ವರದಿ : ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ಕೊರಟಗೆರೆ: ಕೇಂದ್ರ ಸರಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ಹೈಟೆಕ್ ಆಸ್ಪತ್ರೆ ತಂದೇ ತರುತ್ತೇನೆ ಇದು ಕೇವಲ ಭರವಸೆ ಅಲ್ಲ ಬಡ ಜನರ ನೋವಿನ ಮನವಿ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಪ್ರಥಮ ಆದ್ಯತೆ. ಸಿದ್ದರಬೆಟ್ಟ ಮತ್ತು ಏಳುಸುತ್ತಿನ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ರೂಪುರೇಷೆ ಮಾಡುತ್ತೇನೆ. ಕೊರಟಗೆರೆ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಕಾವಲುಗಾರನಾಗಿ ನಾನು ಹಗಲುರಾತ್ರಿ ಕೆಲಸ ಮಾಡುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್–ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದರೇ ರಾಜ್ಯಕ್ಕೆ ಬರಗಾಲವು ತಾನಾಗಿಯೇ ಬರುತ್ತೇ. ಕುಡಿಯುವ ನೀರು ಮತ್ತು ಮೇವಿಗೆ ಹಾಹಾಕಾರ ಎದುರಾಗಿದೆ. ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ದಿಗೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರ. ವಿ.ಸೋಮಣ್ಣ ಅಭಿವೃದ್ದಿಯ ಪರವಾದ ಜನಸ್ನೇಹಿ ನಾಯಕ. ತುಮಕೂರು ಜಿಲ್ಲೆಯನ್ನ ಅಭಿವೃದ್ದಿಗೆ ಅವರ ಕೊಡುಗೆ ನೀಡ್ತಾರೇ ಎಂದು ಹೇಳಿದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ ಕೊರಟಗೆರೆ ಕ್ಷೇತ್ರದ ಕಾರ್ಯಕರ್ತರು ಎಂಎಲ್ ಎ ಸೋಲಿನ ಸೇಡು ಎಂಪಿ ಚುನಾವಣೆಯಲ್ಲಿ ತೀರಿಸಿ. ಸುಧಾಕರಲಾಲ್ ಮತ್ತು ಅನಿಲ್ಕುಮಾರ್ ಸೇರಿದ್ರೇ ಕುರುಕ್ಷೇತ್ರವೇ ಮೀರಿಸುವ ಪ್ರಬಲ ಶಕ್ತಿಯೇ ಸೃಷ್ಟಿಯಾಗುತ್ತೇ. ಕೋರಾ ಮತ್ತು ಕೋಳಾಲ ಕ್ಷೇತ್ರದಲ್ಲಿ ನಾನು ಕಾರ್ಯಕರ್ತರ ಜೊತೆಗಿದ್ದೀನಿ. ಪಾಕಿಸ್ತಾನ ಜಿಂದಾಬಾದ್ ಎಂದೋರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತೇ ಎಂದು ಆರೋಪ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನರೇಂದ್ರಬಾಬು, ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಕ್ಯಾತರಾಯ, ಬಿಜೆಪಿ ಯುವಧ್ಯಕ್ಷ ಶಿವಕುಮಾರ್, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಪವನಕುಮಾರ್, ಡಾ.ಲಕ್ಷ್ಮೀಕಾಂತ, ಗುರುಧತ್, ಶ್ರೀನಿವಾಸ, ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಪಪಂ ಸದಸ್ಯ ಪುಟ್ಟನರಸಪ್ಪ, ರಮೇಶ್, ದಾಸಲುಕುಂಟೆ ರಘು, ವೆಂಕಟೇಶ್, ಸಿ.ಬಿ.ರಂಗಮ್ಮ ಸೇರಿದಂತೆ ಇತರರು ಇದ್ದರು.
ಮೈತ್ರಿ ಕಾರ್ಯಕರ್ತರ ಬೈಕ್ ರ್ಯಾಲಿ:
ತುಮಕೂರು ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಕೊರಟಗೆರೆ ಪಟ್ಟಣದ ಕಟ್ಟೇಗಣಪತಿಗೆ ಪ್ರಥಮಪೂಜೆ ಸಲ್ಲಿಸಿದ ನಂತರ ಪಂಚಾಜನ್ಯ ಕಚೇರಿಯಿಂದ ಶಾಸಕ ಸುರೇಶ್ಗೌಡ, ಮಾಜಿ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಅನಿಲ್ಕುಮಾರ್ ಮತ್ತು ಮಂಡಲ ಅಧ್ಯಕ್ಷ ದರ್ಶನ್ ಸೇರಿದಂತೆ ಸಾವಿರಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜೊತೆಗೂಡಿ ಬೈಕ್ರ್ಯಾಲಿ ಮೂಲಕ ಸಮಾವೇಶದ ವೇದಿಕೆಗೆ ಆಗಮಿಸಿದರು.
ಭಾರತದಲ್ಲಿ 400ಕ್ಕೂ ಅಧಿಕ ಲೋಕಸಭಾ ಸೀಟ್ ಗೆಲ್ಲುವುದೇ ನಮ್ಮ ನರೇಂದ್ರಮೋದಿ ಗ್ಯಾರಂಟಿ. ಕರ್ನಾಟಕದ 28 ಕ್ಷೇತ್ರದಲ್ಲೂ ಮತ್ತೆ ಕಾಂಗ್ರೆಸ್ ಸೋಲುವುದೇ ಸಿದ್ದರಾಮಯ್ಯ ಗ್ಯಾರಂಟಿ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಿ ಕೆಲಸ ಮಾಡ್ತೀವಿ. ಮೈತ್ರಿಕೂಟದ ವಿ.ಸೋಮಣ್ಣ ಗೆಲುವಿಗೆ ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ ಅತಿಹೆಚ್ಚು ಮತಗಳ ಲೀಡ್ ನೀಡುತ್ತೇವೆ.
–ಅನಿಲ್ಕುಮಾರ್.ಬಿ.ಹೆಚ್. ಬಿಜೆಪಿ ಮುಖಂಡ. ಕೊರಟಗೆರೆ
ನಮ್ಮೆಲ್ಲರ ಅಚ್ಚುಮೆಚ್ಚಿನ ವಿ.ಸೋಮಣ್ಣ ಲೋಕಸಭಾ ಸದಸ್ಯರಾಗಿ ಖಚಿತವಾಗಿ ಆಯ್ಕೆ ಆಗ್ತಾರೇ. ಸದಸ್ಯರಾಗಿ ಆಯ್ಕೆಯಾದ ನಂತರ ನಮ್ಮ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ನೇರಳಾಗಿ ನಿಲ್ಲಬೇಕಿದೆ. ವಿಶ್ವನಾಯಕ ನರೇಂದ್ರಮೋದಿ ಮತ್ತೇ ಪ್ರಧಾನಿ ಆಯ್ಕೆಗೆ ಜನರಿಂದಲೇ ಒಗ್ಗಟ್ಟು ಪ್ರದರ್ಶನ ಆಗಿದೆ. ನಾವು ಕೊರಟಗೆರೆ ಕ್ಷೇತ್ರದಲ್ಲಿ ಒಟ್ಟಾಗಿ ವಿ.ಸೋಮಣ್ಣ ಪರವಾಗಿ ನಿಲ್ಲಬೇಕಿದೆ.
–ಪಿ.ಆರ್.ಸುಧಾಕರಲಾಲ್, ಮಾಜಿ ಶಾಸಕ ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296