ತುಮಕೂರು: ಫೋಟೋ ಶೂಟ್ ವಿಚಾರಕ್ಕೆ ಪ್ರಿಯಕರನ ಜೊತೆ ಜಗಳದ ಬಳಿಕ ಯುವತಿ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ನಡೆದಿದೆ.
ಚೈತನ್ಯ(22) ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆ ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾಗಿದ್ದು, ನಿನ್ನೆ ರಾತ್ರಿ 10 ಘಂಟೆ ಸುಮಾರಿಗೆ ತನ್ನ ಪ್ರಿಯಕರನ ಜೊತೆಗೆ ಜಗಳವಾಡಿದ ನಂತರ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ತಾಯಿ ಜೊತೆ ವಾಸವಿದ್ದ ಚೈತನ್ಯ, ತುಮಕೂರಿನ ಎಸ್ ಎಸ್ ಐಟಿ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಜೊತೆಗೆ ಮಾಡಲಿಂಗ್ ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಈ ನಡುವೆ ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನೊಂದಿಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇವರ ನಡುವೆ ಪ್ರೀತಿಯಿತ್ತು. ಪ್ರೀತಿಯ ವಿಚಾರ ತಿಳಿದು ಯುವತಿ ಮನೆಯವರು ವಾರ್ನ್ ಕೂಡ ಮಾಡಿದ್ದರು ಎನ್ನಲಾಗಿದೆ.
ಚೈತನ್ಯ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮಾಡಿಸಿದ್ದರು. ಬಳಿಕ ಮನೆಗೆ ಹೋಗಿ ತಾಯಿಯೊಂದಿಗೆ ಊಟ ಮಾಡಿದ್ದಳು. 8:30 ರ ಬಳಿಕ ತಾಯಿ ರೂಮಿಗೆ ಹೋಗಿ ಮಲಗಿದ್ದರು. ನಂತರ ಫೋಟೋಗ್ರಾಫಿ ಮಾಡಿಸಿದ್ದ ವಿಚಾರಕ್ಕೆ ವಿಜಯ್ ಹಾಗೂ ಚೈತನ್ಯ ನಡುವೆ ಜಗಳವಾಗಿದೆ ಬಳಿಕ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆ ಬಳಿಕ ಚೈತನ್ಯ ಅತ್ತೆ ಪ್ರಭಾವತಿ ಗೆ ಕರೆ ಮಾಡಿದ್ದ ವಿಜಯ್ ಕುಮಾರ್, ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ಪ್ರಭಾವತಿ ಚೈತನ್ಯ ಮನೆಯ ಬಳಿ ಬಂದಾಗ ಮನೆಯ ಡೋರ್ ಲಾಕ್ ಆಗಿತ್ತು. ವಿಜಯ್ ಕೂಡ ಮನೆಯ ಬಳಿ ಇದ್ದ ಬಳಿಕ ಕಬ್ಬಿಣದ ಸಲಾಕೆಯಿಂದ ಬೀಗ ಹೊಡೆದು ಸ್ವತಃ ವಿಜಯ್ ಮನೆಯ ಬಾಗಿಲು ತೆರೆದಿದ್ದ ನಂತರ ವಿಜಯ್ ಅಲ್ಲಿಂದ ಪರಾರಿಯಾಗಿದ್ದ.
ವಿಜಯ್ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಚೈತನ್ಯ ಅವರ ಅಂಗಡಿಗೆ ಆಗಾಗ ಬರುತ್ತಿದ್ದ ಎನ್ನಲಾಗಿದೆ. ಚೈತನ್ಯಳ ತಂದೆ ಆಕೆಗೆ 9 ತಿಂಗಳಿದ್ದಾಗಲೇ ತೀರಿಕೊಂಡಿದ್ದರು. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿ ಮಲಗಿದ್ದ ರೂಮಿನ ಚಿಲಕ ಹಾಕಿದ್ದ ಚೈತನ್ಯ ಬಳಿಕ ಸಾವಿಗೆ ಶರಣಾಗಿದ್ದಾಳೆ.
ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ್ ಕುಮಾರ್ ನನ್ನ ಮಗಳ ಸಾವಿಗೆ ಕಾರಣ ಎಂದು ಚೈತನ್ಯ ತಾಯಿ ಸೌಭಾಗ್ಯಮ್ಮ ದೂರು ನೀಡಿದ್ದಾರೆ. ತಾಯಿಯ ದೂರಿನನ್ವಯ ವಿಜಯ್ ಕುಮಾರ್ ನ ವಶಕ್ಕೆ ಪಡೆದಿರುವ ತುಮಕೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಚೈತನ್ಯ ಆತ್ಮಹತ್ಯೆಗೆ ನೈಜ್ಯ ಕಾರಣ ತಿಳಿದು ಬರಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW