ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಆಯೋಜನೆಯ ಕಣ್ಮನ ಸೆಳೆಯುವ ದೀಪಾಲಂಕಾರದಿಂದ, 25ಕ್ಕೂ ಹೆಚ್ಚು ರಾಜ್ಯಗಳು, ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿ ನಡೆಸಿಕೊಟ್ಟ 33 ನೇ ರಾಷ್ಟ್ರೀಯ ಸಬ್ ಜೂನಿಯರ್ ಖೋಖೋ ಪಂದ್ಯಾವಳಿಯಲ್ಲಿ ಬಾಲಕ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಎರಡು ತಂಡಗಳು ಚಾಂಪಿಯನ್ ಗಳಾಗಿ ಹೊರಹೊಮ್ಮಿದವು.
ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು ಕರ್ನಾಟಕ ತಂಡವನ್ನು 16=14ಅಂಕಗಳೊಂದಿಗೆ ಮಣಿಸಿ ಪ್ರಥಮ ಸ್ಥಾನಗಳಿಸಿತು. ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದ್ದು. ಕೊಲ್ಲಾಪುರ ತೃತೀಯ ಸ್ಥಾನ ರಾಜಸ್ಥಾನ ನಾಲ್ಕನೇ ಸ್ಥಾನಗಳಿಸಿತು. ಹತ್ತು ಸಾವಿರ ನಗದು,ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು 34=20 ಕರ್ನಾಟಕ ತಂಡವನ್ನು ಮಣಿಸಿ. ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಕರ್ನಾಟಕ, ತೃತೀಯ ಸ್ಥಾನವನ್ನು ತೆಲಂಗಾಣ ಪಡೆದು ನಾಲ್ಕನೇ ಸ್ಥಾನವನ್ನು ಡೆಲ್ಲಿ ಅಲಂಕರಿಸಿತು, ಪ್ರಥಮ ಸ್ಥಾನ ಪಡೆದ ತಂಡಕ್ಕೆ ಹತ್ತು ಸಾವಿರ ನಗದು ಬಹುಮಾನ ಆಕರ್ಷಕ ಟ್ರೋಫಿ ನೀಡಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಟ್ರಾಲಿ ಬ್ಯಾಗ್ ಉಡುಗೊರೆಯಾಗಿ ನೀಡಲಾಯಿತು. ಐದು ದಿನಗಳ ಈ ಪಂದ್ಯ ಅದ್ಭುತ ರೋಮಾಂಚನಕಾರಿಯಾಗಿ ಕ್ರೀಡಾಭಿಮಾನಿಗಳನ್ನು ಕ್ರೀಡಾಪಟುಗಳು ರಂಜಿಸಿದರು. ಎರಡು ತಂಡಗಳ ಆಟಗಾರರು ಕ್ರೀಡಾ ಸ್ಪೂರ್ತಿ ಮೆರೆದರು. ಸ್ಥಳೀಯ ಶಾಲಾ ಕಾಲೇಜುಗಳು, ಕಲ್ಯಾಣ ಮಂಟಪಗಳನ್ನು ಸಂಸ್ಥೆ ಮತ್ತು ಮಾಲೀಕರು ಉಚಿತವಾಗಿ ನೀಡಿ ಕ್ರೀಡಾಭಿಮಾನ ಮೆರೆದರು. ಸ್ಪೋರ್ಟ್ಸ್ ನ ಸದಸ್ಯರು ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮ ಪಂದ್ಯವನ್ನು ನೋಡಲು ಕಲ್ಪತರು ಕ್ರೀಡಾಂಗಣದಲ್ಲಿ10 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಬಾಕ್ಸ್-ರಾಷ್ಟ್ರೀಯ ಜೂನಿಯರ್ ಖೋ ಖೋ ಪಂದ್ಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಪರಿಣಾಮವಾಗಿ, ಜಿಲ್ಲಾ ಕೇಂದ್ರದ ಎಲ್ಲಾ ಅರ್ಹತೆ ಇರುವ ತಿಪಟೂರನ್ನು ರಾಜ್ಯಗಳಿಗೆ ಪರಿಚಯಿಸುವ ಕೀರ್ತಿ ಸಿಕ್ಕಿದ್ದು ಪುಣ್ಯದ ಕೆಲಸ. ಮುಂದಿನ ದಿನಗಳಲ್ಲಿ ಸೀನಿಯರ್ ಕಬ್ಬಡಿ, ಬ್ಯಾಟ್ಮಿಟನ್, ಅಂತಹ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತದೆ. ಇತ್ತೀಚಿನ ಪ್ರಧಾನ ಮಂತ್ರಿಗಳ ಮಾನ್ ಕಿ ಬಾತ್ ಕಾರ್ಯಕ್ರಮದಲ್ಲಿ ಖೋ ಖೋ ಪದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ತಿಳಿಸಿದ್ದಾರೆ. ಖ್ಯಾತ ಕ್ರಿಕೆಟ್ ಪಟು ವಿರಾಟ್ ಕೊಹ್ಲಿ ಮೊದಲು ಇದೇ ಆಟದ ಆಟಗಾರರಾಗಿದ್ದರು. ಕ್ರೀಡಾಪಟುಗಳು ಹೆಚ್ಚಿನ ಆದ್ಯತೆ ನೀಡಬೇಕು.
ಲೋಕೇಶ್ವರ್ ರಾಷ್ಟ್ರೀಯ ಖೋ ಖೋ ಸಮಿತಿ ಉಪಾಧ್ಯಕ್ಷರು ಹಾಗೂ ರಾಜ್ಯ ಮತ್ತು ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು


