ಪಾವಗಡ : ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಸಂಘಟನೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಾಗರಾಜು ಎಸ್ ಮಂಗಳವಾಡ ಇವರನ್ನು ಆಯ್ಕೆ ಮಾಡಲಾಗಿದೆ.
ಸವಿತಾ ಸಮಾಜದ ಸಂಘಟನೆಗೆ ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, ರಾಷ್ಟ್ರೀಯ ಕರ್ಪೂರಿ ಠಾಕೂರ್ ಒಬಿಸಿ ಸಂಘಟನೆ ಅಧ್ಯಕ್ಷರು ರಘುವೀರ್ ಸಿಂಗ್, ಉಪಾಧ್ಯಕ್ಷ ಆನಂದ ವಾರಿಕ ಕಲ್ಬುರ್ಗಿ ಅಭಿನಂದಿಸಿದ್ದಾರೆ.
ಜಿಲ್ಲಾ ಸವಿತಾ ಸಮಾಜ ಮಂಜೇಶ್ ಗಾಂಧಿ, ಕ.ರಾ.ಸ.ಕ್ಷೌ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಮತ್ತು ಕೆ.ಬಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಲಕ್ಷ್ಮಿ ಮತ್ತು ಕೋಮಲ, ಸಂಘಟನೆ ಮಂಡ್ಯ ಅಧ್ಯಕ್ಷ ಲೋಕೇಶ್ ಸೇರಿದಂತೆ ಪಾವಗಡ ತಾಲ್ಲೂಕಿನ ಸವಿತಾ ಸಮಾಜದ ಬಂಧುಗಳು, ಗಣ್ಯರು ಶುಭಾ ಹಾರೈಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q