ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್ ರವರ ಇಚ್ಛಾಶಕ್ತಿಯ ಮೇರೆಗೆ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆಯಾದರೂ, ರಾಜೀವ ಗಾಂಧಿನಗರ ಮಾತ್ರ ಅದಕ್ಕೆ ಹೊರತಾಗಿದೆ. ವಿದ್ಯುತ್ ಪರಿವರ್ತಕಗಳು ಪದೆ ಪದೇ ಸುಟ್ಟು ಕರಕಲಾಗುತ್ತಿದ್ದು, ಸಮರ್ಪಕವಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ವಿದ್ಯುತ್ ಸರಬರಾಜು ಕಂಪನಿಯ ನಿರ್ವಹಣೆ ತೀರಾ ಕಳಪೆಯದ್ದಾಗಿದ್ದು, ನಿರ್ಲಕ್ಷ್ಯ ಧೋರಣೆ ತಾಳಲಾಗಿದೆ ಎಂದು ರೈತ ಮುಖಂಡ ಕಾಲ್ಚಟ್ಟಿ ಕೃಷ್ಣಪ್ಪ ಹಾಗೂ ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ದೂರಿದ್ದಾರೆ.
ಕಳೆದ ತಿಂಗಳಿಂದ ನಿರಂತರವಾಗಿ ವಿದ್ಯುತ್ ಕೊರತೆ ಕಾಡುತ್ತಿದೆ , ವರ್ಷದ ಹಿಂದೆ ಜಿಲ್ಲಾಧಿಕಾರಿಗಳು ಜನಸ್ಪಂದನ ಸಂದರ್ಭದಲ್ಲಿ ಬಂದಿದ್ದರು. ಪರಿಶೀಲಿಸಿದರು ಅಹವಾಲು ಆಲಿಸಿದರು ಹೋದರು. ಆದರೆ ದುಸ್ಥಿತಿ ಸಂಪೂರ್ಣ ಸುಧಾರಿಸಿಲ್ಲ , ಪಟ್ಟಣ ಪಂಚಾಯ್ತಿಯಿಂದ ನಿರಂತರ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ, ಆರಂಭಗೊಂಡ ಮಿನಿ ಪೊಲೀಸ್ ಠಾಣೆ ಆರೋಗ್ಯ ಕೇಂದ್ರಗಳು. ಹಲವು ವರ್ಷಗಳಿಂದ ತ್ಯಾಜ್ಯವಸ್ತುಗಳ ಗೋದಾಮಾಗಿದ್ದು, ಶೀಘ್ರವೇ ಪುನಃ ಆರಂಭಿಸಬೇಕಿದೆ. ಪೊಲೀಸ್ ಠಾಣೆ ಹಾಗೂ ಸಾರ್ವಜನಿಕೆ ಆಸ್ಪತ್ರೆಗಳು , ಸುಮಾರು ಒಂದೂವರಿಗೆ ಕಿ.ಮೀ. ದೂರದಲ್ಲಿವೆ. ತುರ್ತಾಗಿ ಒದಗಬೇಕಿರುವ ಅತ್ಯಗತ್ಯ ಸೇವೆಗಳು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಕಾಳಜಿ ತೋರಬೇಕಿದೆ. ನಗರದಲ್ಲಿ ನೈರ್ಮಲ್ಯತೆ ಕಾಪಾಡಬೇಕು , ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಶೀಘ್ರವೇ ಒದಗಿಸಬೇಕೆಂದು ರಾಜೀವ ಗಾಂಧಿನಗರವಾಸಿಗಳು ಕೋರಿದ್ದಾರೆ.
ಪಟ್ಟಣ ಪಂಚಾಯ್ತಿಯಿಂದ ನಿರ್ಲಕ್ಷ್ಯ ಧೋರಣೆ ವ್ಯಕ್ತವಾಗುತ್ತಿದ್ದು, ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಹಾಗೂ ಜೆಸ್ಕಾಂ ಸಂಸ್ಥೆಯ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು. ರಾಜೀವ ಗಾಂಧಿನಗರದ ಸಾರ್ವಜನಿಕರು ಹಾಗೂ ನಾಗರೀಕರು ಹೋರಾಟಗಾರರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ಹಾಗೂ ದಲಿತ ಮುಖಂಡರಾದ , ಅಮ್ಮನಕೇರಿ ತಿಪ್ಪೇಸ್ವಾಮಿ, ಜಿಂಕಲರ ನಾಗೇಶ, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ಉಪ್ಪಾರ ರಾಘವೇಂದ್ರ, ಮೌನಾಚಾರಿ ಸೇರಿದಂತೆ, ರೈತ ಮುಖಂಡರು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು, ದಲಿತ ಪರ ಹಾಗೂ ಕನ್ನಡ ಪರ ಸಂಘಟನೆಗಳು. ವಿವಿಧ ಸಮಾಜಗಳ ಮುಖಂಡರು, ಯುವಕರು, ಹಿರಿಯರು ರೈತರು ಉಪಸ್ಥಿತರಿದ್ದರು.
ವರದಿ: ವಿ.ಜಿ.ವೃಷಭೇಂದ್ರ, ಕೂಡ್ಲಿಗಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW