ಗುಬ್ಬಿ: ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು ಈ ಬಾರಿ ಚುನಾವಣೆಯನ್ನು ಬಲಿಷ್ಟವಾಗಿ ಮಾಡಿ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಅಧಿಕಾರಕ್ಕೆ ತರುತ್ತೇವೆ ಎಂದು ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜು ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಲಿನ ಭಯ ಹತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಯಾವುದೇ ರೀತಿಯ ಅಪಪ್ರಚಾರ ಮಾಡಿದರು ಸಹ ನಮ್ಮ ಸಂಘಟನೆ ನಮ್ಮ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದು ಈ ಬಾರಿ ಚುನಾವಣೆಯನ್ನು ಎದುರಿಸಿ ರೈತರ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಜಿ.ಎನ್ ಬೆಟ್ಟಸ್ವಾಮಿ ಮಾತನಾಡಿ ಚುನಾವಣೆಯ ಕೊನೆಯ ದಿನಗಳಲ್ಲಿ ಮಾಜಿ ಶಾಸಕರು ಇಲ್ಲಸಲ್ಲದ ಆರೋಪಗಳು, ಸುಳ್ಳು ಸುದ್ದಿಗಳು ಅಬ್ಬಿಸುತ್ತಾರೆ ಇದು ಪ್ರತಿ ಚುನಾವಣೆಯಲ್ಲೂ ಸರ್ವೇಸಾಮಾನ್ಯ ಆದರೆ ಈ ಬಾರಿ ಅಂತಹ ಯಾವುದೇ ಮಾತುಗಳಿಗೂ ಮತದಾರರು ಕಿವಿ ಕೊಡುವುದಿಲ್ಲ ಮತ್ತು ಕೇಳುವುದು ಇಲ್ಲ ಜೆಡಿಎಸ್ ಪಕ್ಷ ಈ ಬಾರಿ ಎಲ್ಲರ ಒಗ್ಗಟ್ಟಿನಿಂದ ಎಲ್ಲ ಸಮುದಾಯದ ಸಹಕಾರದಿಂದ ಗೆಲುವು ಪಡೆಯುತ್ತದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ 20 ವರ್ಷದ ಆಡಳಿತಕ್ಕೆ ಈ ಬಾರಿ ಜನರೇ ಫುಲ್ ಸ್ಟಾಪ್ ಇಡುತ್ತಾರೆ ನಾಗಣ್ಣ ಈ ಬಾರಿ ಗೆಲ್ಲುವುದು ಶತಸಿದ್ಧ ಯಾವುದೇ ಕಾರಣಕ್ಕೂ ಮುಖಂಡರು ಕಾರ್ಯಕರ್ತರು ಬೇರೆ ಪಕ್ಷದವರು ಹೇಳುವ ಅಪಪ್ರಚಾರಕ್ಕೆ ಕಿವಿಗೊಡದೆ ಬಲಿಷ್ಠವಾಗಿ ಚುನಾವಣೆಯನ್ನು ಮಾಡೋಣ ಗೆದ್ದು ಬರೋಣ ಎಂದು ತಿಳಿಸಿದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy