ಪಾವಗಡ: ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ ಇ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಕಿರ್ಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಕಚೇರಿಯನ್ನು ಪಾವಗಡ ಶಾಸಕರಾದ ಹೆಚ್.ವಿ .ವೆಂಕಟೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪಾವಡ ಬರದ ನಾಡು ಎಂದು ಕರೆಯಲ್ಪಟ್ಟರೂ ವಿದ್ಯಾಭ್ಯಾಸಕ್ಕೆ ಯಾವುದೇ ಬರ ಇಲ್ಲ, ಏಕೆಂದರೆ ಪಾವಡ ಪಟ್ಟಣದಲ್ಲಿ ಓದಿದಂತಹ ಅನೇಕರು ಇಂದು ಉತ್ತಮ ಹುದ್ದೆಗಳಲ್ಲಿ ಇರುವಂತದ್ದು ನಾವು ಕಾಣುತ್ತಿದ್ದೇವೆ. ಇವತ್ತು ಕೆಎಸ್ ಐಎಸ್ ಹಾಗೂ ಯುನಿವರ್ಸಿಟಿ ಲೆವೆಲ್ ಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಇರುವುದು ನಾವು ಗಮನಿಸಬಹುದು ಎಂದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷ ಚಿನ್ನ ವೆಂಕಟರಮಣಪ್ಪ, ಸಂಘದ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಸ್ಟುಡಿಯೋ ಅಮರ್, ಪ್ರಧಾನ ಕಾರ್ಯದರ್ಶಿಯಾಗಿ ಫಾಸ್ಟಿಂಗ್ ಮೈಕಲ್ ಪ್ರದೀಶ್, ಕಾರ್ಯದರ್ಶಿಯಾಗಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೆ.ಓ.ಮಾರಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನಾಗರತ್ನಮ್ಮ ಎಸ್., ಪದಾಧಿಕಾರಿಗಳಾದ ವೆಂಕಟೇಶಲು, ಮಲ್ಲಿಕಾರ್ಜುನ, ಇಮ್ರಾನ್ ಉಲ್ಲಾ, ಸತ್ಯನಾರಾಯಣ, ನರಸಿಂಹ ಮೂರ್ತಿ, ಚಿನ್ನ ರೆಡ್ಡಿ, ಗಂಗಾಧರ, ನಾಗವೀಣಾ, ಭವ್ಯ, ಮಂಜುನಾಥ್, ಚಿರಂಜೀವಿ , ಮುಖಂಡರು ಪುರಸಭಾ ಮಾಜಿ ಅಧ್ಯಕ್ಷರಾದ ಶಂಕರ್ ರೆಡ್ಡಿ, ಪುರಸಭೆ ಸದಸ್ಯರಾದ ರಾಜೇಶ್ ರವಿ, ಸಮಾಜ ಸೇವಕರಾದ ಬತ್ತಿನೇನಿ ನಾಗೇಂದ್ರ ರಾವ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್, ಪ್ರಹ್ಲಾದ್ ರವರು ಮತ್ತು ಕಾಲೇಜು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA