ಹೆಚ್.ಡಿ. ಕೋಟೆಯಲ್ಲಿ ಅದ್ದೂರಿಯಾಗಿ ನಡೆದ ಯುವ ಸಪ್ತಾಹ ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಗಿರಿಜನ ಮುಖಂಡ ಸೋಮಣ್ಣ ಆಗಮಿಸಿದರು.
ಹೆಚ್.ಡಿ. ಕೋಟೆ ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಮಹದೇಶ್ವರ ಕಲಾಬಳಗ ಮಲಾರ ಮಹದೇವಸ್ವಾಮಿ ತಂಡ ಕಾರ್ಯಕ್ರಮ ಆಯೋಜಿಸಿತ್ತು. ಹಿರಿಯ ಪತ್ರಕರ್ತ ಬಸವರಾಜು ಹಾಗೂ ವೇದಿಕೆಯ ಗಣ್ಯರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ಪ್ರೌಢ ಶಾಲೆ ಶಿಕ್ಷಕ ರಂಗರಾಜೇಗೌಡ, ವಿದ್ಯಾರ್ಥಿಗಳು ವಿವೇಕಾನಂದರ ಜೀವನವನ್ನು ಹೆಚ್ಚು ಅಧ್ಯಯನವನ್ನು ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಅದರಿಂದ ವಿದ್ಯಾರ್ಥಿಗಳು ದುಷ್ಟ ಚಟಾಗಳಿನಿಂದ ದೂರ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮೊತ್ತ ಸೋಮಣ್ಣರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೈರೇಗೌಡ ಮಾತನಾಡಿದರು.
ಕಾರ್ಯಕ್ರಮದ ಸಂಘಟಕ ಮಲಾರ ಮಹದೇವಸ್ವಾಮಿ ಕಾರ್ಯಕ್ರಮದ ಎಲ್ಲಾ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ಗೀತಾ ಗಾಯನ ಮೆರುಗು ನೀಡಿ ಯುವಕರ ಉತ್ಸಾಹ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ, ಮೊತ್ತ ಸೋಮಣ್ಣ, ಬಸವರಾಜು, ಮಹಿಳಾ ಹೋರಾಟಗಾರರದ ಜಾಸೀಲಾ, ಪೊಲೀಸ್ ಇಲಾಖೆ ಸುರೇಶ ನಾಯಕ್, ಪುರುಷೋತ್ತಮ್, ರಂಗರಾಜೇಗೌಡ, ಬೈರೇಗೌಡ, ಗಣೇಶ್, ಮಲರಮಹಾದೇವಸ್ವಾಮಿ, ಹಾಗೂ ನೂರಾರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಲಾರ ಮಹದೇವಸ್ವಾಮಿ


