ಪಾವಗಡ: ಆಕಸ್ಮಿಕವಾಗಿ 11 ಕೆವಿ ಲೈನ್ ತಗುಲಿ ಒಂದು ವರ್ಷದ ಮಗುವಿನ ತಾಯಿಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ 8 ಗಂಟೆ ಸುಮಾರಿಗೆ ಪಾವಗಡ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ.
23 ವರ್ಷದ ತ್ರಿವೇಣಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಹೆಣ್ಣು ಮಗಳು. ಈಕೆಯನ್ನು ಕೊತ್ತೂರು ಗೊಲ್ಲರಹಟ್ಟಿಯಿಂದ ದವಡಬೆಟ್ಟದ ಕೃಷ್ಣಮೂರ್ತಿಯವರಿಗೆ ಮದುವೆ ಮಾಡಿ ಕೊಟ್ಟಿದ್ದರು.
ಇದೀಗ ಒಂದು ವರ್ಷದ ಹೆಣ್ಣು ಮಗು ಕೂಡ ಇದೆ. ನೂತನ ಗೃಹ ನಿರ್ಮಾಣ ಮಾಡಿದ್ದ ಮನೆ ಮಹಡಿ ಮೇಲೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಬ್ಬಿಣದ ವಸ್ತುವನ್ನು ಎತ್ತಿಡುವ ವೇಳೆ 11 ಕೆವಿ ಲೈನ್ ಗೆ ತಗುಲಿ ಈ ಘಟನೆ ಸಂಭವಿಸಿದೆ.
ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯ ತನದಿಂದ ಈ ಘಟನೆ ಸಂಭವಿಸಿದೆ ಎಂಬುದು ಸ್ಥಳೀಯರ ಆರೋಪ. ಹೌದು ಪರ್ಮಿಷನ್ ಕೊಟ್ಟಿಲ್ಲ ಸರಿ. ಕೊನೆ ಪಕ್ಷ ನಂತರವಾದರೂ ಅಹವಾಲು ಸ್ವೀಕರಿಸಿ 11 ಕೆವಿ ಲೈನ್ ಯಾಕೆ ಬದಲಾಯಿಸುವ ಉಸಾಬರಿಗೆ ಹೋಗಿಲ್ಲ. ಆ ಕೆಲಸ ಆಗಿದ್ದರೆ ಇವತ್ತು ಹೆಣ್ಣು ಮಗಳ ಪ್ರಾಣ ಹೋಗ್ತಿರಲಿಲ್ಲವೇನೋ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಈ ಕುರಿತು ಮಂಗಳವಾಡ ವಲಯ ವಿದ್ಯುತ್ ಇಲಾಖಾಧಿಕಾರಿ ಜೆಇ ಚೌಡಪ್ಪ ಅವರನ್ನು ಕೇಳಿದ್ರೆ, ಆ ಮುಖ್ಯ ಲೈನ್ ಚೇಂಜ್ ಮಾಡಿಸಲು ಮೂರು ವರ್ಷದ ಹಿಂದೆಯೇ ಎಸ್ಟಿಮೇಟ್ ಕಳುಹಿಸಿದ್ದೀವಿ. ಬಜೆಟ್ ಬಂದಿಲ್ಲ ಎಂದು ಪ್ರತಿಕ್ರಿಯೆ ಕೊಡ್ತಾರೆ.
ಇನ್ನು ಸಿ.ಕೆ.ಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೃಷ್ಣ ಕುಟೀರ ಯೋಜನೆಯಡಿ ಮನೆಗೆ ಫರ್ಮಿಷನ್ ಕೊಡುವ ಮುನ್ನಾ ಅವರ ಕಣ್ಣಿಗೆ ಈ 11 ಕೆ.ವಿ ವಿದ್ಯುತ್ ಲೈನ್ ಹಾದು ಹೋಗಿರುವುದು ಕಣ್ಣಿಗೆ ಕಂಡಿಲ್ವಾ ಅಥವಾ ಕಣ್ಮುಚ್ಚಿಕೊಂಡು ಬಿಲ್ ಮಾಡಿದ್ರ ಆಗಲಾದರೂ ಅವರಿಗೆ ಸಲಹೆ ಕೊಡಬಹುದಿತ್ತಲ್ವಾ…ಯಾಕೀ ಈ ನಿರ್ಲಕ್ಷ್ಯ ಧೋರಣೆ ಎಂದು ಪ್ರಶ್ನಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296