ಪಾವಗಡ: ಸರ್ಕಾರದ ಯೋಜನೆಗಳ ಅಡಿಯಲ್ಲಿ ಕಡು ಬಡವರಿಗೆ ಮನೆ ನಿರ್ಮಾಣಕ್ಕೆ ಆದೇಶವಿದ್ದರೂ ಸಹ ಉಳ್ಳವರಿಗೆ ಮಾತ್ರ ಮನೆ ನೀಡಲಾಗುತ್ತಿದ್ದು, ಇಲ್ಲದವರಿಗೆ ಕಣ್ಣೀರಿನ ಗತಿಯೇ ಆಗಿದೆ.
ಪಾವಗಡ ತಾಲ್ಲೂಕು ವೈ ಎನ್. ಹೊಸಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಸ್. ಸಿ. ಕಾಲೋನಿಯಲ್ಲಿ ವಾಸವಿರುವ ದೇವಿ ಎನ್ನುವ ಅವಿವಾಹಿತೆ ಮಹಿಳೆ ತಂದೆ ತಾಯಿಯನ್ನು ಕಳೆದುಕೊಂಡು 6 ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಮನೆ ನಿರ್ಮಾಣಕ್ಕೆ ಆರ್ಥಿಕ ಶಕ್ತಿ ಇಲ್ಲದೆ ಮರದ ಕಟ್ಟಿಗೆ ಮೂಲಕ ಬ್ಯಾನರ್ ಗೋಡೆ, ಮೇಲ್ಛಾವಣಿಗೆ ತುಂಡುತುಂಡು ಹೊಡೆದ ಸಿಮೆಂಟ್ ಶೀಟ್ ಬ್ಯಾನರ್ ಹೊದಿಕೆ ಹೊದಿಸಿಕೊಂಡು, ಮಳೆ ಗಾಳಿ ಬಂದಾಗ ಯಾವಾಗ ಮೇಲೆ ಬೀಳುತ್ತೋ ಅನ್ನುವ ಪ್ರಾಣ ಬಯದೊಂದಿಗೆ ಜೀವನಸಾಗಿಸುತ್ತಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್, ಪ್ರಜಾ ಪ್ರತಿನಿಧಿಗಳ ಬಳಿ ಸಮಸ್ಯೆ ಹೇಳಿಕೊಂಡರೂ ಮಹಿಳೆಗೆ ಯಾವುದೇ ನೆರವು ಸಿಗಲಿಲ್ಲ. ಹೀಗಾಗಿ ಪತ್ರಿಕಾ ಮಿತ್ರರಿಗೆ ಅವರು ಮಾಹಿತಿ ನೀಡಿದ್ದು, ಪತ್ರಿಕೆ ಮಿತ್ರರು ಹೆಲ್ಪ್ ಸೊಸೈಟಿ ಸಂಸ್ಥೆ ಗಮನ ತಂದಿದ್ದಾರೆ.
ಈ ವೇಳೆ ತಕ್ಷಣ ಸ್ಪಂದಿಸಿದ ಹೆಲ್ಪ್ ಸೊಸೈಟಿ ಸಂಸ್ಥೆ ಅಧ್ಯಕ್ಷರಾದ ಮಾನಂ ಶಶಿಕಿರಣ್ ಸ್ಥಳಕ್ಕಾಗಮಿಸಿ ಒಂಟಿ ಮಹಿಳೆಯ ನರಕಯಾತನೆ ಕಂಡು, ಈ ಬಡ ಮಹಿಳೆಗೆ ಸೂರು ಕಲ್ಪಿಸುವ ಸಂಪೂರ್ಣ ಜವಾಬ್ದಾರಿ ಹಾಗೂ ಮನೆ ನಿರ್ಮಾಣದ ಸಂಪೂರ್ಣ ಖರ್ಚು ನಮ್ಮ ಸಂಸ್ಥೆ ವಹಿಸಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಡ ಮಹಿಳೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಪದಾರ್ಥ ನೀಡಿ ಮಹಿಳೆಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಡ ಮಹಿಳೆ ನನಗೆ ಸಹಾಯ ಹಸ್ತ ನೀಡಲು ಮುಂದೆ ಬಂದಂತಹ ಹೆಲ್ಪ್ ಸೊಸೈಟಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA