- ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಸಿಂಗ್ ನ ಕರ್ತವ್ಯ ಲೋಪವನ್ನು ಕಂಡ ತುಮಕೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ ರವರು ಅಮಾನತು ಮಾಡಿ ಅನುಮತಿ ಇಲ್ಳದೆ ಕೇಂದ್ರ ಸ್ಥಾನ ಬಿಡದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸರ್ಕಾರದಿಂದ ಅನುಷ್ಠಾನಗೊಳಿಸಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 2023-24ನೇ ಸಾಲಿನ ವಾರ್ಷಿಕ ಮಾನವ ದಿನಗಳ ಗುರಿ 10802 ಇದ್ದು ಸೆಪ್ಟೆಂಬರ್ 2023ರ ಮಾಹೆಯಲ್ಲಿ ಅತ್ಯಂತ 5450 ದಿನಗಳ ಗುರಿ ನಿಗದಿಪಡಿಸಿದ್ದು ಪ್ರಸ್ತುತ ದಿನಾಂಕದ ವರದಿಯನ್ನು ಪರಿಶೀಲಿಸಿ ಇದುವರೆಗೂ ಕೇವಲ 3187 ಮಾನವ ದಿನಗಳನ್ನು ಮಾತ್ರ ಸೃಜನ ಮಾಡಿ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷತೆಯನ್ನು ತೋರಿ ಕರ್ತವ್ಯ ಲೋಪವೆಸಗಿದ್ದ ಪಿಡಿಓ ಸಂತೋಷ್ ಸಿಂಗ್.
ನರೇಗಾ ಯೋಜನೆಯಡಿ 80 ಕಾಮಗಾರಿಗಳನ್ನು ಜಿಯೋ ಟ್ಯಾಗ್ ಮಾಡದೆ ಬಾಕಿ ಉಳಿಕೆ ಮತ್ತು ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಪೈಕಿ 2021 22 ನೇ ಸಾಲಿನ ಶೇಕಡ 65 ರಷ್ಟು ಹಾಗೂ 2022 23ನೇ ಸಾಲಿನ ಶೇಕಡ 43.59ರಷ್ಟು ಕಾಮಗಾರಿಗಳನ್ನು ತಂತ್ರಾಂಶದಲ್ಲಿ ಮುಕ್ತಾಯಗೊಳಿಸಿ ನೂರರಷ್ಟು ಪ್ರಗತಿಯನ್ನು ಸಾಧಿಸುವಲ್ಲಿ ವಿಫಲದ್ದು. 2023ರ ಆಗಸ್ಟ್ ತಿಂಗಳ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಪಾವತಿ ಮಾಡದೆ ಕರ್ತವ್ಯ ಲೋಪವೆಸಗಿದ್ದ ಪಿಡಿಓ ಅಧಿಕಾರಿಯಾಗಿರುತ್ತಾರೆ.
ಗ್ರಾಮೀಣ ಸ್ವಚ್ಚ ಭಾರತ್ ಮಿಷನ್ ಯೋಜನೆ ಅಡಿ 16 ಗುರಿ ನಿಗದಿ ಪಡಿಸಿದ್ದು ಇದುವರೆಗೂ ಶೂನ್ಯ ಪ್ರಗತಿ ಸಾಧಿಸುವಲ್ಲಿ ಈ ಪಿಡಿಓ ತನ್ನ ಕರ್ತವ್ಯ ಏನು ಎಂಬುದನ್ನು ತೋರಿಸುತ್ತಾರೆ.
ಎರಡನೇ ಸಾಲಿನ ಗ್ರಾಮೀಣ ಪ್ರಧಾನ ಮಂತ್ರಿ ಅವಾಜ್ ಯೋಜನೆಯ ಅಡಿಯಲ್ಲಿ 18 ಮನೆಗಳ ಗುರಿ ಇದ್ದು ಇದುವರೆಗೂ ಕೇವಲ 14 ಮನೆಗಳಿಗೆ ಮಾತ್ರ ಪಿಡಿಒ ಅನುಮೋದನೆಯನ್ನು ನೀಡಿರುತ್ತಾರೆ. ಘನ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ ತೋರಿ ಮೇಲಾಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸುವಲ್ಲಿ ವಿಫಲರಾಗಿ ಕರ್ತವ್ಯ ಲೋಪವೇಸಗಿದ್ದ ಪಿಡಿಓ ಸಂತೋಷ್ ಸಿಂಗ್ ರನ್ನು ಜಿಲ್ಲಾಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭು ಜಿ ರವರು ಅಮಾನತ್ತು ಪಡಿಸಿರುತ್ತಾರೆ..
ತುಮಕೂರು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರಲ್ಲಿನ ನಿಯಮ 10(1)ರಡಿ) ರಂತ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಸಂತೋಷ್ ಸಿಂಗ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕ್ಯಾಮೇನಹಳ್ಳಿ ಗ್ರಾ.ಪಂ., ಕೊರಟಗೆರೆ ತಾಲ್ಲೂಕು ಇವರ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇರಿಸಿ ಸದರಿಯವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958ರ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಾವತಿಸಲು ಸೂಚಿಸಿ ಆದೇಶಿಸಲಾಗಿದೆ. ಈ ಒಂದು ಆದೇಶವು ಜಿಲ್ಲೆ ಎಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ಭಯ ಉಂಟಾಗಿದೆ.