ತುಮಕೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಎಗ್ಗಿಲ್ಲದೆ ಲಂಚಾವತಾರ ನಡೆಯುತ್ತಿದೆ, ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚದ ಕರ್ಮಕಾಂಡ ಕೆಡಿಪಿ ಸಭೆಯಲ್ಲಿ ಬಟಾಬಯಲಾಗಿದೆ.
ಜಿಲ್ಲಾಸ್ಪತ್ರೆಯ ಕರ್ಮಕಾಂಡಕ್ಕೆ ಕೆಡಿಪಿ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಕೆರಳಿ ಕೆಂಡವಾಗಿದ್ದು, ಹೆರಿಗೆ ಮಾಡಿಸೋಕೆ ಜಿಲ್ಲಾಸ್ಪತ್ರೆಯಲ್ಲಿ ದುಡ್ಡು ತಗೊಳೋದು ನಂಗೆ ಗೊತ್ತಿಲ್ಲವೇನ್ರೀ.. ಎಂದು ಅಧಿಕಾರಿಗಳಿಗೆ ಜೋರು ಧ್ವನಿಯಲ್ಲಿ ಸಚಿವ ಡಾ.ಜಿ. ಪರಮೇಶ್ವರ್ ಗದರಿದರು. ಬಳಿಕ ಡಿಎಚ್ ಒ ಚಂದ್ರಶೇಖರ್ ಹಾಗೂ ಡಿಎಸ್ ಅಸ್ಗರ್ ಬೇಗ್ ಅವರಿಗೆ ತೀವ್ರವಾಗಿ ತರಾಟೆಗೆತ್ತಿಕೊಂಡು ಚಳಿ ಬಿಡಿಸಿದರು.
ಪರಮೇಶ್ವರ್ ಬೆನ್ನಲ್ಲೇ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಹಣ ಪಡೆಯುತ್ತಿರುವುದು ಒಂದಡೆಯಾದರೆ ಉಳಿದ ಕರ್ಮಕಾಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಹೆರಿಗೆಯಲ್ಲಿ ಶಸ್ತ್ರಚಿಕಿತ್ಸೆಯೇ ಹೆಚ್ಚಾಗಿ ನಡೆಯುತ್ತಿದೆ, ತುಮಕೂರು ನಂ-1 ಸ್ಥಾನದಲ್ಲಿದೆ. ಯಾಕೆ ನಾರ್ಮಲ್ ಹೆರಿಗೆ ಮಾಡುತ್ತಿಲ್ಲ, ಎಲ್ಲವನ್ನೂ ಸಿಜರಿಯನ್ನೇ ಮಾಡುತ್ತಿದ್ದೀರಾ? ಖಾಸಗಿ ಆಸ್ಪತ್ರೆಗಳಲ್ಲಿ ಸಿಜರಿಯನ್ ಹೆಚ್ಚಾಗಿದ್ರು ಕಡಿವಾಣ ಯಾಕೆ ಹಾಕ್ತಿಲ್ಲ? ಖಾಸಗಿ ಆಸ್ಪತ್ರೆಗಳ ದರ್ಬಾರ್ ಗೆ ಕಡಿವಾಣ ಹಾಕುವಲ್ಲಿ ಯಾಕೆ ನಿರ್ಲಕ್ಷ್ಯ ಮಾಡ್ತಿದ್ದೀರಿ ಎಂದು ಪರಮೇಶ್ವರ್ ಪ್ರಶ್ನಿಸಿದರು. ಪರಂ ಪ್ರಶ್ನೆಗಳಿಗೆ ಡಿಎಸ್. ಡಿಎಚ್ ಒ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಈ ವೇಳೆ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವೂ ಹೆಚ್ಚಳವಿದೆ ಎಂದು ಸುರೇಶ್ ಬಾಬು ಧ್ವನಿಗೂಡಿಸಿದರು.
ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ 28748 ಹೆರಿಗೆಯಾಗಿವೆ, ಒಟ್ಟು ಹೆರಿಗೆಯಲ್ಲಿ 19328 ಸಿಜರಿಯನ್ ಹೆರಿಗೆಯಾಗಿವೆ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW