ಕೊರಟಗೆರೆ: ಕೋಟ್ಯಾಂತರ ರೂ ನರೇಗಾ ಯೋಜನೆಯ ಅನುದಾನ ಬಳಕೆಯಾದ್ರು ನಾಗರಕೆರೆ ಅಭಿವೃದ್ದಿ ಕಂಡಿಲ್ಲ. ಕೆರೆಯಲ್ಲಿ ಮಣ್ಣಿನ ಗುಂಡಿ ತೆಗೆದು ನರೇಗಾ ಅನುದಾನವನ್ನು ಹೊಳವನಹಳ್ಳಿ ಗ್ರಾಮ ಪಂಚಾಯಿತಿ ಪೋಲು ಮಾಡಿದೆ.
ನಾಗರಕೆರೆಯಲ್ಲಿ ಮೀನು ಸಾಕಾಣಿಕೆಗೆ ಹರಾಜು ಮಾಡಿರುವ 2 ಲಕ್ಷ 40ಸಾವಿರ ಹಣವು ಸಹ ಮಾಯವಾಗಿದೆ. ನಾಗರಕೆರೆಯ ಸಮಗ್ರ ಅಭಿವೃದ್ದಿಗೆ ಹರಾಜು ಹಣ ಬಳಸದೇ ಹೊಳವನಹಳ್ಳಿ ಗ್ರಾಮ ಪಂಚಾಯಿತಿಯಿಂದ ದುರುಪಯೋಗಪಡಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗ ಸಾರ್ವಜನಿಕ ಸಭೆ ಮತ್ತು ಪೋಟೊಗಳಿಗೆ ಸಿಮೀತವಾಗಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ನಾಗರಕೆರೆಗೆ ಅಭಿವೃದ್ದಿಯೇ ಮರೀಚಿಕೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಮೆಜಾಲಿ ಮತ್ತು ಬೇಲಿಗಿಡಗಳ ಹಾವಳಿಯಿಂದ ನಾಗರಕೆರೆಯ ಏರ ಕಣ್ಮರೆಯಾಗಿದೆ. ನಾಗರಕೆರೆಯ ಕೋಡಿ ಮತ್ತು ತೋಬು ಶಿಥಿಲವಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ.
ನಾಗರಕೆರೆ ತುಂಬಿ ಕೋಡಿಬಿದ್ದ 30 ದಿನಗಳ ಕಾಲವು ಕೆರೆಯಲ್ಲಿ ನೀರು ನಿಲ್ಲದೇ ವ್ಯರ್ಥವಾಗಿ ಪೋಲಾಗುತ್ತಿದೆ. ಹೊಳವನಹಳ್ಳಿ ಗ್ರಾಮ ಪಂಚಾಯಿತಿಯ ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಜಿಲ್ಲಾ ಪಂಚಾಯತ್ ಸಿಇಓಗೆ ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q