ತೆಲಂಗಾಣ: ಭಾರತದ 140 ಕೋಟಿ ಜನರೂ ಸಹ ನನ್ನ ಕುಟುಂಬಸ್ಥರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಟುಂಬವಾದಿಗಳ ಚಹರೆ ಬೇರೆಯಾಗಿದ್ದರೂ ಚರಿತ್ರೆ ಒಂದೇ ಎಂದು ಟೀಕಿಸಿದರು.
ಪಟ್ನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿಗೆ ಕುಟುಂಬವೇ ಇಲ್ಲ.., ಹೀಗಾಗಿ ಅವರು ವಂಶಪಾರಂಪರ್ಯ ಆಡಳಿತವನ್ನು ಸಹಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಪರಿವಾರವಾದಿಗಳ ಚರಿತ್ರಯೆಲ್ಲಿ ಜೂಟ್ ಮತ್ತು ಲೂಟ್ (ಸುಳ್ಳು ಮತ್ತು ಲೂಟಿ) ಸಾಮಾನ್ಯವಾಗಿದೆ ಎಂದು ನುಡಿದ ಪ್ರಧಾನಿ ಮೋದಿ, ತೆಲಂಗಾಣದಲ್ಲಿ ಟಿಆರ್ ಎಸ್ ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಏನೂ ಬದಲಾಗಿಲ್ಲ. ಇಬ್ಬರೂ ಸಹ ಒಂದೇ ಮೂಲದಿಂದ ಬಂದವರಾಗಿದ್ದಾರೆ ಎಂದು ಆರೋಪಿಸಿದರು.
ಟಿಆರ್ ಎಸ್ ಪಕ್ಷವು ಕಾಲೇಶ್ವರ ಹಗರಣ ನಡೆಸಿತು. ಕಾಂಗ್ರೆಸ್ ಅದರ ತನಿಖೆ ನಡೆಸದೆ ಬಾಯಿಮುಚ್ಚಿಕೊಂಡು ಕುಳಿತಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ನೀವೂ ಸರಿ ನಾವೂ ಸರಿ. ನೀವೂ ತಿಂದಿದ್ದೀರಿ ನಾವೂ ತಿನ್ನುತ್ತೇವೆ ಎಂಬುದು ಕಾಂಗ್ರೆಸ್ ಮತ್ತು ಟಿಆರ್ ಎಸ್ ನಡುವಿನ ಸಮನ್ವಯ ತರ್ಕ ಎಂದು ಟೀಕಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


