ತಿಪಟೂರು: ಎಪಿಎಂಸಿಯಲ್ಲಿ ಅಕ್ಟೋಬರ್ 01ರಿಂದ ಕೊಬ್ಬರಿ ಮಾರಾಟಕ್ಕೆ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ತಿಪಟೂರು ಶಾಸಕ ಕೆ.ಷಡಕ್ಷರಿ ತಿಳಿಸಿದರು
ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಏಷ್ಯಾಖಂಡದಲ್ಲಿಯೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ರೈತರಿಗೆ ಅನುಕೂವಾಗುವ ದೃಷ್ಠಿಯಿಂದ ನವೆಂಬರ್ 1ರಿಂದ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು
ನಗರದ ಎಪಿಎಂಸಿ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರು ಎಪಿಎಂಸಿ ಏಷ್ಯಾಖಂಡದಲ್ಲಿ ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯಾಗಿದು ತಿಪಟೂರು ಕೊಬ್ಬರಿ ವಿಶಿಷ್ಠಗುಣಗಳನ್ನು ಒಳಗೊಂಡಿದ್ದು ನಮ್ಮ ರೈತರಿಗೆ ಅನುಕೂಲವಾಗಬೇಕು ಎನ್ನುವ ದೃಷ್ಠಿಯಿಂದ ನವಂಬರ್ 01ರಿಂದ ಹೊಸ ನಿಯಮಗಳನ್ನ ಜಾರಿಗೊಳಿಸಲಾಗುತ್ತಿದೆ, ನವೆಂಬರ್ 01ರಿಂದ ಆನ್ ಲೈನ್ ನಿಯಮಬದಲಾವಣೆಗೆ ರೈತರು ಹಾಗೂ ವರ್ತಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡಿದ್ದು ಹೊಸ ನಿಯಮಗಳು ಜಾರಿಯಾಗಲಿವೆ ಎಂದು ತಿಳಿಸಿದರು.
ಬುಧವಾರ ಹಾಗೂ ಶನಿವಾರದ ಬದಲಾಗಿ ಸೋಮವಾರ ಮತ್ತು ಗುರುವಾರ ಎರಡು ದಿನಗಳು ಆನ್ ಲೈನ್ ಟೆಂಡರ್ ನಡೆಯಲಿದ್ದು , ಮಧ್ಯಾಹ್ನ 2ಗಂಟೆ ಬದಲಾಗಿ 3ಗಂಟೆಗೆ ಟೆಂಡರ್ ನಡೆಯುತ್ತದೆ. ರೈತರು ಎಪಿಎಂಸಿಗೆ ಕೊಬ್ಬರಿ ತರುವಾಗ ಗೇಟ್ ಎಂಟ್ರಿ ಕಡ್ಡಾಯವಾಗಿದ್ದು, ರೈತರು ತರುವ ಕೊಬ್ಬರಿಯನ್ನ ಲಾಟ್ ಗೆ ಇಟ್ಟು ಬಿಡ್ ಆದ ಕೊಬ್ಬರಿಯಲ್ಲಿ ಗರಿಷ್ಟ ಮೌಲ್ಯಕ್ಕೆ ಟೆಂಡರ್ ಆದ ದರವನ್ನ ರೈತರಿಗೆ ನೀಡಬೇಕು . ರೈತರು 3 ಟೆಂಡರ್ ವರೆಗೆ ಮಾತ್ರ ದಳ್ಳಾಳರ ಅಂಗಡಿಯಲ್ಲಿ ಟೆಂಡರ್ ನಲ್ಲಿ ಭಾಗವಹಿಸಬೇಕು ನಂತರ ತಮ್ಮ ಕೊಬ್ಬರಿ ಟೆಂಡರ್ ಆಗದಿದ್ದರೆ ವಾಪಾಸ್ ಪಡೆಯ ಬೇಕು ಎನ್ನುವ ನಿಯಮ ಜಾರಿಯಾಗಲಿದ್ದು, ಈ ನಿಯಮದಿಂದ ರೈತರಿಗೆ ಅನುಕೂಲವಾಗಲಿದೆ , ಎಪಿಎಂಸಿಯೂ ಸಹ ಉಳಿಯಲಿದೆ ಎಂದರು.
ಅಲ್ಲದೇ ತಾಲ್ಲೂಕಿನ ಅಭಿವೃದ್ದಿಗಾಗಿ ಹಲವಾರು ಯೋಜನೆ ಜಾರಿಗೊಳುತ್ತಿದ್ದು, ತಿಪಟೂರು ಹಾಸನ ಹೈವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ತಿಪಟೂರಿನಲ್ಲಿ ಜನ್ ಶತಾಬ್ದಿ ಎಕ್ಸ್ ಪ್ರೆಸ್ ನಿಲುಗಡೆಗೆ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದು, ಮನವಿಗೆ ಸಕರಾತ್ಮಕವಾಗಿ ಸ್ವಂದಿಸಿದ್ದಾರೆ ನಿಲುಗಡೆಗೆ ಅನುಮತಿ ನೀಡಿದ್ದಾರೆ. ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಕಾರ್ಯದರ್ಶಿ ಹನುಮಂತರಾಜು ಉಪಸ್ಥಿತರಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q