nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಿಎಸ್ ಟಿ ದರ ಪರಿಷ್ಕರಣೆ: ಕೇಂದ್ರ ಸರ್ಕಾರ ತೆರಿಗೆ ಭಾರ ಇಳಿಸಿದೆ: ಸಚಿವ ವಿ.ಸೋಮಣ್ಣ

    September 19, 2025

    ತುಮಕೂರು: ಕಲುಶಿತ ನೀರು ಸೇವನೆ: 12 ವಿದ್ಯಾರ್ಥಿನಿಯರು ಅಸ್ವಸ್ಥ

    September 19, 2025

    ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕಿದ ತಲೆಬುರುಡೆ ಕೇಸ್ ಗೆ ಟ್ವಿಸ್ಟ್

    September 19, 2025
    Facebook Twitter Instagram
    ಟ್ರೆಂಡಿಂಗ್
    • ಜಿಎಸ್ ಟಿ ದರ ಪರಿಷ್ಕರಣೆ: ಕೇಂದ್ರ ಸರ್ಕಾರ ತೆರಿಗೆ ಭಾರ ಇಳಿಸಿದೆ: ಸಚಿವ ವಿ.ಸೋಮಣ್ಣ
    • ತುಮಕೂರು: ಕಲುಶಿತ ನೀರು ಸೇವನೆ: 12 ವಿದ್ಯಾರ್ಥಿನಿಯರು ಅಸ್ವಸ್ಥ
    • ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕಿದ ತಲೆಬುರುಡೆ ಕೇಸ್ ಗೆ ಟ್ವಿಸ್ಟ್
    • ಮನೆ ಬಾಗಿಲಿನಲ್ಲಿ ಸಿದ್ದರಾಮಯ್ಯ ಚಿತ್ರ ಕೆತ್ತಿಸಿದ ಮಹಿಳೆ
    • ಭೂಕಂಪನದ ಅನುಭವ: ಬೆಚ್ಚಿಬಿದ್ದ ವಿಜಯಪುರ ಜಿಲ್ಲೆ ಜನ
    • ರಾಹುಲ್‌ ಗಾಂಧಿ ಅವರಿಗೆ ಕಾಮನ್‌ ಸೆನ್ಸ್‌ ಇಲ್ಲ: ಆರ್.ಅಶೋಕ್ ವಾಗ್ದಾಳಿ
    • ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ
    • ಮೈಸೂರು ದಸರಾ: ಪ್ರತಿಭಟನೆ, ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 10 ರಾಷ್ಟ್ರೀಯ ಪ್ರಶಸ್ತಿ ವಿಜೇತ ಟಿ.ಎಸ್. ನಾಗಾಭರಣ ಅವರ ಸಿನಿಮಾ ಜರ್ನಿ..!!
    ರಾಜ್ಯ ಸುದ್ದಿ January 23, 2022

    10 ರಾಷ್ಟ್ರೀಯ ಪ್ರಶಸ್ತಿ ವಿಜೇತ ಟಿ.ಎಸ್. ನಾಗಾಭರಣ ಅವರ ಸಿನಿಮಾ ಜರ್ನಿ..!!

    By adminJanuary 23, 2022No Comments2 Mins Read
    ts nagabharana

    ಚಂದನವನದ ಸ್ಟಾರ್ ನಿರ್ದೇಶಕ ಕಂಟೆಂಟ್ ಸಿನಿಮಾಗಳ ಮಾಸ್ಟರ್ ಮೈಂಡ್ ಟಿ. ಎಸ್. ನಾಗಾಭರಣ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. 69 ವರ್ಷದ ನಟ ಹಾಗೂ ನಿರ್ದೇಶಕರಾದ ನಾಗಾಭರಣ ಅವರಿಗೆ ಗಣ್ಯರು , ಸಿನಿಮಾ ತಾರೆಯರು, ಆಪ್ತರು , ನೆಟ್ಟಿಗರು ಶುಭಾಷಯಗಳ ಮಹಾಪೂರ ಹರಿಸುತ್ತಿದ್ದಾರೆ.

    ಸುಮಾರು 36 ಸಿನಿಮಾಗಳನ್ನ ಮಾಡಿರುವ ನಾಗಾಭರಣ ಅವರು 10 ರಾಷ್ಟ್ರೀಯ ಪ್ರಶಸ್ತಿ , 23 ರಾಜ್ಯ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ..ಇವರ ಸಾರಥ್ಯದ 8 ಸಿನಿಮಾಗಳು ಪನೋರೋಮಾ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವಕ್ಕೆ ಪ್ರವೇಶ ಪಡೆದಿದ್ದವು.ಅಂದ್ಹಾಗೆ ಟಿ. ಎನ್ ನಾಗಾಭಾರಣ ಅಂದ್ರೆ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು ನಿರ್ದೇಶನದ ಜೊತೆಗೆ ನಟನೆ , ರಚನೆ ,ನಿರ್ಮಾಣ,  ರಂಗಮಂದಿರದಲ್ಲೂ ಗುರುತಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳನ್ನ ನಾಗಾಭರಣ ಅವರು ನಿರ್ಮಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿನ ಅನೇಕ ಕಾರ್ಯಕ್ರಮಳಿಗೂ ಬಂಡವಾಳ ಹೂಡಿದ್ದಾರೆ.


    Provided by
    Provided by
    Provided by

    ಇವರ ಜನುಮದ ಜೋಡಿ ಸಿನಿಮಾ ಅಂತು ಸೂಪರ್ ಹಿಟ್ ಆಗಿದ್ದು ಸುಮಾರು 1 ವರ್ಷ ಥಿಯೇಟರ್ ಯಶಸ್ವಿ ಪ್ರದರ್ಶನ ಕಂಡಿತ್ತು. ಅವರು ನಿರ್ದೇಶಿಸಿರುವ ಒಟ್ಟಾರೆ 36 ಸಿನಿಮಾಗಳ ಪೈಕಿ 18 ಸಿನಿಮಾಗಳಿಗೆ ಪ್ರತಿಷ್ಠಿತ  ಪ್ರಶಸ್ತಿಗಳು ಲಭಿಸಿವೆ. 4 ಮಕ್ಕಳ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. 7 ಬಾರಿ ಫಿಲ್ಮ್  ಫೇರ್ ಅವಾರ್ಡ್ ಗಳನ್ನ ಪಡೆದಿದ್ದಾರೆ. ಚಿನ್ನಾರಿ ಮುತ್ತ ಸಿನಿಮಾ ಕೂಡ ಇವರ ಸಿನಿಮಾಗಳ ಪೈಕಿ ದೊಡ್ಡ ಯಶಸ್ಸು ತಂದುಕೊಟ್ಟ , ಅವಾರ್ಡ್ ವಿನ್ನಿಂಗ್ ಸಿನಿಮಾಗಳ ಪೈಕಿ ಒಂದು..

    ಮೈಸೂರು ಮಲ್ಲಿಗೆ , ಚಿಗುರಿದ ಕನಸು , ನಾಗಮಂಡಲ, ಕಲ್ಲರಳಿ ಹೂವಾಗಿ ಅಂತಹ ಸಿನಿಮಾಗಳಿಗೆ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.  ಅಷ್ಟೇ ಅಲ್ಲ ಇವರ ಈ ಸಿನಿಮಾಗಳು ಬಾಲಿವುಡ್ ನಲ್ಲಿ ಬಂದ 1942 ಲವ್ ಸ್ಟೋರಿ , ಸ್ವದೇಶ್ , ಪಹೇಲಿ, ಭಜರಂಗಿ ಭಾಯ್ ಜನ್ ನಂತಹ ಸೂಪರ್ ಹಿಟ್ ಸಿನಿಮಾಗಳ ಸ್ಟೋರಿ ಲೈನ್ ಗೆ ಇನ್ಸಪಿರೇಷನ್ ಎನ್ನಲಾಗಿದೆ.

    ಸುಮಾರು 4 ದಶಕಗಳಿಂದ ನಾಗಾಭರಣ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ಧಾರೆ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.ಮೊದಲಿಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಾಗಾಭರಣ ಅವರು ಅನೇಕ ನಾಕಕಗಳನ್ನ ನಿರ್ದೇಶಿಸಿದ್ದಾರೆ, ನಟಿಸಿದ್ದಾರೆ.  ಸಂಗ್ಯಾ ಬಾಲ್ಯ, ಕಥಾಲೇ ಬೆಳಕು, ಶಕರಣ ಸಾರೋಟು, ಜೋಕುಮಾರಸ್ವಾಮಿಯಂತಹ ನಾಟಕಗಳಿಗೆ ಹೆಸರುವಾಸಿ.

    ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡ್ ನಿರ್ದೇಶನದ ಕಾಡು ಚಿತ್ರದ್ದಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತರ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ವಿದ್ಯಾರ್ಥಿಯಾಗಿ ಅವರು ತಮ್ಮ ಮೊದಲ ಚಲನಚಿತ್ರವನ್ನು ನಿರ್ದೇಶಿಸಿದರು, ಇದು 1979 ರ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ, ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಸಹ ನಾಗಾಭರಣ ಪಡೆದಿದ್ದಾರೆ.

    ನಾಗಾಭರಣ ಅವರು ತೆರೆಮರೆಯಲ್ಲಿಯೂ ಕೆಲಸ ಮಾಡಿದ್ದಾರೆ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಬಿ.ವಿ.ಕಾರಂತ್, ಚಂದ್ರಶೇಖರ ಕಂಬಾರ ಮತ್ತು ಗಿರೀಶ್ ಕಾರ್ನಾಡರಂತಹ ಪ್ರಮುಖ ರಂಗಕರ್ಮಿಗಳೊಂದಿಗೆ ನಾಗಾಭರಣ ಅವರು ಒಡನಾಟವನ್ನು ಹೊಂದಿದ್ದರು.ರಂಗಭೂಮಿಯಲ್ಲಿನ ಅವರ ಸಾಧನೆಗಾಗಿ ಅವರು ಭಾರತ ಸರ್ಕಾರದಿಂದ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಬೆನಕ ಎಂಬ ನಾಟಕ ಸಂಸ್ಥೆಯ ಸ್ಥಾಪಕರು ಆಗಿದ್ದಾರೆ.

    ಧಾರಾವಾಹಿಗಳು

    ಆನ್ ಇಂಡಿಯನ್ ಇನ್  ಅಮೆರಿಕಾ, ಸಹಸ್ರಪಾನ್, ತೆನಾಲಿ ರಾಮ ,  ಓ ನನ್ನ ಬೆಳಕೇ , ಗಾನಯೋಗಿ ಪಂಚಾಕ್ಷರಿ ನಂತಹ ಧಾರಾವಾಹಿಗಳನ್ನ ಮಾಡಿದ್ದಾರೆ.

    ಸಿನಿಮಾಗಳು

    ಗ್ರಹಣ , ಬಂಗಾರದ ಜಿಂಕೆ , ಅನ್ವೇಷಣೆ, ಪ್ರಾಯ ಪ್ರಾಯ ಪ್ರಾಯ , ಬ್ಯಾಂಕರ್ ಮರ್ ಗಯಾ, ಸೇಡಿನ ಸಂಚು , ಆಸ್ಫೋಟ , ಸಂತ ಶಿಶುನಾಳ ಶರೀಫ , ಪ್ರೇಮಯೋಗಿ , ಆಕಸ್ಮಿಕ ಇನ್ನೂ ಹೀಗೆ ಒಟ್ಟು 36 ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

     

    ನಟನೆ

    ಇನ್ನೂ ಆಕ್ಸಿಡೆಂಟ್ , ನೀಲ , ಮಿ. ಗರಗಸ, ಕಿರಾತಕ , ಕೆಜಿಎಫ್ , ಆದಿ ಶಂಕರಾಚಾರ್ಯ , ಉಪ್ಪಿನ ಕಾಗದ ,  ಜೈಲಲಿತಾ, ಕಂಸಾಲೆ ಕೈಸಾಲೆ, ವಸುಂಧರಾ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ವರದಿ: ಆಂಟೋನಿ ಬೇಗೂರು

     

    admin
    • Website

    Related Posts

    ರಾಹುಲ್‌ ಗಾಂಧಿ ಅವರಿಗೆ ಕಾಮನ್‌ ಸೆನ್ಸ್‌ ಇಲ್ಲ: ಆರ್.ಅಶೋಕ್ ವಾಗ್ದಾಳಿ

    September 19, 2025

    ಅಪ್ರಾಪ್ತ ಬಾಲಕಿ ಸಹಿತ 8 ಮಂದಿ ಮಹಿಳೆಯರ ಮೇಲೆ ಅತ್ಯಾಚಾರ: ಯೋಗ ಗುರು ಬಂಧನ

    September 18, 2025

    ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮತ್ತೆ ಎಸ್ ಐಟಿಯಿಂದ ಶೋಧ ಕಾರ್ಯ ಆರಂಭ

    September 17, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜಿಎಸ್ ಟಿ ದರ ಪರಿಷ್ಕರಣೆ: ಕೇಂದ್ರ ಸರ್ಕಾರ ತೆರಿಗೆ ಭಾರ ಇಳಿಸಿದೆ: ಸಚಿವ ವಿ.ಸೋಮಣ್ಣ

    September 19, 2025

    ತುಮಕೂರು: ಕೇಂದ್ರ ಸರ್ಕಾರ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ ಟಿ) ದರ ಪರಿಷ್ಕರಣೆ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ…

    ತುಮಕೂರು: ಕಲುಶಿತ ನೀರು ಸೇವನೆ: 12 ವಿದ್ಯಾರ್ಥಿನಿಯರು ಅಸ್ವಸ್ಥ

    September 19, 2025

    ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕಿದ ತಲೆಬುರುಡೆ ಕೇಸ್ ಗೆ ಟ್ವಿಸ್ಟ್

    September 19, 2025

    ಮನೆ ಬಾಗಿಲಿನಲ್ಲಿ ಸಿದ್ದರಾಮಯ್ಯ ಚಿತ್ರ ಕೆತ್ತಿಸಿದ ಮಹಿಳೆ

    September 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.