nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025
    Facebook Twitter Instagram
    ಟ್ರೆಂಡಿಂಗ್
    • ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು
    • ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ
    • ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ
    • ವಿವಿಧ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ
    • ಡಿಸೆಂಬರ್ 8ರಿಂದ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಹಾರ ಅದಾಲತ್
    • ಶಿಕ್ಷಕರ ಅರ್ಹತಾ ಪರೀಕ್ಷೆ: ಅಡೆತಡೆಗಳಿಲ್ಲದೇ ವ್ಯವಸ್ಥಿತವಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಸೂಚನೆ
    • ದತ್ತ ಜಯಂತಿ ಬ್ಯಾನರ್ ತೆರವು ವಿಚಾರ: ಕಾಂಗ್ರೆಸ್ ಗ್ರಾ.ಪಂ. ಸದಸ್ಯನ ಬರ್ಬರ ಹತ್ಯೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಾಯೋಗಿಕ ನಾಟಕ ನಿರ್ದೇಶಕನಿಗೆ ಸವಾಲಿನ ಕೆಲಸ: ಕಲಾಶ್ರೀ ಡಾ.ಲಕ್ಷ್ಮಣದಾಸ್
    ತುಮಕೂರು August 12, 2024

    ಪ್ರಾಯೋಗಿಕ ನಾಟಕ ನಿರ್ದೇಶಕನಿಗೆ ಸವಾಲಿನ ಕೆಲಸ: ಕಲಾಶ್ರೀ ಡಾ.ಲಕ್ಷ್ಮಣದಾಸ್

    By adminAugust 12, 2024No Comments2 Mins Read
    lakshman das

    ತುಮಕೂರು: ಪ್ರಾಯೋಗಿಕ ನಾಟಕಗಳನ್ನು ಪೇಕ್ಷಕರ ಮಂದೆ ಕಟ್ಟಿಕೊಡುವುದು ನಿರ್ದೇಶಕನಿಗೆ ಸವಾಲಿನ ಕೆಲಸ. ಸಾಮಾಜಿಕ, ಅದರಲ್ಲಿಯೂ ಪ್ರಾಯೋಗಿಕ ನಾಟಕಗಳಲ್ಲಿ ಸಂಭಾಷಣೆ, ಅಭಿನಯ, ಕಲಾವಿದರ ಭಾವಾಭಿನಯ ಎಲ್ಲವೂ ಒಟ್ಟಿಗೆ ಕೂಡಿದರೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಡಲು ಸಾಧ್ಯ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ

    ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಪ್ರೊ.ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಕುಣಿ ಕುಣಿ ನವಿಲೆ ನಾಟಕವನ್ನು ಸಮ್ಮತ ಥಿಯೇಟರ್ ನ ಯಶವಂತ ಡಿ.ನಿರ್ದೇಶಿಸಿದ್ದು, ರಂಗ ನಿರ್ವಹಣೆ ಸುನಿಲ್ ಚೇತನ್ ಅವರದ್ದು, ನವೀನ್ ಭೂಮಿ ನಿನಾಸಂ ಅವರ ಬೆಳಕಿನ ವಿನ್ಯಾಸ ಮಾಡಿದ್ದು, ಪ್ರಸಾದನ ಹಂಸ ಪ್ರಿಯ, ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಪೌರಾಣಿಕ ನಾಟಕಗಳಲ್ಲಿ ಪದ್ಯ, ಕಂದ ಪದ್ಯಗಳ ಮೂಲಕ ಹೇಗೋ ನಾಟಕವನ್ನು ತೂಗಿಸಬಹುದು. ಆದರೆ ಸಾಮಾಜಿಕ ನಾಟಕಗಳಲ್ಲಿ ಕಥಾವಸ್ತುವೇ ಪ್ರಧಾನವಾಗಿರುವ ಕಾರಣ. ಕಲಾವಿದರು ಭಾವ ತುಂಬಿ ಅಭಿನಯಿಸಿದಾಗ ಮಾತ್ರ ಪ್ರೇಕ್ಷಕರಿಂದ ಚಪ್ಪಾಳೆ ಗೌರವ ಸಿಗಲು ಸಾಧ್ಯ ಎಂದರು.


    Provided by
    Provided by

    ಶಿವಕುಮಾರ್ ತಿಮ್ಮಲಾಪುರ ಅವರ ನೇತೃತ್ವದ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಪ್ರಾಯೋಗಿಕ ನಾಟಕಗಳಿಗೆ ಹೆಸರಾದ ಸಂಸ್ಥೆ,ಹೊಸ ಹೊಸ ನಾಟಕಗಳನ್ನು ಈ ಭಾಗದ ಪ್ರೇಕ್ಷಕವರ್ಗಕ್ಕೆ ಪರಿಚಯಿಸಿದವರು. ಹಾಗೆಯೇ ಹೊಸ ಕಲಾವಿದರನ್ನು ರಂಗಭೂಮಿಗೆ ನೀಡಿದ ಕೊಡುಗೆ ಇವರಿಗೆ ಸಲ್ಲುತ್ತದೆ. ಇವರಿಗೆ ಸಾಥ ನೀಡುತ್ತಿರುವ ಕಾಂತರಾಜು ಕೌತುಮಾರನಹಳ್ಳಿ ಓರ್ವ ಉದ್ಯೋನ್ಮುಖ ನಿರ್ದೇಶಕ. ಇಂದಿನ ನಾಟಕದ ಸೀನರಿಗಳು ಗಮನಿಸಿದರೆ, ಇವರ ಕ್ರಿಯಾಶೀಲತೆ ನಮ್ಮ ಕಣ್ಣುಮುಂದೆ ಬರುತ್ತದೆ. ಇವರ ಈ ಕಲಾಸೇವೆ ಮತ್ತಷ್ಟು ಪಸರಿಸಲಿ ಎಂದು ಡಾ.ಲಕ್ಷ್ಮಣದಾಸ್ ಶುಭ ಹಾರೈಸಿದರು.

    ಮಾರುತಿ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಮುರುಳೀಧರ್ ಮಾತನಾಡಿ, ಕಳೆದ ಮರ‍್ನಾಲ್ಕು ವರ್ಷಗಳಿಂದ ಸಂಸ್ಥೆಯ ಸಂಪರ್ಕದಲ್ಲಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಗೆಳೆಯರು, ನಮ್ಮ ಶಾಲೆಯ ಮಕ್ಕಳಿಗೆ ನಾಟಕ ಮತ್ತಿತರರ ಲಲಿತ ಕಲೆಗಳ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಭಾಷಾ ಪ್ರಜ್ಞೆ, ವ್ಯಾಕರಣ ಬದ್ದ ಉಚ್ಚಾರಣೆ, ವಿಷಯ ಗ್ರಹಿಸುವ ವಿಧಾನ ಉದ್ದಿಪನಗೊಳ್ಳಲು ಹಾಗೂ ಸ್ಟೇಜ್ ಫೀಯರ್ ಹೋಗಲಾಡಿಸಲು ಸಹಕಾರಿಯಾಗಿದ್ದಾರೆ.ಇವರ ಪ್ರಯತ್ನ ನಿರೀಕ್ಷಿತ ಯಶಸ್ಸು ದೊರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

    ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಾವ್ಯೇಸು ನಾಟಕಂ ರಮ್ಯಂ ಎಂಬ ಮಾತಿದೆ. ಲಲಿತ ಕಲೆಗಳಲ್ಲಿಯೇ ನಾಟಕಕ್ಕೆ ಮಹತ್ವದ ಸ್ಥಾನವಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಮಕ್ಕಳಿಗೆ ತರಬೇತಿ ನೀಡಿ, ಅವರಿಂದ ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ನಾಟಕಗಳನ್ನು ಯಾರು ಉಳಿಸಬೇಕೋ, ಅವರನ್ನು ಗುರುತಿಸಿ, ರಂಗಕ್ಕೆ ಕರೆತಂದಿದ್ದಾರೆ. ಕುಣಿ ಕುಣಿ ನವಿಲೆ ನಾಟಕದ ಪಾತ್ರದಾರಿಗಳು ಈ ಕ್ಷಣವನ್ನು ಅವರ ಜೀವಿತದ ಕೊನೆಯವರೆಗೂ ಇರುತ್ತದೆ. ಕಾಂಕ್ರಿಟ್ ಕಾಡುಗಳಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ದೊಡ್ಡ ಸವಾಲನ್ನು ಮನುಷ್ಯ ಹಾಕಿದ್ದಾನೆ. ಇದನ್ನು ಮಕ್ಕಳ ಮೂಲಕ ಹೇಳಲು ಹೊರಟಿದ್ದಾರೆ. ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಮೂಲಕ ಇಡೀ ಪ್ರಕೃತಿಗೆ ಸವಾಲಾಗಿದ್ದೇವೆ.ಸಹಜವಾದ ಮನುಷ್ಯತ್ವ, ಮಾನವೀಯತೆ ಬೆಳೆಯಬೇಕಾದರೆ ನಾವು ನಾಟಕಗಳನ್ನು ಹೆಚ್ಚು ಹೆಚ್ಚಾಗಿ ನೋಡುವುದು, ಪಾತ್ರಧಾರಿಗಳಾಗಿ ಅಭಿನಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

    ಮಾರುತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಎನ್.ಶರ್ಮ ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಕಳೆದ ೮ ತಿಂಗಳಿನಿಂದ ನಮ್ಮ ಮಕ್ಕಳಿಗೆ ರಂಗ ತರಬೇತಿ ನೀಡಿ, ಕುಣಿ ಕುಣಿ ನವಿಲೆ ನಾಟಕ ಪ್ರದರ್ಶನಕ್ಕೆ ಅವರನ್ನು ಸಜ್ಜುಗೊಳಿಸಿದ್ದಾರೆ.ಇದಕ್ಕೆ ಮಕ್ಕಳ ಪೋಷಕರ ಸಹಕಾರವೂ ಇದೆ.ನಮ್ಮ ಮಕ್ಕಳನ್ನು ನಿಮ್ಮನ್ನು ರಂಜಿಸಲಿದ್ದಾರೆ ಎಂಬ ನಂಬಿಕೆ ನಮ್ಮದು ಎಂದರು.

    ಮಾರುತಿ ವಿದ್ಯಾಕೇಂದ್ರದ ಮಕ್ಕಳಿಗೆ ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿರುವ ಕುಣಿ ಕುಣಿ ನವಿಲೆ ನಾಟಕ ಪ್ರದರ್ಶನಗೊಂಡಿತು. ಈ ವೇಳೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಂಗಸೊಗಡು ಕಲಾಟ್ರಸ್ಟ್ ನ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025

    ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ

    December 6, 2025

    ವಿವಿಧ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

    December 6, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025

    ಸರಗೂರು: ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕರು,…

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025

    ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ

    December 6, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.