೇಡಿ. ಡಿ.ಕೆ , ಸಿದ್ದರಾಮಯ್ಯ ನವರು ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಗಳು ನಿಮ್ಮ ಮನೆಯ ಬಾಗಿಲಿಗೆ ತಲುಪಿಸಿದ್ದೆವೆ. ಬಡವರ , ಜನಪರ ವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

    ಟಿಪ್ಪು ಜಯಂತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ:
    ಟಿಪ್ಪು ಮತಾಂತದ ನಾಗಿರಲಿಲ್ಲಾ , ಶೃಂಗೇರಿಯಲ್ಲಿ, ಕೊಲ್ಲೂರು, ಧರ್ಮಸ್ಥಳ, ನಂಜನಗೂಡಿನ ದೇವಾಲಯಗಳಲ್ಲಿ ಟಿಪ್ಪುವನ್ನು ಗೌರವಿಸಲಾಗುತ್ತಿದೆ. ಇಂತಹ ಸಂಪ್ರಾದಾಯ ಹಾಗೂ ಪದ್ದತಿಗಳನ್ನು ವಿರೋಧಿಸುವ ಜನರನ್ನು ಏನೆಂದು ಕರೆಯಬೇಕು , ರೇಷ್ಮೆ ಬೆಳೆಯನ್ನು ರಾಜ್ಯದಲ್ಲಿ ಪರಿಚಯಿಸಿದ್ದು ಯಾರು ? ಬಿಜೆಪಿಯವರು ಅಲ್ಪಸಂಖ್ಯಾತ ರಿಗೆ ಈ ಹಿಂದೆ ಶೇ. 4ರಷ್ಟಿದ್ದ ಮೀಸಲಾತಿ ಯನ್ನು ರದ್ಧು ಮಾಡಿದ್ದು ಯಾರು ? ಯಾವ ಸರಕಾರವೆಂದು ನಿಮಗೆ ತಿಳಿದಿಯೇ ಎಂದು ಸಭಿಕರನ್ನು ಪ್ರಶ್ನಿಸಿದರು.

    ಬಡವರ ಪರ , ಅಲ್ಪಸಂಖ್ಯಾತರ ರಕ್ಷಣೆ ಮಾಡುವವರಲ್ಲಿ ಜಮೀರ್ ಸದಾ ಮುಂದು ನಾನು ಎಲ್ಲಾ ಜಾತಿಯವರ ಪರವಾಗಿ ಹೋರಾಟ ಮಾಡಿದ್ದೇನೆ ಇದೂ ನನ್ನ ಕಡೆಯ ಚುನಾವಣೆಯಾಗಿದ್ದು ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಕ್ರ.ಮ ಸಂಖ್ಯೆ 3 ರ ಪರವಾಗಿ ಮತ ಚಲಾಯಿಸಿ ಎಂದರು.

    ನಿಖಿತ್ ಮೌರ್ಯ ಮಾತನಾಡಿ ಇಂದೂ ರಾಜ್ಯದ ಮೈದಾನಗಳಲ್ಲಿ ಆಟವಾಡುವ ಮಕ್ಕಳನ್ನು ಕೇಳಿದರೆ ಸಾಕು ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಕೇಳಿದರೆ ಅವರು ಹೇಳುವುದು ಕಾಂಗ್ರೆಸ್ ಪಕ್ಷವೆಂದು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಇಂದೂ ಐಸಿಯು ಹಂತ ತಲುಪಿ ಇದೂ ಬಿಜೆಪಿಯ ಪರವಾಗಿದೆ.

    ಕಾಂಗ್ರೆಸ್ ಸರಕಾರ ಅನ್ನ ಭಾಗ್ಯ ಕೊಟ್ಟಿದೆ. ಕರೊನಾ ಸಂಧರ್ಭದಲ್ಲಿ ಜನರನ್ನು ಕೈ ಹಿಡಿದಿದ್ದು ಇದೇ ಅನ್ನ ಭಾಗ್ಯ. ಹಿಜಾಬ್ ಧರಿಸದಂತೆ ವಿರೋಧ ವ್ಯಕ್ತ ಪಡಿಸಿದ ಸರಕಾರ ಅವಧಿಯಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯೇ ಅತೀ ಹೆಚ್ಚು ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.

    ಸ್ವಚ್ಚ ಭಾರತ್ ಯೋಜನೆ ಜಾರಿಗೆ ತಂದ ಬಿಜೆಪಿ ಸರಕಾರ ಜನರ ಜೇಬನ್ನು ಖಾಲಿ ಮಾಡಿಸಿದೆ .ಮೇ .10 ರಂದು ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ. ಮೇ.ತಿಂಗಳಲ್ಲಿ ವಿದ್ಯುತ್ ಬಿಲ್ ಪಾವತಿಸಿ ನಂತರ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ನಿಮ್ಮಗಳ ವಿದ್ಯುತ್ ಬಿಲ್ ಪಾವತಿಸುತ್ತದೆ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಗ್ಯಾರೆಂಟಿ ಕಾರ್ಡ್ ನಲ್ಲಿನ ಭರವಸೆಗಳ ಈಡೇರಿಕೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡರಾಜು , ಎನ್.ಗಂಗಣ್ಣ , ಎಸ್ ಎ ಜೆ ಶೌಕತ್ , ಅಯ್ಯೂಬ್ , ಪುರಸಭಾ ಸದಸ್ಯರಾದ ನಸೀಮಾ ಬಾನು , ಶಾಹೀನಾ ಕೌಸರ್ , ರಾಜ್ಯ ವಕ್ಪ ಬೋರ್ಡ್ ನಿರ್ದೇಶಕ ಅನವರ್ ಬಾಷ , ಗ್ರಾ.ಪಂ ಸದಸ್ಯೆ ರಿಯಾಹನಾ ಬಾನು , ಆಡಿಟರ್ ಸುಲ್ತಾನ್ , ಮಧುಗಿರಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಅಯುಬ್, ಸೈಯದ್ ಅಲಾವುದ್ದೀನ್, ಸಿಕಂದರ್ , ಮೊಹಮದ್ ಜಾಫರ್ ಸಾಧಿಕ್ ಬಾಬಫಕೃದ್ದೀನ್ , ಮನ್ನು , ಇಮ್ರಾನ್ , ಶಿರಾ ನಗರಸಭಾ ಸದಸ್ಯ ಜಾಫರ್ ಅಹಮದ್ , ಜಿ.ಶಾಹನ್ , ರಫೀಕ್ , ಅಮ್ರಾಜ್ , ಜಮೀರ್ , ಸಾಧಿಕ್ , ಹರ್ಷದ್ ಹುಸೇನ್, ಆಲಿ ಸಾಬ್ , ಗೌಸ್ ಪೀರ್ , ಮೆಹಬೂಬ್ ಸಾಬ್ , ನಿಜಾಮ್ , ವಸೀಂ , ಎಸ್ ಕೆ ಸೈಯದ್ , ಅಸ್ಲಂ, ಸನಾವುಲ್ಲಾ ಸಾಬ್ , ಶೌಕತ್ , ಜಾಫರ್ ಸಾಧಿಕ್ ಷರೀಫ್ , ಮುಬಾರಕ್, ದಾದಾಪೀರ್ ಸಾವಿರಾರು ಜನ ಕಾರ್ಯಕರ್ತರು ಇದ್ದರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ: ಸಚಿವ ಕೆ.ಎನ್.ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

    June 19, 2025

    ಮಧುಗಿರಿ: ಪ್ರೋತ್ಸಾಹ ಧನ ಸೌಲಭ್ಯಕ್ಕಾಗಿ ಆನ್‌ ಲೈನ್ ಅರ್ಜಿ ಆಹ್ವಾನ

    June 7, 2025

    ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಡ್ಲಾಪುರ ಪಿಡಿಓ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

    May 14, 2025
    Our Picks

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025

    24 ಬಾಲಕಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಟೈಯರ್ ಸ್ಫೋಟಗೊಂಡು ಮನೆಗೆ ನುಗ್ಗಿದ ಬಸ್: 10 ಕ್ಕೂ ಅಧಿಕ ಮಂದಿಗೆ ಗಾಯ

    June 29, 2025

    ತುಮಕೂರು :  ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಕೆ ಎಸ್ ಆರ್ ಟಿ ಸಿ ಬಸ್ ರಸ್ತೆ ಪಕ್ಕದ…

    ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಬರ್ಬರ ಹತ್ಯೆ: ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಕೃತ್ಯ

    June 29, 2025

    88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ

    June 29, 2025

    ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಅಭಿಪ್ರಾಯ

    June 29, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.