ಮಧುಗಿರಿ: ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ ಗೌಡ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಮಧುಗಿರಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ನಂತರ ಅಭಿಮಾನಿಗಳು 53 ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಕಾರ್ಯಕರ್ತರು 53 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ 53 ಕೆ.ಜಿ. ಕೇಕ್ ತಂದು ವಿಧಾನ ಪರಿಷತ್ ಶಾಸಕರ ಸಮ್ಮುಖದಲ್ಲಿ ಕತ್ತರಿಸಿ ಸಂಭ್ರಮಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಚಿದಾನಂದ ಗೌಡ್ರು, ನಿಮ್ಮ ಅಭಿಮಾನ ಪ್ರೀತಿಗೆ ಸದಾ ಋಣಿಯಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮಾಡಲು ನಿಮ್ಮೆಲ್ಲರ ಈ ಪ್ರೀತಿ ಅಭಿಮಾನ ಪ್ರೇರೇಪಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ದಲ್ಲಿ ಮಧುಗಿರಿ ಮಂಡಲ ಅಧ್ಯಕ್ಷರಾದ ಪಿ.ಎಲ್.ನರಸಿಂಹ ಮೂರ್ತಿ , ಮಂಡಲ ಪ್ರಧಾನ ಕಾರ್ಯದರ್ಶಿ ಸೀತಾರಾಮು, ಹಿರಿಯ ಮುಂಖಡರಾದ ನಾಗರಾಜಪ್ಪ, ಮಧುಗಿರಿ ವಿಭಾಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಯಣ್ಣ, ಕೊರಟಗೆರೆ ಮಂಡಲದ ಅಧ್ಯಕ್ಷರಾದ ಪವನ್ , ಪ್ರಧಾನ ಕಾರ್ಯದರ್ಶಿ ಗುರುದತ್, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ,, ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಮಂಡಲ ಕಾರ್ಯದರ್ಶಿ ಶಿವಕುಮಾರ್ ಹಾಗು ಕಲ್ಪನಾ ಗೋವಿಂದರಾಜು, ಮಂಡಲ ಮಹಿಳಾ ಮೋರ್ಚಾ ಆಧ್ಯಕ್ಷರಾದ ರತ್ನವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟತಾಯಮ್ಮ ಹಾಗು ರತ್ನಮ್ಮ, ಯುವ ಮೋರ್ಚಾ ಅಧ್ಯಕ್ಷರಾದ ಕಾರ್ತಿಕ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಗಳಾದ ತೇಜಸ್ ಗೌಡ ಹಾಗು ಗುರು ಪ್ರಸಾದ್, ಉಪಾಧ್ಯಕ್ಷರಾದ ಜಗನ್ನಾಥ, ಎಸ್.ಸಿ ಮೊರ್ಚಾ ಅಧ್ಯಕ್ಷರಾದ ರವಿ.ಆರ್, ಪ್ರಧಾನ ಕಾರ್ಯದರ್ಶಿ ರವಿ ಕೀರ್ತಿ ಹಾಗು ಸಿದ್ದಗಂಗಪ್ಪ, ರೈತ ಮೋರ್ಚಾ ಉಪಾಧ್ಯಕ್ಷರಾದ ಪುಟ್ಟಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಕೆ.ಗೋವಿಂದಪ್ಪ, ಎಸ್ಟಿ ಮೋರ್ಚಾ ಅಧ್ಯಕ್ಷರಾದ ಪ್ರಕಾಶ್, ಒಬಿಸಿ ಮೋರ್ಚಾ ಅಧ್ಯಕ್ಷ ಜಗದೀಶ್ ಅಚಾರ್, ಹೋಬಳಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಗಂಗಾಧರ್, ಜಿ.ಎಸ್.ಶಿವಶಂಕರ್, ವೇಂಕಟೇಶ್, ಬಗರುಕುಂ ಕಮಿಟಿ ನಾಮ ನಿರ್ದೇಶಿತ ಸದಸ್ಯರಾದ ಜಿ.ಹೆಚ್.ನಾರಾಯಣ, ಮುಖಂಡರಾದ ನವೀನ್ ಸೀತಾರಾಮ ನಾಯ್ಕ, ಅಶ್ವತ್ಥನಾರಯಣ್, ಶಿವಶಂಕರ್, ಮಂಜುನಾಥ್, ಹಿತೇಶ್, ಶ್ರೀರಾಜಣ್ಣ ರೆಡ್ಡಿಹಳ್ಳಿ, ಶರ್ಮ ಹಾಗು ಪದಾಧಿಕಾರಿಗಳು ಮತ್ತು ಕಾರ್ಯಕರ್ತರುಗಳು ಹಾಜರಿದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB