ಬೀದರ್: ಜಿಲ್ಲೆಯಲ್ಲಿ ಸಮಾಜ ವಿರೋಧಿ ಹಾಗೂ ಅಕ್ರಮ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ತೊಡಕಾಗಿದ್ದ 5 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ .
ಬೀದರ ಜಿಲ್ಲೆಯ ಬೀದರ ನಗರ ಮತ್ತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಮತ್ತು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಧಕ್ಕೆ ತರುವ 5 ಜನ ಸಮಾಜಘಾತುಕರನ್ನು ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ 6 ತಿಂಗಳವರೆಗೆ ಪ್ರವೇಶಿಸಿದಂತೆ ಬೀದರ್ SP ರವರು ನೀಡಿದ ಪ್ರಸ್ತಾವನೆ ಮೇರೆಗೆ ಬೀದರ್ ಜಿಲ್ಲಾಧಿಕಾರಿ ರವರು ಗಡಿಪಾರು ಆದೇಶ ಮಾಡಿರುತ್ತಾರೆ.

ಗಡಿಪಾರು ಆದ ವ್ಯಕ್ತಿಗಳಿಗೆ 6 ತಿಂಗಳ ವರೆಗೆ ಜಿಲ್ಲೆ ಪ್ರವೇಶ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿ ಹಾಗೂ ಗಡಿ ಪಾರಾದ ಜಿಲ್ಲೆಯಲ್ಲೂ ಇವರ ಮೇಲೆ ನಿಗಾ ವಹಿಸಲಾಗುವುದು. ಕಳುಹಿಸಿ ಕೊಟ್ಟ ಜಿಲ್ಲೆಯಲ್ಲಿ ಉತ್ತಮ ವರ್ತನೆ ತೋರಿದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್


