ತುಮಕೂರು: ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಕೆಲಸ ಮಾಡುವ ಶಕ್ತಿ ಸಿಗಬೇಕು ಹಾಗೂ ಸೋಮವಾರದಿಂದ ಕೇಂದ್ರ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು ಯಾವುದೇ ಗೊಂದಲಗಳು ನಿರ್ಮಾಣವಾಗದಿರಲೆಂದು ಆಶಿಸಿ, ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಬಳಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಶಿವಕುಮಾರ ಶ್ರೀಗಳು ಇದ್ದಾಗ ಮೋದಿ ಅವರು ಮಠಕ್ಕೆ ಬರ್ತಿದ್ರು, ಆಶೀರ್ವಾದ ಪಡೆಯುತ್ತಿದ್ರು. ಸ್ವಾಮೀಜಿಗಳು ಬಹಳ ಖುಷಿಪಡ್ತಿದ್ರು. ದೇಶಕ್ಕಾಗಿ ದುಡಿಯುವಂತಹ ಒಬ್ಬ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಅಂತ. ಇವತ್ತು ಅವರು ನಮ್ಮ ಮುಂದೆ ಇಲ್ಲ, ಆದರೆ ಅವರ ಆಶೀರ್ವಾದ ಅವರ ಪ್ರೇರಣೆ ಎಂದರು.
ಅವರ ಶಕ್ತಿ ನಮ್ಮೆಲ್ಲರಿಗೂ ದೇಶದ ಕೆಲಸ ಮಾಡೋದಿಕ್ಕೆ ಪ್ರೇರಣೆ ಕೊಡುತ್ತೆ, ಶಕ್ತಿ ಕೊಡುತ್ತೆ ಎಂಬ ವಿಶ್ವಾಸ ನನಗಿದೆ. ಆ ರೀತಿಯಾಗಿ ನಾನು ಸ್ವಾಮೀಜಿಗಳ ಗದ್ದುಗೆ ಮುಂದೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ನಮ್ಮ ಸರ್ಕಾರದಲ್ಲಿ ಗುಡಿ ಕೈಗಾರಿಕೆ , ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಹೊತ್ತು ಕೊಡಲಾಗ್ತಿದೆ. ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಯೋಚನೆ ನಡಿತಿದೆ ಎಂದು ತಿಳಿಸಿದರು.
ಕೇವಲ ಒಂದು ಇಲಾಖೆ ಅಲ್ಲ, ಎಲ್ಲಾ ಇಲಾಖೆಯಲ್ಲಿ ಯುವಕರಿಗೆ ಉದ್ಯೋಗ ಕೊಡುವ ಪ್ರಯತ್ನ ಆಗ್ತಿದೆ. ಕರ್ನಾಟಕದ ಸರ್ಕಾರ ಇದೊಂದು ಗೋಲ್ಮಾಲ್ ಸರ್ಕಾರ ಆಗಿದೆ ಎಂದರು.
ಯಾವುದೇ ಇಲಾಖೆ, ಯಾವುದೇ ನಿಗಮದಲ್ಲಾಗಲಿ ಬಹಳ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಪ್ರತಿದಿನ ಒದೊಂದು ಇಲಾಖೆಯ ಅವ್ಯವಹಾರಗಳು ಆಚೆ ಬರ್ತಿವೆ. ವಾಲ್ಮೀಕಿ ನಿಗಮ ಕೇಸ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಪ್ರಕರಣ ಆಚೆ ಬಂದಿರಲಿಲ್ಲ ಎಂದರು.
ಇವತ್ತು ಇ.ಡಿ, ಸಿಬಿಐ ತನಿಖೆ ನಡೆಸುತ್ತಿದೆ.ಇದರಲ್ಲಿ ಗೊತ್ತಾಗಿರುವ ಸತ್ಯಾ ಅಂದ್ರೆ,187 ಕೋಟಿ ಹಣ ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ ಆ ಹಣ ಬಳಕೆ ಆಗಬೇಕಿತ್ತು.ಆದರೆ ಹೈದರಾಬಾದ್ ನಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಚುನಾವಣೆಗೆ ಬಳಕೆ ಮಾಡಿದ್ದಾರೆ ಎಂದರು.
ಹೀಗೆ ವೈನ್ ಶಾಪ್, ಜ್ಯೂವೇಲರಿ ಶಾಪ್ ಗಳಿಗೆ ಹಣ ವರ್ಗಾವಣೆ ಆಗಿದೆ.ರಾಜ್ಯದ ಬಡವರ ಹಣವನ್ನ ಚುನಾವಣಾ ಅವ್ಯವಹಾರ ಹಣವನ್ನಾಗಿ ಮಾಡಿದ್ದಾರೆ ಎಂದರು.
ಈಗ ಸಿದ್ದರಾಮಯ್ಯ ಅವರೇ ಮೂಡಾದಲ್ಲಿ ಹಗರಣ ಮಾಡಿದ್ದಾರೆ. ಅಧಿಕಾರವನ್ನ ದುರುಪಯೋಗ ಮಾಡಿಕೊಂಡು. ಇವತ್ತು ಸಿದ್ದರಾಮಯ್ಯನವರು ಅವ್ಯವಹಾರ ಮಾಡಿದ್ದಾರೆ.ಅದಕ್ಕಾಗಿ ನಾವು ಅವರನ್ನ ರಾಜಿನಾಮೆ ಕೇಳುತ್ತಿದ್ದೇವೆ ಎಂದರು.
ಇವತ್ತು ಮೂಡಾದ ಎಲ್ಲಾ ಫೈಲ್ ಗಳು ಬೆಂಗಳೂರಿಗೆ ಶಿಫ್ಟ್ ಆಗಿವೆ. ಈ ಕೇಸ್ ಮುಚ್ಚಿ ಹಾಕ್ತಾರೆ. ದೇಸಾಯಿ ಕಮಿಟಿಯನ್ನ ಅದಕ್ಕಾಗಿಯೇ ಮಾಡಿದ್ದಾರೆ. ಕೆಂಪಣ್ಣ ಕಮಿಟಿ ಮಾಡಿದ್ರು ಅದು ಏನಾಯ್ತು…? ಆ ಕಮಿಟಿಯ ರಿಪೋರ್ಟ್ ಆಚೆನೆ ಬರಲಿಲ್ಲ ಎಂದರು.
ಅದಕ್ಕಾಗಿಯೇ ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡ್ತಿವಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA