ತುಮಕೂರು: ಸಂಭ್ರಮ 2024 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಹಬ್ಬ ಎರಡನೆಯ ದಿನವಾದ ಇಂದು ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಸಾಂಸ್ಕೃತಿಕ ಸಂಚಾಲಕರಾದ ಮನೋಜ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲದೆ ಮನುಷ್ಯನ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಕಲೆ ಸಾಹಿತ್ಯ ಸಂಗೀತ ಇವೆಲ್ಲವೂ ಅತ್ಯವಶ್ಯಕ. ಇವೆಲ್ಲದರಲ್ಲಿ ಮನುಷ್ಯನ ನೋವನ್ನು ಅಡಗಿಸುವ ಮಾಯಾಶಕ್ತಿ ಇದೆ. ಅದನ್ನೆಲ್ಲರೂ ಸಮತ್ವವಾಗಿ ಮೈಗೂಡಿಸಿಕೊಳ್ಳಬೇಕು. ಅದಕ್ಕಾಗಿಯೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಒಂದು ದಿನದ ಕಾರ್ಯಕ್ರಮವನ್ನು ಎರಡು ದಿನಗಳಿಗೆ ವಿಸ್ತರಿಸಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲಾ ಕೇಸರಿ, ಕಲಾಶ್ರೀ ಡಾಕ್ಟರ್ ಲಕ್ಷ್ಮಣ್ ದಾಸ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಓದುವುದರ ಜೊತೆಗೆ ತಂದೆ ತಾಯಿಯರಲ್ಲಿ ಗುರು ಹಿರಿಯರಲ್ಲಿ ಭಕ್ತಿ ಇರಿಸಿಕೊಳ್ಳಬೇಕು. ಆಗಲೇ ಕಲಿತೆ ವಿದ್ಯೆಗೂ ಒಂದು ಭೂಷಣ. ಯಾವ ಮನುಷ್ಯನಿಗೆ ಕಲೆ ಅಭಿರುಚಿ ಇರುತ್ತದೆಯೋ ಆ ಮನುಷ್ಯನು ಎಂದಿಗೂ ದುಃಖಿಯಾಗಿರಲಾರ ಎಂದು ಅಭಿಪ್ರಾಯಪಟ್ಟರು.
ಪ್ರೊಫೆಸರ್ ಕೆ.ಎಸ್.ಜಗದೀಶ್ ಮಾತನಾಡಿ, ತಾವು ಈ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ದಿನಗಳನ್ನು ನೆನೆದರು. ಕಲೆ ಮನುಷ್ಯನನ್ನು ಸ್ವಚ್ಛಂದ ಮನುಷ್ಯನನ್ನಾಗಿ ಮನುಷ್ಯನನ್ನು ವಿಶ್ವಮಾನವನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಸಿಂಹಮೂರ್ತಿ ಮಾತನಾಡಿ, ಸಂತ ಶಿಶುನಾಳ ಶರೀಫರ ಜ್ಞಾನವನ್ನು ಪರಿಚಯಿಸಿ ಶರೀಫರ ಹಾಡನ್ನು ಭಕ್ತಿ ಪೂರ್ವಕವಾಗಿ ಹಾಡಿದರು.
ಇನ್ನೋರ್ವ ಅತಿಥಿ ಫೈನ್ ಹಾರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲ್ ರಾಗಿರುವ ಪ್ರೊಫೆಸರ್ ಬರ್ಕೋರ್ ರವರು ಕಲೆಯು ಮಹತ್ವವನ್ನು ತಿಳಿಸಿದರು.
ಆಗಮಿಸಿದ್ದ ಎಲ್ಲಾ ಅತಿಥಿಗಳನ್ನು ಪ್ರೊಫೆಸರ್ ಗಂಗಾಧರ್ ಅವರು ಸ್ವಾಗತಿಸಿದರು ಡಾ.ಅಶ್ವಾಕ್ ಅಹಮದ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊಫೆಸರ್ ಯೋಗೀಶ್ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಶಿವಣ್ಣ ತಿಮ್ಮಲಾಪುರ, ಡಾ.ದೊಡ್ಡದುರ್ಗಪ್ಪ ಭಾಗಿಯಾಗಿದ್ದರು. ಗ್ರಂಥ ಪಾಲಕರಾದ ಡಾ.ರಾಘವೇಂದ್ರ ಅವರು ವಂದನಾರ್ಪಣೆ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA