ತುಮಕೂರು: ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು, ಬ್ಯಾನ್ ಮಾಡಿದವರು ಸ್ವತಂತ್ರ ವಾಗಿ ಓಡಾಡಿಕೊಂಡಿದ್ದಾರೆ. ಅಂತವರ ವಿರುದ್ದ ಕಠಿಣವಾಗ ಶಿಕ್ಷೆಯಾಗಬೇಕು. ಬರಿ ಎಫ್ ಐ ಆರ್ ಆದ್ರೆ ಸಾಕಾಗಲ್ಲ. ಗಣೇಶನ್ನ ಬಿಡೋಕೆ ಅಡ್ಡಿ ಪಡಿಸುತ್ತಿರಾ ಅಂದ್ರೆ ಏನು ಹೇಳ್ಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ಇದೇ ತರಹ ಘಟನೆ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ, ಇದರ ಉದ್ದೇಶ ಏನೆಂದರೆ ಪ್ರತಿಕಾರವಾಗಿದೆ. ಯಾಕೆ ಬಿಜೆಪಿ ಸರ್ಕಾರ ಇದ್ದಾಗ ಉಸಿರೆತ್ತಲ್ಲ. ಕಾಂಗ್ರೆಸ್ ಬಂದಾಗ ಯಾಕೆ ಆಗುತ್ತೆ ಎಂದು ಪ್ರಶ್ನಿಸಿದರು.
ಗೃಹ ಸಚಿವ ಪರಮೇಶ್ವರ್ ಒಬ್ಬ ದಕ್ಷ ಅನುಭವಿ ರಾಜಕಾರಣಿ. ಮುಂದಿನ ಭಾರತದ ಭವಿಷ್ಯದಲ್ಲಿ ಕರ್ನಾಟಕ ಮೆಲ್ಫಂಕ್ತಿಯಲ್ಲಿ ಇರಬೇಕು ಅಂತ ಯೋಚನೆ ಮಾಡಿದ್ರೆ, ಅವರು ನಿಯಂತ್ರಣ ಮಾಡ್ತಾರೆ. ಜನ ಯಾವ ರೀತಿ ನಡೆದುಕೊಳ್ತಾರೆ ಅನ್ನೋದು ನಿಮಗೂ ಗೊತ್ತಿದೆ, ಇದು ಖಂಡನೀಯ ಅದಕ್ಕೆ ಅವಕಾಶ ಕೊಡೊದು ಬೇಡ. ಎಷ್ಟೇ ದೊಡ್ಡ ವ್ಯಕ್ತಿಯಾದರು, ದೇಶದ ಭದ್ರತೆ ವಿಚಾರದಲ್ಲಿ ಸರಿಯಾಗಿ ನಡೆದುಕೊಳ್ತಿಲ್ಲ ಅಂದ್ರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಹಾಲಿನ ದರ ಹೆಚ್ಚಳ ಮಾಡಿ ನೂರಕ್ಕೆ ನೂರು ಪರ್ಸೆಂಟ್ ರೈತರಿಗೆ ಕೊಡೋದಾದ್ರೆ ನಮ್ಮದೇನು ಅಭ್ಯಂತರ ಇಲ್ಲ. ರೈತರ ಹೆಸರಲ್ಲಿ ಇನ್ನೆನೋ ಮಾಡಿಕೊಂಡು ಅದನ್ನು ಭಾಗ್ಯಗಳಿಗೆ ಉಪಯೋಗಿಸಿ ಕೊಳ್ಳೊದಾದ್ರೆ ಅವರೆ ಚಿಂತನೆ ಮಾಡ್ಬೇಕು. ಸಿದ್ದರಾಮಯ್ಯ ಸಾಹೇಬ್ರಿಗೆ, ಸುಳ್ಳು ಹೇಳೊಕ್ಕೆ ಅವತ ಕೈಲಿ ಆಗ್ತಿಲ್ಲ. ಏನೋ ಒಂದು ಹೇಳ್ತಾರೆ ಅದನ್ನು ಸರಿ ಮಾಡಿಕೊಳ್ಳೋದ್ರಲ್ಲಿ ಇನ್ನೊಂದು ಶುರುವಾಗ್ತಿದೆ. ಸಿದ್ದರಾಮಯ್ಯನವರ ಅನುಭವ ಆ ಐದು ವರ್ಷದಲ್ಲಿ ಯಾವ ರೀತಿ ಬಳಕೆ ಆಯ್ತೊ, ಮುಂದೇ ಅದೇ ತರಹ ಆಗ್ಬೇಕು ಎಂದರು.
ಎಲ್ಲವೂ ನೂರಕ್ಕೆ ನೂರು ಸತ್ಯ ಅಂತ ಹೇಳೋಕಾಗಲ್ಲ. ಒಂದೂವರೆ ವರ್ಷದಲ್ಲಿ ಸರ್ಕಾರ ಎಲ್ಲಿದೇ ಅಂತ ಹುಡುಕಾಟ ಆಗಿದೆ. ತಾವು ಎಷ್ಟು ದಿನ ಎಲ್ಲಿ ತನಕ ಇರ್ತಿವಿ ಅನ್ನೋದು ದೊಡ್ಡದಲ್ಲ. ನಿಮ್ಮ ಜನಪರ ಕಾರ್ಯಕ್ರಮಗಳಿಗೆ ದಕ್ಕಯಾಗ್ತಿದೆ. ಸಾಮಾನ್ಯ ಜನರಲ್ಲಿ ಗೊಂದಲ ಉಂಟಾಗಿದೆ. ಸವಲತ್ತುಗಳು ಏನು ತಲುಪುತ್ತದ್ದವೋ ಅದಕ್ಕೆ ಅನಾನುಕೂಲ ಆಗಿದೆ, ವಾಸ್ತವಾಂಶಕ್ಕೆ ಆದ್ಯತೆ ಕೊಡಿ, ಅದರ ಪ್ರಕಾರ ಸರ್ಕಾರ ನಡೆಸಿ ಎಂದರು.
ಸ್ವಚ್ಚತಾ ಆಂದೊಲನದಲ್ಲಿ 60% ನಾವು ಕೊಡ್ತಿವಿ, 40% ನೀವು ಕೊಡ್ತಿರಾ. ಕೇಂದ್ರ ಸರ್ಕಾರ ಒಂದೇ ಒಂದು ಅನುದಾನ ನಿಲ್ಲಿಸಿಲ್ಲ. ಎಲ್ಲೊ ಒಂದು ಎರಡು ಕಡೆ ತೊಂದರೆಯಾಗಿದೆ. ಅವತ್ತಿನ ಸಿದ್ದರಾಮಯ್ಯನೇ ಬೇರೆ ಇವತ್ತಿನ ಸಿದ್ದರಾಮಯ್ಯ ನೇ ಬೇರೆ. ನಾನು ಕೇಂದ್ರದ ಮಂತ್ರಿಯಾಗಿ ಆತ್ಮೀಯನಾಗಿ ವಿನಂತಿ ಮಾಡ್ತಿನಿ. ದಯವಿಟ್ಟು ವಾಸ್ತವಾಂಶಗಳನ್ನು ಹೇಳಿ, ನಿಜಾಂಶಗಳನ್ನು ತಿಳಿಸಿ ಎಂದರು.
ನಿಮ್ಮಂಥವರು ಸುಳ್ಳು ಹೇಳಿ ಬಿಟ್ರೆ, ಯಾರಿಗೆ ಹೋಗಿ ಹೇಳೋದು, ಇದಕ್ಕೆ ಕೊನೆ, ಅಂತ್ಯ ಎಲ್ಲಿ, ಇದನ್ನು ಅವರು ಅರ್ಥಮಾಡಿಕೊಂಡರೆ ಸಾಕು, ಬೇರೆ ಭಾಷೆಯಲ್ಲಿ ಮಾತಾಡಲು ನಾನು ಇಷ್ಟ ಪಡಲ್ಲ, ತಯಾರಿಲ್ಲ. ಈಗ ಹಳೆಯ ಸಿದ್ದರಾಮಯ್ಯ ಇಲ್ಲ, ಹೊಸ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q